ನಕಲಿ ಪದವಿ ಸರ್ಟಿಫಿಕೇಟ್‌ಗಳಿಂದ ಸರಕಾರಿ ಉದ್ಯೋಗಳ ಕಬಳಿಕೆ; ಅರ್ಹರಿಗೆ ಅನ್ಯಾಯವೇಕೆ?

Upayuktha
0


ರ್ಯಾಣ, ಬಿಹಾರ, ಉತ್ತರಪ್ರದೇಶ, ಪಂಜಾಬ್ ಸಹಿತ ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ನಕಲಿ ಪದವಿ ಸರ್ಟಿಫಿಕೇಟ್ ಸೃಷ್ಟಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಉದ್ಯೋಗಗಳನ್ನು ಕಬಳಿಸುವ ಜಾಲ ನಿರಾಯಾಸವಾಗಿ ನಡೆಯುತ್ತಿದೆ.


ಮೂಲತಃ ಹರ್ಯಾಣದವನಾದ, ಜನ್ಮದಾರಭ್ಯ ಕಡುಬಡತನದಲ್ಲೇ ಬೆಳೆದ ಆದರೆ ತನ್ನ ಪ್ರತಿಭೆಯಿಂದ ಮಂಗಳೂರಿನ NITk ಯಲ್ಲಿ ಅವಕಾಶ ಪಡೆದು MTech ಪದವಿ ಪಡೆದ ಯುವಕನೊಬ್ಬ ಇತ್ತೀಚೆಗಷ್ಟೆ ತನ್ನ ಅಧ್ಯಯನ ಮುಗಿಸಿ ಸ್ವಂತ ಗ್ರಾಮಕ್ಕೆ ಮರಳಿದ.‌ ಅಲ್ಲಿ 4-5 ತಿಂಗಳಲ್ಲಿ ಆತ ಕಂಡ ಕರಾಳ ದೃಶ್ಯಗಳಿಂದ ನಿಂತ ಭೂಮಿಯೇ ಕುಸಿದಷ್ಟು ಮರ್ಮಾಘಾತವನ್ನು ಆತ ಅನುಭವಿಸುತ್ತಿರುವುದನ್ನು ಬಹಳ ದುಃಖದಿಂದ ನನ್ನೊಂದಿಗೆ ಹಂಚಿಕೊಂಡಿ ದ್ದಾನೆ. ಯಾಕಾದ್ರೂ ತಾನು ಒಳ್ಳೆಯ ವಿದ್ಯೆ ಕಲಿಯುವ ಕನಸು ಕಂಡು ಇಷ್ಟು ವರ್ಷ ಅದಕ್ಕಾಗಿ ಕಷ್ಟಪಟ್ಟನೋ ಎಂಬ ಅಪರಾಧಿ ಪ್ರಜ್ಞೆಯ ವೇದನೆ ಅನುಭವಿಸುತ್ತಾ ಅಕ್ಷರಶಃ ಕಂಗಾಲಾಗಿದ್ದಾನೆ.


ಕಾರಣ ಇಷ್ಟೆ, ಅಲ್ಲಿ ಕಾಣುತ್ತಿರುವ ಕೇಳುತ್ತಿರುವ ನಕಲಿ ಪದವಿ ಸ್ನಾತಕೋತ್ತರ ಪದವಿ ಪತ್ರಗಳ ದಂಧೆಗಳು..! ಯಾವ ಆತಂಕವೂ ಇಲ್ಲದೇ ಯಾರ ಭಯವೂ ಇಲ್ಲದೇ ಸರ್ಕಾರಿ ವ್ಯವಸ್ಥೆಗಳ ಪೂರ್ಣ ಕೃಪೆ ಹಾಗೂ ಸಹಕಾರದೊಂದಿಗೇ ನಡೆಯುತ್ತಿರುವ ಈ ಕರಾಳ ದಂಧೆಯನ್ನು ಕಂಡು ಅಕ್ಷರಶಃ ಕಂಗಾಲಾಗಿ ಬಿಟ್ಟಿದ್ದಾನೆ. ತನ್ನ ಬಾಲ್ಯ ಸ್ನೇಹಿತರು, ತನ್ನೂರಿನ ಯುವಕರು ಯಾವ ಕಷ್ಟವೂ ಶ್ರಮವೂ ಅಧ್ಯಯನವೂ ಇಲ್ಲದೇ ನಿಃಶುಲ್ಕವಾಗಿ ಪದವಿ ಗಿಟ್ಟಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಹುದ್ದೆಗಳನ್ನು ಬಾಚಿಕೊಳ್ಳುತ್ತಿರುವುದನ್ನು ಕಂಡು ಆತನಿಗೆ ಈತನಕ ಇದ್ದ ಎಲ್ಲ ಭರವಸೆ ಕನಸು ಆತ್ಮವಿಶ್ವಾಸ, ಜೀವನೋತ್ಸಾಹಗಳೆಲ್ಲ ಬತ್ತಿಹೋಗಿ ಜೀವನವೇ ಬೇಡ ಎಂಬಷ್ಟು ದುಃಖದ ಕೂಪಕ್ಕೆ ಬಿದ್ದು ನರಳಲಾರಂಭಿಸಿದ್ದಾನೆ.


ತನ್ನ‌ಪದವಿಯ ಬಳಿಕ ಮಂಗಳೂರಿನ NITK ಯಲ್ಲಿ MTech ಮಾಡಲು ಅವಕಾಶ ಸಿಕ್ಕಾಗ ಸ್ವರ್ಗಕ್ಕೆ ಮೂರೇ ಗೇಣು ಎಂಬಂತಾಗಿತ್ತು ಅವನ ಸಂತೋಷ.‌ ಆದರೂ ತನ್ನ ಮನೆಯ ಕಡುಬಡತನ‌, ಅಷ್ಟೇನೂ ಆರೋಗ್ಯ ಸರಿ ಇಲ್ಲದ ತಾಯಿ, ನಿರುದ್ಯೋಗಿಯಾದ ಸಹೋದರ, ಗುಡಿಸಲಿನಂಥ ತಿಉರ ಚಿಕ್ಕ ಜೋಪಡಿಯಿಂದ ಹೊರಟು ತಾನು ಕಲಿತು ಒಳ್ಳೆಯ ಉದ್ಯೋಗ ಪಡೆದು ತನ್ನ ಕುಟುಂಬ ಜೀವನವನ್ನು ಉದ್ಧರಿಸುತ್ತೇನೆಂದು ಕನಸು ಕಂಡ ಈತ ಈಗ ಆ ರಾಜ್ಯಗಳಲ್ಲಿ ನಡೆಯುತ್ತಿರುವ ಈ ಬ್ರಹ್ಮಾಂಡ ಭ್ರಷ್ಟಾಚಾರಗಳನ್ನು ಕಂಡು ಬೆಚ್ಚಿಬಿದ್ದಿದ್ದಾನೆ. ಕಷ್ಟಪಡದೇ ಬೇರೆ ಯುವಕರಿಗೆ ದೊಡ್ಡ ದೊಡ್ಡ ಸರ್ಕಾರಿ ನೌಕರಿ ಸಿಗುತ್ತಿದೆ ಎಂಬ ಮತ್ಸರದಿಂದಲ್ಲ‌; ತಾನು ಅಥವಾ ತನ್ನಂಥ ಸಾವಿರಾರು ಕಡುಬಡತನದ ಯುವಕರು ಯಾಕಾದರೂ ಈ ದೇಶದಲ್ಲಿ ಕಲೀಬೇಕು? ಏನು ಸಾಧನೆ? ಇಂಥ ಕಠೋರ ವ್ಯವಸ್ಥೆಗಳ ಎದುರು ನಮ್ಮಂಥವರಿಗೆ ಏನು ಭರವಸೆ ಇದೆ ಈ ನೆಲದಲ್ಲಿ ಎಂದು ಒಂದೇ ಸವನೆ ಅವಲತ್ತುಕೊಳ್ಳ ಲಾರಂಭಿಸಿದ್ದಾನೆ ಆತ.

 

ಆತ್ಮನಿರ್ಭರ ಭಾರತ ವಿಶ್ವ ಶಕ್ತಿ ಭಾರತ ಸ್ವಾಭಿಮಾನಿ ಭಾರತ ಬಡತನ ಮುಕ್ತ ಭಾರತ ಮುಂತಾದ ಸಾವಿರ ಮಾತುಗಳನ್ನು ಆಡಳಿತ ನಡೆಸುವವರ ಕಡೆಯಿಂದ ನಿತ್ಯ ಕೇಳ್ತೇವೆ. ಆದರೆ ವ್ಯವಸ್ಥೆಯ ಒಳಕ್ಕೆ ನಿಜಕ್ಕೂ ನಡೆಯುತ್ತಿರುವ ಇಂಥ ಅಧ್ವಾನಗಳ ಅಂತ್ಯವಾಗದೇ ಇದೆಲ್ಲ ಸಾಧ್ಯವೇ? ಎಂಬ ಪ್ರಶ್ನೆಗೆ ನಮ್ಮನ್ನಾಳುವವರೇ ಉತ್ತರಿಸಬೇಕಷ್ಟೆ.

ಸಬ್ ಕೋ ಸನ್ಮತಿ ದೇ ಭಗವಾನ್


- ಜಿ ವಾಸುದೇವ ಭಟ್ ಪೆರಂಪಳ್ಳಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top