ವಿಜಯನಗರ: ತುಂಗಭದ್ರ ಬಲದಂಡೆಯ ಮೇಲ್ಮಟ್ಟದ ಕಾಲುವೆಗೆ ನೀರು ಬಿಡುಗಡೆ

Upayuktha
0


ವಿಜಯನಗರ:
ತುಂಗಭದ್ರ ಜಲಾಶಯದಲ್ಲಿ 83.249 ಟಿ.ಎಂ.ಸಿ.ನೀರು ಶೇಖರಣೆಯಾಗಿದ್ದು, ಜಲಾಶಯಕ್ಕೆ 1,14,149 ಕ್ಯೂಸೆಕ್  ನೀರು ಹರಿದು ಬರುತ್ತಿವೆ. ಇನ್ನು 02 ದಿನಗಳಲ್ಲಿ ಜಲಾಶಯವು ತುಂಬಲಿದೆ. 


ದಿನಾಂಕ:19.07.2024 ರಂದು ತುಂಗಭದ್ರ ಬಲದಂಡೆಯ ಕೆಳಮಟ್ಟದ ಕಾಲುವೆಗೆ ಮತ್ತು ಎಡದಂಡೆಯ ಮುಖ್ಯ ಕಾಲುವೆಗೆ ನೀರು ಬಿಡಲಾಗಿದೆ.


ದಿನಾಂಕ : 21.07.2024 ರಂದು ಸಂಜೆಯಿಂದ ತುಂಗಭದ್ರ ನದಿಗೆ ನೀರು ಬಿಡಲು ಆರಂಭಿಸಿರುತ್ತಾರೆ.


ದಿನಾಂಕ : 24.07.2024ಕ್ಕೆ ತುಂಗಭದ್ರ ಜಲಾಶಯವು ತುಂಬಿ, ಎಲ್ಲಾ ಗೇಟುಗಳನ್ನು ಎತ್ತಿ ನದಿಗೆ ನೀರನ್ನು ಬಿಡಲಾಗುವುದು ಮತ್ತು ನದಿಯ ದಡದಲ್ಲಿ ವಾಸಿಸುವ ಎಲ್ಲಾ ರೈತಮಿತ್ರರು, ಸಾರ್ವಜನಿಕರು, ಸುರಕ್ಷಿತ ಸ್ಥಾನಗಳಿಗೆ ತಲುಪಲು ಸಿದ್ಧರಾಗಬೇಕೆಂದು ತುಂಗಭದ್ರ ಟಿ.ಬಿ.ಡ್ಯಾಂನ ಅಧಿಕಾರಿಗಳು ವಿನಂತಿಸುತ್ತಾರೆ


ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಜಂಟಿ ಕಾಲಿವೆಯಾಗಿರುವ ತುಂಗಭದ್ರ ಬಲದಂಡೆಯ ಮೇಲ್ಮಟ್ಟದ ಕಾಲುವೆಗೆ 

ದಿನಾಂಕ :22.07.2024 ರಂದು ಬೆಳಿಗ್ಗೆ : 09:30 ಗಂಟೆಗೆ ತುಂಗಭದ್ರ ಮಂಡಳಿಯ ಮುಖ್ಯ ಕಾರ್ಯದರ್ಶಿಗಳಾದ ಓ.ಆರ್.ಕೆ.ರೆಡ್ಡಿ ಇವರು ಪೂಜೆ ಸಲ್ಲಿಸಿ ಕಾಲುವೆಗೆ ನೀರನ್ನು ಬಿಟ್ಟಿದ್ದಾರೆ.


ತುಂಗಭದ್ರ ಮಂಡಳಿಯ ಸುಪ್ರಿಂಟೆಂಡೆಂಟ್ ಇಂಜಿನಿಯರ್  ಶ್ರೀಕಾಂತ್‌ರೆಡ್ಡಿ, ಎಕ್ಸಿಕ್ಯೂಟಿ ಇಂಜಿನಿಯರ್ ರವಿಚಂದ್ರ, ಸಬ್ ಡಿವಿಜನ್ ಅಧಿಕಾರಿಗಳಾದಗೋಪಿ ಹಾಗೂ ಗಣೇಶ್ ಮತ್ತು ಕೃಷ್ಣಮೂರ್ತಿ ಮತ್ತು ಸೆಕ್ಷನ್ ಆಫೀಸರ್  ರಾಘವೇಂದ್ರ ಇವರೆಲ್ಲರೊಂದಿಗೂ ತುಂಗಭದ್ರ ರೈತ ಸಂಘವು ಪೂಜೆಯಲ್ಲಿ ಭಾಗವಹಿಸಿದ್ದರು.


ಅಮೃತ ಕಾಲಕ್ಕಾಗಿ ಸರ್ಕಾರವು ತನ್ನ ಬೆಳವಣಿಗೆಯ ಕಾರ್ಯತಂತ್ರವನ್ನು ಆರ್ಥಿಕ ಸಮೀಕ್ಷೆಯಲ್ಲಿ ಅನಾವರಣಗೊಳಿಸಿದೆ. ಆರ್ಥಿಕ ಪ್ರಗತಿ ಮತ್ತು ಸುಸ್ಥಿರತೆಯನ್ನು ಹೆಚ್ಚಿಸಲು ಆರು ನಿರ್ಣಾಯಕ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಿದೆ. ಖಾಸಗಿ ಹೂಡಿಕೆಯನ್ನು ಉತ್ತೇಜಿಸುವುದು, ಎಂಎಸ್‌ಎಂಇಗಳನ್ನು ವಿಸ್ತರಿಸುವುದು, ಬೆಳವಣಿಗೆಯ ಎಂಜಿನ್‌ ಆಗಿ ಕೃಷಿ, ಹಸಿರು ಪರಿವರ್ತನೆಯ ಹಣಕಾಸು, ಶಿಕ್ಷಣ-ಉದ್ಯೋಗದ ಅಂತರ ನಿವಾರಣೆ, ರಾಜ್ಯದ ಸಾಮರ್ಥ್ಯ ನಿರ್ಮಿಸುವುದು, ನಿರ್ವಹಿಸುವುದರ ಕಡೆಗೆ ಗಮನಹರಿಸುವುದು.


ಆಹಾರ ಹಣದುಬ್ಬರವು ಕಳೆದ ಎರಡು ವರ್ಷಗಳಲ್ಲಿ ಜಾಗತಿಕ ಕಾಳಜಿಯಾಗಿದೆ. ಭಾರತದಲ್ಲಿ, ಹವಾಮಾನ ವೈಪರೀತ್ಯಗಳು, ಖಾಲಿಯಾದ ಜಲಾಶಯಗಳು ಮತ್ತು ಬೆಳೆ ಹಾನಿಯಿಂದಾಗಿ ಕೃಷಿ ವಲಯವು ಸವಾಲುಗಳನ್ನು ಎದುರಿಸಿತು. 


ಇದು ಕೃಷಿ ಉತ್ಪಾದನೆ ಮತ್ತು ಆಹಾರ ಬೆಲೆಗಳ ಮೇಲೆ ಪರಿಣಾಮ ಬೀರಿತು. ಪರಿಣಾಮವಾಗಿ, ಆಹಾರ ಹಣದುಬ್ಬರವು 2023 ರಲ್ಲಿ 6.6 ಶೇಕಡಾ ಮತ್ತು 2024 ರಲ್ಲಿ 7.5 ಶೇಕಡಾಕ್ಕೆ ಏರಿತು. ಕೃಷಿ ವಲಯವು ಕಳೆದ ಐದು ವರ್ಷಗಳಲ್ಲಿ ಸ್ಥಿರ ಬೆಲೆಯಲ್ಲಿ ಶೇಕಡ 4.18 ರ ಸರಾಸರಿ ವಾರ್ಷಿಕ ಬೆಳವಣಿಗೆಯ ದರವನ್ನು ದಾಖಲಿಸಿದೆ. 


2023-24 ರ ತಾತ್ಕಾಲಿಕ ಅಂದಾಜಿನ ಪ್ರಕಾರ, ಕೃಷಿ ಕ್ಷೇತ್ರದ ಬೆಳವಣಿಗೆ ದರವು ಸ್ಥಿರ ಬೆಲೆಗಳಲ್ಲಿ 1.4 ಶೇಕಡ ಇತ್ತು. ನಿರೀಕ್ಷೆಗಳು ಖರ್ಚು ಮಾಡಬಹುದಾದ ಆದಾಯವನ್ನು ಹೆಚ್ಚಿಸಲು ಮತ್ತು ಗ್ರಾಹಕರ ಖರ್ಚು ಮಾಡುವ ಸಾಮರ್ಥ್ಯವನ್ನು ಉತ್ತೇಜಿಸಲು ಆದಾಯ ತೆರಿಗೆ ಸ್ಲ್ಯಾಬ್‌ಗಳನ್ನು ಪರಿಷ್ಕರಿಸುವ ಜೊತೆಗೆ ಆದಾಯ ತೆರಿಗೆ ದರಗಳನ್ನು ತರ್ಕಬದ್ಧಗೊಳಿಸುವ ನಿರೀಕ್ಷೆಯಲ್ಲಿದ್ದಾರೆ ಬಹುತೇಕರು. ಆದಾಗ್ಯೂ, ಹಳೆಯ ತೆರಿಗೆ ಪದ್ಧತಿಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುವುದು ಅಸಂಭವ ಎನ್ನಲಾಗುತ್ತಿದೆ.


ತೆರಿಗೆ ರಚನೆಯನ್ನು ಸರಳಗೊಳಿಸುವ ಮತ್ತು ಅನುಸರಣೆಯನ್ನು ಹೆಚ್ಚಿಸುವ ಸರ್ಕಾರದ ನಿರೀಕ್ಷಿತ ಗಮನವು ಎಸ್‌ಎಂಇಗಳಿಗೆ ಕಡಿಮೆ ಕಾರ್ಪೊರೇಟ್ ತೆರಿಗೆ ದರಗಳು, ಕೌಶಲ್ಯ ಅಭಿವೃದ್ಧಿಗೆ ಪ್ರೋತ್ಸಾಹ ಮತ್ತು ಡಿಜಿಟಲ್ ಮೂಲಸೌಕರ್ಯ ಹೂಡಿಕೆ ಮುಂತಾದ ಉಪಕ್ರಮಗಳನ್ನು ಒಳಗೊಂಡಿರಬಹುದು ಎಂಬ ನಿರೀಕ್ಷೆ ಇದೆ.


ತೆರಿಗೆ ಪ್ರಯೋಜನಗಳಲ್ಲಿ ಪರಿಷ್ಕರಣೆಗಳಿಗಾಗಿ ಇಡೀ ರಾಷ್ಟ್ರ ಕುತೂಹಲದಿಂದ ಕಾಯುತ್ತಿದೆ. ಮಧ್ಯಮ ಮತ್ತು ಕಡಿಮೆ- ಆದಾಯದ ಗುಂಪುಗಳಲ್ಲಿ ವಿಶೇಷವಾಗಿ ವೇತನದಾರರಲ್ಲಿ ಈ ನಿರೀಕ್ಷೆ ಹೆಚ್ಚು. ಈ ವಿಭಾಗದ ಜನರು ಹೆಚ್ಚು ಆರ್ಥಿಕ ಏರಿಳಿತಗಳನ್ನು ಅನುಭವಿಸುತ್ತಿರುವುದು ಇದಕ್ಕೆ ಕಾರಣ. ಇವರ ಮೇಲಿನ ಹೊರೆಯನ್ನು ಸರಾಗಗೊಳಿಸುವ ಉದ್ದೇಶದಿಂದ ಸರ್ಕಾರವು ಆದಾಯ ತೆರಿಗೆ ಸ್ಲ್ಯಾಬ್‌ಗಳ ವಿಚಾರಕ್ಕೆ ಆದ್ಯತೆ ನೀಡಬಹುದು ಎಂದು ಹೇಳಲಾಗುತ್ತಿದೆ.


ಶಿಕ್ಷಣ ಕ್ಷೇತ್ರ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಅಡಿಪಾಯವಾಗಿದೆ. ಈ ದೃಷ್ಟಿಯಿಂದ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತುಕೊಡುವುದು ಅನಿವಾರ್ಯವಾಗಿದೆ. ಮಾನವ ಶಕ್ತಿಯ ಉಪಯೋಗ, ಉದ್ಯೋಗವಕಾಶ ಮತ್ತು ಉತ್ಪಾದನೆಯಲ್ಲಿ ಹೆಚ್ಚಳಕ್ಕೆ ಇದು ಕಾರಣವಾಗಲಿದೆ. ಈ ನಿಟ್ಟಿನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಡಬೇಕಿರುವುದು ಅಗತ್ಯ.


ನವೋದ್ಯಮಗಳ ತಲೆ ಎತ್ತುತ್ತಿವೆ, ಇದರೊಂದಿಗೆ ಕೊನೆಗೊಳ್ಳುತ್ತಿರುವ ಉದ್ಯಮಗಳ ಸಂಖ್ಯೆಯೂ ಕಡಿಮೆ ಇಲ್ಲ. ಹೊಸ ಉದ್ಯಮಗಳ ಬೆಳವಣಿಗೆಗೆ ಸರ್ಕಾರದ ಅಗತ್ಯ ನೆರವು ಬೇಕು. ಈ ಬಾರಿಯ ಬಜೆಟ್‌ ನವೋದ್ಯಮ ಹಾಗೂ ಉದ್ಯಮ ಸ್ನೇಹಿಯಾಗುವ ನಿರೀಕ್ಷೆ ಇದೆ. 


ವಿಕಸಿತ ಭಾರತ ಸಂಸತ್ತಿನ ಅಧಿವೇಶನದಲ್ಲಿ ತಮ್ಮ ಮೊದಲ ಭಾಷಣದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಮುಂಬರುವ ಬಜೆಟ್ ಐತಿಹಾಸಿಕ ಘೋಷಣೆಗಳನ್ನು ಮಾಡಲಿದೆ. ಈ ಮೂಲಕ ದೇಶದ ಬೆಳವಣಿಗೆಗೆ ‘ಭವಿಷ್ಯದ ದೃಷ್ಟಿಕೋನ’ವನ್ನು ಪ್ರಸ್ತುತಪಡಿಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಬಜೆಟ್‌ನಲ್ಲಿ ಆರೋಗ್ಯ, ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿಯನ್ನು ಒಳಗೊಂಡ ಸಾಮಾಜಿಕ ವಲಯದ ಯೋಜನೆಗಳಿಗೆ ಹೆಚ್ಚಿನ ಹಣ ವ್ಯಯಿಸುವ ನಿರೀಕ್ಷೆ ಇದೆ. ಈ ಬಾರಿ ಆರ್‌ಬಿಐ ತನ್ನ ಲಾಭಾಂಶವಾದ 2.10 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರಕ್ಕೆ ನೀಡಿದ್ದು, ಭಾರತದ ಆರ್ಥಿಕ ಸ್ಥಿತಿ ಸದೃಢವಾಗಿದೆ. ಇದು ಸಾಮಾಜಿಕ ವಲಯಕ್ಕೆ ಹೆಚ್ಚಿನ ಬಜೆಟ್ ಮೊತ್ತವನ್ನು ವ್ಯಯಿಸಲು ನೆರವಾಗಲಿದೆ.


2047ರ ವೇಳೆಗೆ ವಿಕಸಿತ ಭಾರತ ಸಾಧನೆಗೆ ಈ ಬಜೆಟ್‌ ಮೂಲಕ ಅಡಿಪಾಯ ಹಾಕುವ ವಿಶ್ವಾಸವನ್ನು ಪ್ರಧಾನಿ ಮೋದಿ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿಆರ್ಥಿಕ ಶಿಸ್ತಿಗೆ ವಿತ್ತ ಸಚಿವರು ಒತ್ತು ನೀಡುವ ಸುಳಿವು ದೊರೆತಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top