ವನಿತಾ ಕಥನ- 6: ಕೃಷ್ಣನ ಪರಮ ಭಕ್ತೆ ಪಾಂಡವರ ಮಾತೆ "ಕುಂತಿ"

Upayuktha
0


ಹಾಭಾರತದ ಪ್ರಮುಖ ಪಾತ್ರಗಳಲ್ಲಿ ಕುಂತಿದೇವಿಯ ಪಾತ್ರ ಬಹಳ ಮಹತ್ವವನ್ನು ಪಡೆಯುತ್ತದೆ. ಕುಂತಿ ದೇವಿಯ ಪಾತ್ರ ಇಂದಿನ ಪೀಳಿಗೆಯ ಜನರಿಗೆ ಬಹಳ ದೊಡ್ಡ ಆದರ್ಶವನ್ನು ಕಲಿಸುವ ಪಾತ್ರವಾಗಿದೆ. ಕುಂತಿ ದೇವಿ ಮಹಾರಾಜ ಶೂರಸೇನನ ಮಗಳು ಶೂರಸೇನ ಮಹಾರಾಜನು ತನ್ನ ಸಹೋದರನಾದ ಕುಂತಿಭೋಜನಿಗೆ ದತ್ತು ಕೊಟ್ಟ ಕಾರಣ ಕುಂತಿಭೋಜನ ಮಗಳಾಗಿ ಕುಂತಿ ಎಂದು ಹೆಸರು ಪಡೆಯುತ್ತಾಳೆ ಅವಳ ಮೂಲ ಹೆಸರು ಪೃಥಾ. ಪೃಥೆಯ ಮೂಲ ರೂಪ ಸಿದ್ಧಿ ಎಂಬ ದೇವತಾ ಸ್ತ್ರೀಯಾಗಿರುತ್ತದೆ. ಅವಳಿಗೆ ವಸುದೇವನನ್ನು ಸೇರಿಸಿಕೊಂಡು 14 ಜನ ಸಹೕೊದರ ಸಹೋದರಿಯರು ಇರುತ್ತಾರೆ. ಶ್ರೀ ಕೃಷ್ಣ ಪರಮಾತ್ಮ ಅವಳ ಸೋದರಳಿಯ.


ಕುಂತಿ ಸಣ್ಣ ವಯಸ್ಸಿನಿಂದಲೂ ಶಾಂತ ಸ್ವಭಾವ ಚುರುಕು ಎಲ್ಲವನ್ನೂ ಬೇಗ ಕಲಿಯುವ ಹುಮ್ಮಸ್ಸು ತಿಳುವಳಿಕೆಯವಳಾಗಿರುತ್ತಾಳೆ. ಮನೆಗೆ ಬಂದಿರುವವರನ್ನು ಸತ್ಕರಿಸುವುದುದು ಹಾಗೂ ಗುರು ಹಿರಿಯರ ಸೇವೆ ಅವಳ ಜನ್ಮಜಾತ ಗುಣಗಳಲ್ಲಿಯೇ ಇರುತ್ತದೆ. ಒಂದು ಬಾರಿ ದೂರ್ವಾಸ ಮುನಿಗಳು ಕುಂತಿಭೋಜನ ಅರಮನೆಗೆ ಬರುತ್ತಾರೆ. ಅವರ ಆತಿಥ್ಯದ ಭಾರವು ಕುಂತಿಯ ಮೇಲೆ ಬರುತ್ತದೆ. ಸಣ್ಣ ವಯಸ್ಸಿನವಳಾದರೂ ಕುಂತಿದೇವಿ ಕೋಪಿಷ್ಠರೆಂದೇ ಪ್ರಸಿದ್ಧರಾದ ದೂರ್ವಾಸರಿಗೆ ಯಾವುದೇ ಸಮಸ್ಯೆಯುಂಟಾಗದಂತೆ ಸೇವೆಯನ್ನು ಮಾಡಿ ವರವನ್ನು ಪಡೆಯುತ್ತಾಳೆ.  


ಬಾಲ್ಯ ಸಹಜ ಕುತೂಹಲದ ಕಾರಣ ಋಷಿಗಳು ಉಪದೇಶಿಸಿದ ಮಂತ್ರ ಪಠಣೆ ಮಾಡಿ ಸೂರ್ಯನನ್ನು ಕರೆದು ಅವನ ಅನುಗ್ರಹದಿಂದ ಮಗುವನ್ನು ಪಡೆದು ಲೋಕಾಪವಾದಕ್ಕೆ ಅಂಜಿ ಆ ಮಗುವನ್ನು ಅವನ ಪಾಲನೆ ಪೋಷಣೆಗೆ ಅನುಕೂಲವಾಗುವಷ್ಟು ಧನ ಕನಕಗಳೊಂದಿಗೆ ನದಿಗೆ ಬಿಡುತ್ತಾಳೆ. ಮಾತೃ ಹೃದಯನೊಂದರೂ ಕುಲಗೌರವಕ್ಕಾಗಿ ತನ್ನ ಮಮತೆಯ ತ್ಯಾಗ ಮಾಡಿ ಮಗುವನ್ನು ಮರೆಯಲಾರದೆ ಅವನ ಚಿಂತೆಯೊಂದಿಗೆ ಮುಂದು ಕಾಲಕ್ರಮೇಣ ಕುರು ವಂಶದ ರಾಜ ಪಾಂಡುವಿನ ಜೊತೆಗೆ ಅವಳ ವಿವಾಹವು ನೆರವೇರುತ್ತದೆ. ಕುರುಕುಲದ ರಾಣಿಯಾಗಿ ಪಾಂಡು ರಾಜನ ಮಡದಿಯಾಗಿ ಅವಳು ರಾಜನಿಗೆ ತಕ್ಕ ರಾಣಿಯಾಗಿರುತ್ತಾಳೆ.

ಒಮ್ಮೆ ಪಾಂಡು ರಾಜನು ಜಿಂಕೆಯ ವೇಷದಲ್ಲಿ ರಮಿಸುತ್ತಿದ್ದ ಋಷಿ ದಂಪತಿಗಳ ಹತ್ಯೆ ಮಾಡಿ ಶಾಪಗ್ರಸ್ತನಾಗಿ ಬಂದಾಗ ಅವನ ಜೊತೆಗೆ ಪತ್ನಿ ಧರ್ಮವನ್ನು ನಿಭಾಯಿಸಲು ವನಕ್ಕೆ ಹೋಗುತ್ತಾಳೆ. ಪತಿಯ ಸಂತಾನ ಅಪೇಕ್ಷೆಗೆ ಗುರುಗಳು ತನಗೆ ನೀಡಿದ ವರಗಳ ಮೂಲಕ ಸತ್‌ ಸಂತಾನ ಪಡೆಯುವುದರ ಕುರಿತು ಪತಿಯೊಂದಿಗೆ ಮಾತುಕತೆಯಾಡಿ ಅವನ ಅನುಮತಿ ಪಡೆದು ತನಗೆ ಮಾತ್ರವಲ್ಲದೇ ಸವತಿಗೂ ಆ ಮಂತ್ರ ಉಪದೇಶ ಮಾಡಿದ ಉತ್ತಮ ಮಹಿಳೆ ಕುಂತಿಯಾಗಿದ್ದಳು. ಅರಮನೆಯೇ ಇರಲಿ ಕಾಡೇ ಇರಲಿ ಪತಿಯೊಂದಿಗೆ ಸುಖದುಃಖದ ಸಮಯದಲ್ಲಿ ಜೊತೆಗೆ ಇರಬೇಕೆಂಬ ನೀತಿಯನ್ನು ಲೋಕಕ್ಕೆ ಸಾರಿದವಳು ಕುಂತಿ.


ಸವತಿಯೊಂದಿಗೆ ಮಯ ಮರೆತ ಪತಿ ಸಾವಿಗೆ ಈಡಾದಾಗ ಪತಿಯೊಂದಿಗೆ ಸತಿ ಹೋಗಲು ಕೂಡ ನಿರ್ಣಯಿಸಿದರೂ ಮಾದ್ರಿಯ ಮಾತಿನಂತೆ ಅವಳ ಮಕ್ಕಳನ್ನೂ ತನ್ನ ಮಕ್ಕಳಿಗಿಂತ ಹೆಚ್ಚು ಪ್ರೀತಿಯಿಂದ ಬೆಳೆಸುವ ಮಹಾನ್‌ ವಾತ್ಸಲ್ಯಮಯಿ ತಾಯಿ ಕುಂತಿ.  ಕೌರವ ಪಾಂಡವರ ಯುದ್ಧ ಕೌಶಲ್ಯ ಪ್ರದರ್ಶನ ಸಮಯದಲ್ಲಿ ಕರ್ಣನನ್ನ ಗುರುತು ಹಿಡಿದರೂ ಸಮಯದ ಔಚಿತ್ಯ ಹಾಗೂ ಸಂದರ್ಭದ ಅವಶ್ಯಕತೆಗೆ ಮೌನಕ್ಕೆ ಜಾರಿದಳು. ಪಾಂಡವರು ದ್ರೌಪದಿ ದೇವಿಯನ್ನು ಕರೆ ತಂದನ್ನು ಹಣ್ಣನ್ನು ತಂದಿದ್ದೇವೆ ಎಂದಾಗಲೂ ಸಮಾನಾಗಿ ಹಂಚಿಕೊಳ್ಳಿ ಎಂಬುದು ಅವಳ ಮಕ್ಕಳ ಬಗೆಗಿನ ಸಮಾನ ಪ್ರೀತಿಯನ್ನು ಎತ್ತಿ ತೋರಿಸುತ್ತದೆ. ಮಾತೆಯ ಮಾತನ್ನು ಉಳಿಸುವ ಸಲುವಾಗಿ ಐವರು ಮದುವೆಯಗುವ ಘಟನೆ ಪಾಂಡವರು ತಾಯಿತಗೆ ತಕ್ಕ ಮಕ್ಕಳು ಎಂಬುದನ್ನು ಕೂಡ ತೋರಿಸುತ್ತದೆ. ಕೌರವರ ಅನ್ಯಾಯ ಅತ್ಯಾಚಾರ ಧೃತರಾಷ್ಟ್ರ ಗಾಂಧಾರಿಯರ ಮೌನ ಭೀಷ್ಮರ ಅಸಹಾಯಕತೆಯ ನಡುವೆ ತನ್ನ ಕುರುಕುಲದ ಸೊಸೆಯ ಧರ್ಮವನ್ನು ಬಿಡದೇ ಮಕ್ಕಳಿಗೆ ದೂರವೇ ಇದ್ದು ಆಶೀರ್ವದಿಸಿದ ಧರ್ಮ ನಿಷ್ಠೆಯ ಮಹಾನ್‌ ಸಾಧ್ವಿ ಕುಂತಿ.


ಮುಂದುವರೆಯುವುದು.....


- ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top