ಜು.14ರಂದು ಬದಿಯಡ್ಕದಲ್ಲಿ ಸಮಾಲೋಚನಾ ಸಭೆ
ಬದಿಯಡ್ಕ: ಯಕ್ಷಗಾನದ ಗುರು, ಧಾರ್ಮಿಕ, ಸಾಮಾಜಿಕ ಜಾನಪದ ರಂಗದ ಸಾಧಕ ಜಯರಾಮ ಪಾಟಾಳಿ ಪಡುಮಲೆ ಇವರ ಸಾರ್ಥಕ ಬದುಕಿನ 50 ವರ್ಷದ ಸಂದರ್ಭದಲ್ಲಿ `ಜಯರಾಮ ಸುವರ್ಣ ಸಂಭ್ರಮ' ಕಾರ್ಯಕ್ರಮ ಅಕ್ಟೋಬರ್ ತಿಂಗಳಿನಲ್ಲಿ ಜರಗಲಿರುವುದು.
ಅಭಿನಂದನಾ ಸಮಿತಿಯ ರೂಪೀಕರಣದ ಕುರಿತು ಸಮಾಲೋಚನಾ ಸಭೆಯು ಜು.14 ಭಾನುವಾರದಂದು ಮಧ್ಯಾಹ್ನ 2 ಗಂಟೆಗೆ ಬದಿಯಡ್ಕ ಶ್ರೀ ಗುರುಸದನದಲ್ಲಿ ಜರಗಲಿರುವುದು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ರೂಪುರೇಷೆ ಹಾಗೂ ಇನ್ನಿತರ ವಿಚಾರಗಳನ್ನು ಚರ್ಚಿಸಲಾಗುವುದು.
ಯಕ್ಷಗಾನ ರಂಗದಲ್ಲಿ ಸಾಧನೆಯನ್ನು ಮಾಡಿ ಜಯರಾಮ ಪಾಟಾಳಿ ಪಡುಮಲೆ ಅವರು ನಾಡಿನಾದ್ಯಂತ ಅನೇಕ ಶಿಷ್ಯಂದಿರನ್ನು, ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಮಾಲೋಚನಾ ಸಭೆಯಲ್ಲಿ ಅವರ ಹಿತೈಷಿಗಳು, ಶಿಷ್ಯಂದಿರು, ಅಭಿಮಾನಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡು ಜಯರಾಮ ಸುವರ್ಣ ಸಂಭ್ರಮ ಕಾರ್ಯಕ್ರಮದ ಯಶಸ್ವಿಗಾಗಿ ಕೈಜೋಡಿಸಬೇಕೆಂದು ಸಂಬಂಧಪಟ್ಟವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ