ಉಡುಪಿ: ಅಮೆರಿಕದಲ್ಲಿ ಪೂಜ್ಯ ಪುತ್ತಿಗೆ ಶ್ರೀಪಾದರ ಅಪೇಕ್ಷೆಯಂತೆ ಪಟ್ಲ ಸತೀಶ್ ಶೆಟ್ಟಿಯವರ ಸಮರ್ಥ ನಾಯಕತ್ವದಲ್ಲಿ ಯಕ್ಷಧ್ರುವ ಫೌಂಡೇಶನ್ ಕಲಾತಂಡದ ಕಲಾವಿದರು ಶ್ರೀ ಪುತ್ತಿಗೆ ಮಠದ ಪ್ರಥಮ ದೇವಾಲಯವೆಂದು ಪ್ರಖ್ಯಾತವಾದ ಫೀನಿಕ್ಸ್ ನಲ್ಲಿರುವ ಶ್ರೀ ವೆಂಕಟಕೃಷ್ಣ ಕ್ಷೇತ್ರದಲ್ಲಿ ದೇವೀ ಮಹಾತ್ಮೆ ಯಕ್ಷಗಾನ ಪ್ರದರ್ಶನವನ್ನು ಕಿಕ್ಕಿರಿದ ಸಭಾಂಗಣದಲ್ಲಿ ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಸಿಟಿ ಮೇಯರ್ ರವರು ಈ ಕಾರ್ಯಕ್ರಮದಲ್ಲಿ ಕಂಡುಬಂದ ಅದ್ಭುತ ಚೆಂಡೆ ವಾದನ ಮತ್ತು ವಿಶಿಷ್ಟ ರೀತಿಯ ಕುಣಿತ ಮತ್ತು ಅಪೂರ್ವ ಗಾಯನದಿಂದ ಕೂಡಿದ ಈ ಕಲೆಯನ್ನು ಆಸ್ವಾದಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತ ಪ್ರದರ್ಶನ ನೀಡಿದ ದಿನವನ್ನೇ (ಜುಲೈ 27ನ್ನು) ಪ್ರತಿವರ್ಷ ಯಕ್ಷಗಾನ ಫೌಂಡೇಶನ್ ಡೇ ಎಂದು ಘೋಷಿಸಿದರು.
ಅಮೇರಿಕದ ನೆಲದಲ್ಲಿ ಪ್ರಥಮ ಬಾರಿ ಯಕ್ಷಗಾನ ಕಲಾ ಸಂಸ್ಥೆಯೊಂದಕ್ಕೆ ಪ್ರಥಮ ಬಾರಿ ಈ ರೀತಿಯ ಸರಕಾರಿ ಗೌರವ ದೊರೆತದ್ದು ವಿದೇಶ ಸ್ವದೇಶದಲ್ಲಿರುವ ಯಕ್ಷಗಾನ ಪ್ರೇಮಿಗಳನ್ನು ಹರ್ಷ ಪುಳಕಿತರನ್ನಾಗಿಸಿದೆ.
ಈ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲೆಯನ್ನು ಬಾಲ್ಯದಲ್ಲಿಯೇ ಅಭ್ಯಸಿಸಿದ್ದ ಶ್ರೀ ಮಠದ ಪ್ರಧಾನ ಅರ್ಚಕ ಕಿರಣ್ ಭಟ್ ರವರ ಧರ್ಮಪತ್ನಿ ಶ್ರೀಮತಿ ಅರ್ಚನಾ ಕಿರಣ್ ರವರು ಮತ್ತು ಉದಯ ಕಲ್ಲೂರಾಯ ಮತ್ತಿತರ ಹಲವು ಕಾರ್ಯಕರ್ತರು ಭಾಗವಹಿಸಿ ಪ್ರೇಕ್ಷಕರ ವಿಶೇಷ ಮೆಚ್ಚುಗೆಗೆ ಪಾತ್ರರಾದರು.
ಯಕ್ಷಧ್ರುವ ಫೌಂಡೇಶನ್ ಮುಖ್ಯಸ್ಥರಾದ ಪಟ್ಲ ಸತೀಶ್ ಶೆಟ್ಟಿಯವರು ಭಾರತೀಯ ಸಾಂಪ್ರದಾಯಿಕ ಪ್ರಾಚೀನ ಯಕ್ಷಗಾನ ಕಲೆಗೆ ಪೂಜ್ಯ ಪುತ್ತಿಗೆ ಶ್ರೀಪಾದರನ್ನು ಮನಸಾರೆ ಪ್ರಶಂಸಿಸಿ ಭಕ್ತಿ ಪೂರ್ವಕ ಕೃತಜ್ಞತೆಯನ್ನು ಅರ್ಪಿಸಿರುತ್ತಾರೆ.
ಈ ಕಲಾ ತಂಡವು ಅಮೆರಿಕಾದ್ಯಂತ ಸಂಚರಿಸಲಿದ್ದು ನೀಡಲಿದ್ದು ಶ್ರೀ ಪುತ್ತಿಗೆ ಮಠದ ನ್ಯೂಜರ್ಸಿ, ಹುಸ್ಟೋನ್ ಮುಂತಾದ ಹೆಚ್ಚಿನ ಶಾಖೆಗಳಲ್ಲಿ ಯಕ್ಶಗಾನ ಪ್ರದರ್ಶನಗಳನ್ನು ನೀಡಲಿದೆ ಎಂದು ಶ್ರೀ ಮಠದ ಅಂತಾರಾಷ್ಟ್ರ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ತಿಳಿಸಿರುತ್ತಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ