ಬೆಂಗಳೂರು: ಭಜನ - ಪ್ರವಚನ - ಸಂಕೀರ್ತನ

Upayuktha
0


ಬೆಂಗಳೂರು:
ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ಹಾಗೂ ಶ್ರೀ ಗುರುರಾಜ ಸೇವಾ ಸಮಿತಿ, ಯಲಹಂಕ ಉಪನಗರ, ಬೆಂಗಳೂರು, ಇವುಗಳ ಸಂಯುಕ್ತಾಶ್ರಯದಲ್ಲಿ ಜುಲೈ 30 ರಿಂದ ಆಗಸ್ಟ್ 2 ರ ವರೆಗೆ ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು, ಅವುಗಳ ವಿವರಗಳು ಈ ರೀತಿ ಇವೆ:

ಭಜನಾ ಕಾರ್ಯಕ್ರಮ:

(ಪ್ರತಿದಿನ ಸಂಜೆ 6 ರಿಂದ 7)

ಜುಲೈ 30, ಮಂಗಳವಾರ: ಶ್ರೀ ವಿಜಯವಿಠ್ಠಲ ಭಜನಾ ಮಂಡಳಿ, (ವಿದ್ಯಾರಣ್ಯಪುರ), ಜುಲೈ 31, ಬುಧವಾರ : ಸಮೀರ ಭಜನಾ ಮಂಡಳಿ, (ಯಲಹಂಕ), ಆಗಸ್ಟ್ 1, ಗುರುವಾರ: ವೈಷ್ಣವಿ ಭಜನಾ ಮಂಡಳಿ, (ಯಲಹಂಕ). 

ಪ್ರವಚನ ಕಾರ್ಯಕ್ರಮ 

(ಪ್ರತಿದಿನ ಸಂಜೆ 7 ರಿಂದ 8)

ಮ||ಶಾ||ಸಂ|| ಶ್ರೀ ಕಲ್ಯಾ ಶ್ರೀಕಾಂತಾಚಾರ್ಯರಿಂದ 

"ಸುಮಧ್ವ ವಿಜಯ" ಧಾರ್ಮಿಕ ಪ್ರವಚನ.

ಹರಿನಾಮ ಸಂಕೀರ್ತನೆ : ಆಗಸ್ಟ್ 2, ಶುಕ್ರವಾರ ಸಂಜೆ 6-30 ರಿಂದ 8-00

ಗಾಯನ : ಶ್ರೀಮತಿ ರಮ್ಯಾ ಸುಧೀರ್, ಪಿಟೀಲು : ಶ್ರೀ ಎಸ್. ಶಶಿಧರ್, ಮೃದಂಗ: ಶ್ರೀ ಶ್ರೀನಿವಾಸ್ ಅನಂತರಾಮಯ್ಯ 

ಕಾರ್ಯಕ್ರಮ ನಡೆಯುವ ಸ್ಥಳ:

ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, #5, 8ನೇ ಮುಖ್ಯರಸ್ತೆ, ಯಲಹಂಕ ಉಪನಗರ, ಬೆಂಗಳೂರು.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಟಿಟಿಡಿ ಹೆಚ್.ಡಿ.ಪಿ.ಪಿ. ಸಂಚಾಲಕ ಡಾ|| ಪಿ. ಭುಜಂಗರಾವ್ ವಿನಂತಿಸಿದ್ದಾರೆ.


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top