ಯಕ್ಷಗಾನವನ್ನು ಮುಂದಿನ ಪೀಳಿಗೆಗೆ ಸಕಾರಾತ್ಮಕವಾಗಿ ತಲಪಿಸೋಣ: ಪುನರೂರು

Upayuktha
0


ಮಂಗಳೂರು: ವಿಶ್ವವ್ಯಾಪಕವಾಗಿರುವ, ನೈತಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಕಾರ್ಯವನ್ನು ನಿರಂತರವಾಗಿ ಸಾವಿರ ವರ್ಷಗಳಿಂದ ಬರುತ್ತಿರುವ ಯಕ್ಷಗಾನವನ್ನು ನಮ್ಮ ಮುಂದಿನ ಪೀಳಿಗೆಗೆ ಸಕಾರಾತ್ಮಕವಾಗಿ ತಲಪಿಸೋಣ. ಈ ದೃಷ್ಟಿಯಲ್ಲಿ ಶ್ರಮಿಸುತ್ತಿರುವ ಸರಯೂ ಹಾಗೂ ಇನ್ನಿತರ ಮಕ್ಕಳ ಮೇಳಗಳನ್ನು ಎಲ್ಲಾ ದೃಷ್ಟಿಯಿಂದ ಪ್ರೋತ್ಸಾಹಿಸೋಣ. ಮುಂಬರುವ ರಜತ ವರ್ಷದಲ್ಲಿ, ಸರಯೂ ಮಕ್ಕಳ ಮೇಳಕ್ಕೆ ಭವಿಷ್ಯ ಉಜ್ವಲವಾಗಲಿ" ಎಂದು ಧರ್ಮದರ್ಶಿ ಡಾ|| ಹರಿಕೃಷ್ಣ ಪುನರೂರು ಹೇಳಿದರು.


ಅವರು ಕದ್ರಿಯಲ್ಲಿ ನಡೆದ ಸರಯೂ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಯಕ್ಷಗಾನ- ಭಾಗವತ, ಕಲಾವಿದ ತೋನ್ಸೆ ಪುಷ್ಕಳ ಕುಮಾರ್ ಪ್ರಸ್ತಾವಿಸಿದರು. ಕಲಾವಿದ ಡಾ| ಪೂವಪ್ಪ ಶೆಟ್ಟಿ ಅಳಿಕೆ ಹಾಗೂ ಹವ್ಯಾಸಿ ಭಾಗವತ ದೇವಿ ಪ್ರಕಾಶ್ ರಾವ್ ಕಟೀಲ್ ರವರನ್ನು ಗೌರವಿಸಲಾಯಿತು.


ಕೃಪಾ ಖಾರ್ವಿ , ಶೋಭಾ ಪೇಜಾವರ್ ಸನ್ಮಾನ ಪತ್ರ ವಾಚಿಸಿದರು. ಕೇಶವ ಹೆಗ್ಡೆ, ಡಾ|| ಪ್ರಖ್ಯಾತ್ ಶೆಟ್ಟಿ, ಮಾಧವ ನಾವಡ, ವೇ. ಮೂ|| ಡಿ. ವಿ. ರಮೇಶ್ ತಂತ್ರಿಗಳು, ಲಿಖಿತಾ, ಧೃಶಾಲ್, ಪ್ರತೀಕ್ ರಾವ್, ಕಾವ್ಯಾ, ಕೃತಿ ಉಪಸ್ಥಿತರಿದ್ದರು.

 

ಸುಧಾಕರ ರಾವ್ ಪೇಜಾವರ್ ಸ್ವಾಗತಿಸಿ; ನಿರ್ವಹಿಸಿದರು. ಸಂಸ್ಥೆಯ ಅಧ್ಯಕ್ಷ ವರ್ಕಾಡಿ ಮಧುಸೂದನ ಅಲೆವೂರಾಯ ಧನ್ಯವಾದವಿತ್ತರು. ಜಾಂಬವತಿ ಕಲ್ಯಾಣ ಬಯಲಾಟ ಜರಗಿತು ಕದ್ರಿ ರಾಜಾಂಗಣದಲ್ಲಿ ಸಪ್ತಾಹ ಯಶಸ್ವಿಯಾಗಿ ಜರಗಿತು.


ವೀರ ಶತಕಂಠ ಪ್ರಸಂಗ ಬಿಡುಗಡೆ



ಕೊಲ್ಲಂಗಾನ ಮೇಳದ ಶ್ರೀ ದೇವರ ತಿರುಗಾಟದ ಸೇವೆಯಾಟದಂದು ಮಧುಕರ ಭಾಗ್ವತ್ ರವರ ಕಥೆ ಆಧಾರಿತ ಪ್ರಸಂಗಕೃತಿ ರಚನೆಕಾರ ವರ್ಕಾಡಿ ರವಿ ಅಲೆವೂರಾಯರ ವೀರ ಶತಕಂಠ ಪ್ರಸಂಗ ಬಿಡುಗಡೆಗೊಂಡಿತ್ತು.


ಮೇಳದ ಸಂಚಾಲಕರೂ, ಶ್ರೀಚಕ್ರ ಆರಾಧಕರೂ ಆದ ಬ್ರಹ್ಮಶ್ರೀ ಗಣಾಧಿರಾಜ ತಂತ್ರಿ ಉಪಾಧ್ಯಯರು, ಬೆಳ್ಳೂರು ಗಂಗಾಧರ ಬಲ್ಲಾಳ್, ಡಾ|| ಮೋಹನ್ ದಾಸ್ ರೈ, ರಾಮ್ ಎಲ್ಲಂಗಳ, ನಿವೃತ್ತ ಉಪನ್ಯಾಸಕ ಪ್ರೊ. ಶ್ರೀನಾಥ್, ಕೊಲ್ಲಂಗಾನ ಸುಂದರ ಶೆಟ್ಟಿ, ಉದಯ ಮಾಸ್ತರ್ ಪಡುಮಲೆ, ಕೇಶವ ಕಂಬಾರ್ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top