ಕನ್ಯಾನ: ಕಣಚೂರು ಆಯುರ್ವೇದ ಆಸ್ಪತ್ರೆಯಿಂದ ಉಚಿತ ಚಿಕಿತ್ಸಾ ಶಿಬಿರ

Upayuktha
0


ಮಂಗಳೂರು: ಕನ್ಯಾನದ ಭಾರತ ಸೇವಾಶ್ರಮದಲ್ಲಿ ಇಂದು (ಜೂನ್ 15) ಕಣಚೂರು ಆಯುರ್ವೇದ ಆಸ್ಪತ್ರೆಯ ವತಿಯಿಂದ ಉಚಿತ ಚಿಕಿತ್ಸಾ ಶಿಬಿರ ಹಾಗೂ ಅರ್ಹ ರೋಗಿಗಳಿಗೆ ವಾಕರ್ ಗಳನ್ನು ವಿತರಿಸಲಾಯಿತು.


ಸಂಸ್ಥೆಯ ಮುಖ್ಯ ವೈದ್ಯಕೀಯ ನಿರ್ದೇಶಕ ಡಾ ಸುರೇಶ ನೆಗಳಗುಳಿಯವರು ಈ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ನಾವು ಯಾವುದೇ ಫಲಾಪೇಕ್ಷೆಯಿಲ್ಲದೆ ಅಗತ್ಯ ಉಳ್ಳ ಪ್ರದೇಶಗಳಲ್ಲಿ ಉಚಿತ ಚಿಕಿತ್ಸಾ ಶಿಬಿರ ನಡೆಸುತ್ತಲೇ ಇದ್ದೇವೆ. ಇದರ ಸದುಪಯೋಗವಾದರೆ ನಾವು ಧನ್ಯರು ಎಂದರು. ಬಳಿಕ ಫಲಾನುಭವಿಗಳಿಗೆ ಊರುಗೋಲು ಹಸ್ತಾಂತರಿಸಿದರು.


ಆಶ್ರಮದ ಮುಖ್ಯಸ್ಥ ಈಶ್ವರ ಭಟ್ ಸುಣ್ಣಂಬಳ ಅವರು ಶಿಬಿರವನ್ನುದ್ದೇಶಿಸಿ ಮಾತನಾಡುತ್ತಾ ಯಾವುದೇ ಫಲಾಪೇಕ್ಷೆಯಿಲ್ಲದೆ ಉತ್ತರ ಭಾರತದಿಂದ ಬಂದು ಇಲ್ಲಿ ನೊಂದವರ ಹಿತಕ್ಕಾಗಿ 1965ರಲ್ಲಿ ಭಟ್ಚಾರ್ಯರವರು ಸ್ಥಾಪಿಸಿದ ಈ ಆಶ್ರಮವು ಇಂದು 350 ಅನಾಥರಿಗೆ ಆಶ್ರಯ ತಾಣವಾಗಿದೆ. ಇದಲ್ಲದೆ ನೂರಾರು ಗೋವುಗಳನ್ನೂ ಸಂರಕ್ಷಿಸಿ ಪಾಲಿಸುವ ಮೂಲಕ ಇತರರಿಗೆ ಮಾದರಿಯಾಗಿದೆ. ಕಣಚೂರು ಆಯುರ್ವೇದ ಕಾಲೇಜಿನವರು ನಡೆಸುವ ಈ ಆರೋಗ್ಯ ಸೇವೆ ಮುಂದೆಯೂ ನಮಗೆ ಲಭಿಸಲಿ ಎಂದು ಹಾರೈಸಿದರು.


ಆಸ್ಪತ್ರೆಯ ಉಪ ನಿರೀಕ್ಷಕ ಡಾ ಕಾರ್ತಿಕ್ ಅವರು ನಾವು ನಡೆಸುವ ಈ ಸೇವೆಗೆ ಪೂರಕವಾಗಿ ಮುಂದೆಯೂ ಚಿಕಿತ್ಸೆಗಾಗಿ ಆಸ್ಪತ್ರೆಯ ಒಳರೋಗಿಯಾಗಿ ಬರಬಹುದು ಎಂದರು.


ಆಗತ್ಯ ಔಷಧಿ, ರಕ್ತ ತಪಾಸಣೆ, ರಕ್ತಛಾಪ ತಪಾಸಣೆ ಸಹಿತವಾಗಿ ಸುಮಾರು 250 ಮಂದಿ ಶಿಬಿರದ ಸದುಪಯೋಗ ಪಡೆದರು. ಇದಲ್ಲದೆ ಎಲ್ಲರಿಗೂ ಹಣ್ಣು ಹಂಪಲು ಮತ್ತು ಬಿಸ್ಕಟ್‌ಗಳನ್ಮು ಸಹ ಹಂಚಲಾಯಿತು.


ಡಾ. ಕಾರ್ತಿಕ್, ಡಾ. ಅರ್ಜುನ್, ಡಾ. ಅರುಣಾ, ಡಾ. ರಾಜೇಶ್, ಡಾ. ಚರಣ್ (ಆರ್ ಎಂಒ) ಪರಿಚಾರಿಕೆಯರಾದ ಉಮಾಶ್ರೀ, ಅಫ್ರಾ,‌ ರಕ್ಷಿತಾ,(ಎಂಆರ್ ಡಿ) ಶ್ರಾವ್ಯಾ (ಫಾರ್ಮಸಿ) ಸಜಿನಾ, (ಲ್ಯಾಬ್) ಮತ್ತು ಪಿಆರ್ ಒ ಅಭಿಯಾರವರು ಸಹಕರಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top