ಗ್ರೀನ್ ಥಾಟ್ಸ್ ಫೌಂಡೇಶನ್, ಭಾವೈಕ್ಯ ಯುವಜನ ಸಂಘ ಹಾಗೂ ಗ್ರಾಮಾಂತರ ಟ್ರಸ್ಟ್ ಸಹಯೋಗದಲ್ಲಿ ಆಯೋಜನೆ
ಚಿಕ್ಕಬಳ್ಳಾಪುರ: ಗ್ರೀನ್ ಥಾಟ್ಸ್ ಫೌಂಡೇಶನ್, ಭಾವೈಕ್ಯ ಯುವಜನ ಸಂಘ ಹಾಗೂ ಗ್ರಾಮಾಂತರ ಟ್ರಸ್ಟ್ ಸಂಸ್ಥೆಗಳ ಸಹಯೋಗದಲ್ಲಿ ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಪರಿಸರ ದಿನದ ಆಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಪೂರ್ವ ನಿಗದಿಯಂತೆ ವಿದ್ಯಾರ್ಥಿಗಳಿಗೆ ಪರಿಸರ ದಿನಕ್ಕೆ ಸಂಬಂಧಿಸಿದಂತೆ ಪ್ರಬಂಧ ರಚನೆ, ಭಾಷಣ ಸ್ಪರ್ಧೆಗಳನ್ನು ಆಯೋಜನೆ ಮಾಡಿ ವಿಜೇತರಿಗೆ ಬಹುಮಾನವಾಗಿ ಪರಿಸರ ಅಧ್ಯಯನ ಹಾಗೂ ನೈತಿಕ ಮೌಲ್ಯಗಳ ಪುಸ್ತಕಗಳನ್ನು ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸದರಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಚಂದ್ರಯ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಜಗದೀಶ್, ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರೀಕ ಕಲ್ಯಾಣ ಅಧಿಕಾರಿಗಳು ಮಾತನಾಡುತ್ತಾ ಅಪೌಷ್ಠಿಕತೆಯನ್ನು ನಿವಾರಣೆ ಮಾಡಲು ಪರಿಸರ ಪ್ರಜ್ಞೆ ಮೂಡಬೇಕಾದ ಅವಶ್ಯಕತೆ ಕುರಿತಾಗಿ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಹರೀಶ್ ಜಿ ಕಾರ್ಯಕ್ರಮವನ್ನು ಉದ್ದೇಶಿಸಿ ಸಾವಯವ ಕೃಷಿಯ ಪ್ರಾಮುಖ್ಯತೆ ಹಸಿರು ಕ್ರಾಂತಿಯಲ್ಲಿ ಆದ ಬದಲಾವಣೆಯಿಂದ ರಸಗೊಬ್ಬರ ಹಾಗೂ ಕೀಟನಾಶಕಗಳಿಂದ ಆಗುತ್ತಿರುವ ಪರಿಸರ ಮಾಲಿನ್ಯವನ್ನು ಸಂಕ್ಷಿಪ್ತವಾಗಿ ತಿಳಿಸಿಕೊಟ್ಟರು.
ಪ್ರೊ ಚಂದ್ರಪ್ಪ, ಪ್ರಾಂಶುಪಾಲರು, ಯಲಹಂಕ ರವರು ಗಿಡ ನೆಡುವುದು ಮುಖ್ಯವಲ್ಲ ಅದರ ಆರೈಕೆ ಬಗ್ಗೆ ತಿಳಿಸುತ್ತಾ ಸಸ್ಯಗಳಿಗೆ ಇರುವ ಭಾವನಾತ್ಮಕ ಗುಣವನ್ನು ಜಗದೀಶ್ ಚಂದ್ರ ಭೋಸ್ ರವರ ಪ್ರಯೋಗವನ್ನು ಉಲ್ಲೇಖಸಿ ಹುಲುಸಾಗಿ ಬೆಳೆದ ಬಗ್ಗೆ, ಪ್ರಸಕ್ತ ಸಾಲಿನ ವಿಶ್ವಸಂಸ್ಥೆಯ ಘೋಷಣೆಯಂತೆ ಮರುಭೂಮಿಕರಣಕ್ಕೆ ಕಾರಣ, ವಿಶ್ವ ಸಂಸ್ಥೆಯ ಪ್ರಸಕ್ತ ಸಾಲಿನ ಭೂಮಿಯನ್ನು ಮರುಸ್ಥಾಪಿಸುವ ಪ್ರಾಮುಖ್ಯತೆ, ಮರುಭೂಮಿಕರಣದ ವಿರುದ್ಧ ಹೋರಾಡುವುದು ಮತ್ತು ಬರಗಾಲದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವುದರ ಕುರಿತಾಗಿ ವಿಶ್ಲೇಷಣೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಒಂದು ಜೀವಿಗೆ ಪ್ರಾಣ ನೀಡುವ ಶಕ್ತಿ ಇಲ್ಲದವರು ಅದರ ಜೀವ ತೆಗೆಯಲು ಹಕ್ಕು ಇಲ್ಲ. ಅರಣ್ಯಗಳ ಅತಿಕ್ರಮಣದ ಪರಿಣಾಮಗಳು ಹಾಗೂ ಅದರಿಂದ ಹೊರ ಬರುವ ನಮ್ಮ ಪ್ರಯತ್ನ ಮತ್ತು ಜವಾಬ್ದಾರಿಗಳನ್ನು ವಿವರಿಸಿದರು.
ಪರಿಸರ ಹಾಗೂ ಸಾಮಾಜಿಕ ಹೋರಾಟಗಾರರು ಆದ ಗೊಲ್ಲಹಳ್ಳಿ ಶಿವಪ್ರಸಾದ್ ರಚನೆಯ ಎಲ್ಲಾ ಮಾಯಾ ನಾಳೆ ನಾವು ಮಾಯಾ ಎಂದು ಗೀತೆಯನ್ನು ಉಲ್ಲೇಖಿಸುತ್ತಾ ಪರಿಸರ ಸಂರಕ್ಷಣೆಯ ಪ್ರಮುಖ್ಯತೆಯನ್ನು ವಿವರಿಸಿದರು. ಶಶಿರಾಜ್ ಹರತಲೇ ರವರು ದೇಸಿ ಪ್ರಭೇದಗಳು ಪ್ರಾಮುಖ್ಯತೆ, ಕೃಷಿಯನ್ನು ಆರಂಭಿಕ ಸನ್ನಿವೇಶವನ್ನು ವಿವರಿಸುತ್ತಾ ಮೊಟ್ಟ ಮೊದಲು ಮಣ್ಣು ಮುಟ್ಟಿದವಳು ಹೆಣ್ಣು ಎಂಬ ಹಾಡಿನಿಂದ ವಿಶ್ಲೇಷಣೆ ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ಭಾವೈಕ್ಯ ಯುವಜನ ಸಂಘದ ಪ್ರಜ್ವಲ್ ಕೆ.ವಿ, ಕೃಪಾ, ಗ್ರಾಮಾಂತರ ಟ್ರಸ್ಟ್ನ ಅನಂತಲಕ್ಷ್ಮಿ, ಗ್ರೀನ್ ಥಾಟ್ಸ್ ಫೌಂಡೇಶನ್ನ ಕಲ್ಯಾಣ್, ನಾಗರಾಜ್, ನರೇಂದ್ರ, ಮಹಿಳಾ ಕಾಲೇಜಿನ ಪ್ರಧ್ಯಾಪಕರಾದ ಪ್ರೊ. ಅಶ್ವಥ್ ನಾರಾಯಣ ಹಾಗೂ ಇತರೇ ಸಿಬ್ಬಂದಿ ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ