ಬೆಂಗಳೂರು: ಬೆಂಗಳೂರಿನ ಪ್ರಶಾಂತನಗರದಲ್ಲಿರುವ ಶ್ರೀ ಪ್ರಶಾಂತ ಗಣಪತಿ ದೇವಸ್ಥಾನದಲ್ಲಿ ಏಪ್ರಿಲ್ 19ರಂದು ಏರ್ಪಡಿಸಿದ್ದ "ಹರಿದಾಸ ವೈಭವ" ಕಾರ್ಯಕ್ರಮದಲ್ಲಿ ಕು|| ಅನನ್ಯ ಬೆಳವಾಡಿ ಅವರು ಅಪರೋಕ್ಷ ಜ್ಞಾನಿಗಳಿಂದ ರಚಿತವಾದ ಹಲವಾರು ಅಪರೂಪದ ಹರಿದಾಸರ ಕೃತಿಗಳನ್ನೂ ಹಾಗೂ ಅನ್ನಮಾಚಾರ್ಯರ ಮತ್ತು ತ್ಯಾಗರಾಜರ ಕೀರ್ತನೆಗಳನ್ನೂ ಪ್ರಸ್ತುತ ಪಡಿಸಿದರು.
ಇವರ ಗಾಯನಕ್ಕೆ ಕೀಬೋರ್ಡ್ ವಾದನದಲ್ಲಿ ಅಮಿತ್ ಶರ್ಮಾ, ತಬಲಾ ವಾದನದಲ್ಲಿ ಸರ್ವೋತ್ತಮ ಸಾಥ್ ನೀಡಿದರು. ದೇವಸ್ಥಾನದ ಕಮಿಟಿಯ ಸೇತುರಾಮನ್ ಸ್ವಾಗತಿಸಿದರು. ಹಿರಿಯ ಮುತ್ಸದ್ದಿ ಗಣೇಶ್ ಭಟ್ ಕಲಾವಿದರನ್ನು ಸನ್ಮಾನಿಸಿದರು. ಗುರುರಾಜ್ ವಂದನಾರ್ಪಣೆ ಮಾಡಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ