ಹಾಸನ : ಮನೆ ಮನೆ ಕವಿಗೋಷ್ಠಿ ಸಾಹಿತ್ಯ ಸಂಘಟನೆಯ 314ನೇ ತಿಂಗಳ ಸಾಹಿತ್ಯ ಉಪನ್ಯಾಸ ಕಾರ್ಯಕ್ರಮವು ನಡೆಯಲಿದೆ. ಹೆಚ್.ಜಿ.ಗಂಗಾಧರ್ ನಟ ಗಾಯಕ ಅಧ್ಯಕ್ಷರು ಶ್ರೀ ಶಾರದ ಕಲಾಸಂಘ ಹಾಸನ ಇವರ ಪ್ರಾಯೋಜಕತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಹಾಸನಾಂಬ ಥಿಯಾಸಾಫಿಕಲ್ ಸೊಸೈಟಿ, ವಾಣಿವಿಲಾಸ ರಸ್ತೆ, ಪ್ರಾಚ್ಯ ವಸ್ತು ಸಂಗ್ರಹಾಲಯ ಕಟ್ಟಡ ಪಕ್ಕದಲ್ಲಿ ಫೆ 04ರಂದು ಭಾನುವಾರ ಸಂಜೆ 3 ಗಂಟೆಗೆ ಉಪನ್ಯಾಸ ಕವಿಗೋಷ್ಠಿ ರಂಗಗೀತೆ ಗಾಯನ ಏರ್ಪಡಿಸಲಾಗಿದೆ.
ಹೆಸರಾಂತ ನಾಟಕಕಾರರು ಬಿ.ಪುಟ್ಟಸ್ವಾಮಯ್ಯ ವಿರಚಿತ ಕುರುಕ್ಷೇತ್ರ ನಾಟಕ ಕುರಿತಾಗಿ ನಿವೃತ್ತ ಲೆಕ್ಕಪರಿಶೋಧನಾಧಿಕಾರಿ ನಟ ನಾಟಕಕಾರ ಎಸ್.ಎಸ್.ಪುಟ್ಟೇಗೌಡರು. ಎಂ.ಎ., ಶಂಭುನಾಥಪುರ ಅರಕಲಗೊಡು ತಾ. ಇವರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.
ಆಗಮಿತ ಕವಿಗಳಿಂದ ಕವಿಗೋಷ್ಠಿ ನಡೆಯಲಿದ್ದು, ರಂಗ ಕಲಾವಿದರಿಂದ ರಂಗಗೀತೆ ಗಾಯಕ/ ಗಾಯಕಿಯರಿಂದ ಭಾವಗೀತೆ ಜನಪದ ಗೀತೆಗಳ ಗಾಯನ ಕಾರ್ಯಕ್ರಮಕ್ಕೆ ಕವಿ/ಕವಯಿತ್ರಿಯರು, ಗಾಯಕ/ಗಾಯಕಿಯರು, ಪೌರಾಣಿಕ ನಾಟಕಗಳು ಕಲಾವಿದರು ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಬೇಕೆಂದು ಮನೆ ಮನೆ ಕವಿಗೋಷ್ಠಿ ಸಂಚಾಲಕರು ಸಾಹಿತಿ ಗೊರೂರು ಅನಂತರಾಜು ತಿಳಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ