ಈ ಬಾರಿ ಕರಾವಳಿ ಭಾಗದ ಜನರು ಸಿದ್ದರಾಮಯ್ಯ ನವರ ಬಜೆಟ್ ನಲ್ಲಿ ತುಂಬ ಭರವಸೆಗಳನ್ನು ಇಟ್ಟು ಕೊಂಡಿದ್ದರು ಆದರೆ ಅವುಗಳೆಲ್ಲವೂ ಸಂಪೂರ್ಣವಾಗಿ ಹುಸಿಯಾಗಿದೆ.ಉಡುಪಿ ಜಿಲ್ಲೆಯ ಬಹು ಮುಖ್ಯ ಬೇಡಿಕೆಗಳಾದ ಉದ್ಯೋಗ ಸೃಷ್ಟಿ ಮಾಡುವ ಐ.ಟಿ.ಪಾಕ೯ ವಿಚಾರವೇ ಇಲ್ಲ.ಟೆಂಪಲ್ ಪ್ರವಾಸೋದ್ಯಮ ಅಭಿವೃದ್ಧಿ ಕುರಿತಾಗಿ ಛಕಾರವೇ ಇಲ್ಲ.ಬಹು ಕಾಲದ ಬಹು ಜನರ ನಿರೀಕ್ಷೆಯಾಗಿದ್ದ ಸರಕಾರಿ ಮೆಡಿಕಲ್ ಕಾಲೇಜು ಪ್ರಾಸ್ತಪವೇ ಇಲ್ಲ..ಮೀನುಗಾರರ ಮುಾಲ ಬದುಕಿನ ಬೇಡಿಕೆಗಳಿಗೆ ಬಜೆಟ್ ನಲ್ಲಿ ಶೂನ್ಯ ಪ್ರತಿಕ್ರಿಯೆ.ಬಂಟರು ತಮಗೊಂದು ನಿಗಮ ಘೇೂಷಿಸ ಬಹುದೆಂದು ಕನಸು ಕಾಣುತ್ತಿದ್ದರು ಆದರೆ ಸಿದ್ದರಾಮಯ್ಯ ಕಳೆದ ಬಾರಿ ಬಂಟರ ಸಮಾವೇಶದಲ್ಲಿ ಕೊಟ್ಟ ಆಶ್ವಾಸನೆ ಎಷ್ಟು ಚೆನ್ನಾಗಿ ಕೆಳಗಿಟ್ಟರು ಅಂದರೆ ತಮ್ಮ ತಲೆಗೆ ತೊಡಿಸಲು ತಂದ ಪೇಟದಷ್ಟೆ ಸಲೀಸಾಗಿ ಬಂಟರ ಬೇಡಿಕೆಯನ್ನು ತಳ್ಳಿ ಬಿಟ್ಟರು.
ಸಿದ್ದರಾಮಯ್ಯ ನವರು ಮಂಡಿಸಿದ ಸುಧೀರ್ಘವಾದ ಬಜೆಟ್ ಕೇವಲ ಪುಟಗಳಿಂದಲೇ ತುಂಬಿಸಿದರು ಬಿಟ್ಟರೆ ಅಭಿವೃದ್ಧಿ ಪರವಾದ ಬೃಹತ್ ಗಾತ್ರದ ಯೇೂಜನೆಗಳ ಕಡೆಗೆ ಗಮನ ಹರಿಸಲೇ ಇಲ್ಲ..ಕೇವಲ ಚಿಕ್ಕ ಪುಟ್ಟ ಕಾರ್ಯಕ್ರಮಗಳ ವರದಿ ಸಲ್ಲಿಸಿದ ತರದಲ್ಲಿ ಬಜೆಟ್ ತುಂಬಿ ಕೊಂಡಿದೆ.ಪಂಚ ಗ್ಯಾರಂಟಿ ಗಳಿಗೆ52 ಸಾವಿರ ಕೇೂಟಿ ಹಣ ಸಮತೂಗಿಸಿಕೊಳ್ಳುವುದರಲ್ಲಿ ಸುಸ್ತಾದ ಸಿದ್ದರಾಮಯ್ಯ ನವರು ತೆರಿಗೆ ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡ ಬೇಕಾದ ಅನಿವಾರ್ಯತೆಯ ಸುಳಿಯಲ್ಲಿ ಸಿಕ್ಕಿಕೊಂಡಿದಂತು ಸತ್ಯ. ಜನಸಾಮಾನ್ಯರಿಗೆ ಹೊರೆಯಾಗುವ ತರದಲ್ಲಿ ತೆರಿಗೆ ಹೆಚ್ಚಿಸಿರುತ್ತಾರೆ.ಅಬಕಾರಿ ಶುಲ್ಕ ಶೇ.20 ರಷ್ಟು ಹೆಚ್ಚಳ ;ವಾಹನ ತೆರಿಗೆ ಶೇ 7 ರಷ್ಟು ಏರಿಕೆ ;ನೊಂದಾಣಿ ಶುಲ್ಕ ಶೇ.14ರಷ್ಟ ಏರಿಕೆ .ಅಂದರೆ ಇವೆಲ್ಲವೂ ಗ್ಯಾರಂಟಿ ಯೇೂಜನೆಗಳ ಸುಸ್ತಿನ ಬಡ್ಡಿ ಜನಸಾಮಾನ್ಯರ ಮೇಲೆ ಹೊರೆಯಾಗಿ ಬಿದ್ದಿದೆ.ಬಜೆಟ್ ಉದ್ದಕ್ಕೂ ಬಳಸಿದ ಹೆಚ್ಚಿನ ಪದಗಳು ಅಂದರೆ ಅಲ್ಪಸಂಖ್ಯಾತ ಪದಗಳು ಅನ್ನುವುದು ಬಹು ಸಂಖ್ಯಾತರ ಗಮನ ಸೆಳೆದಿರುವುದಂತೂ ಸತ್ಯ.
-ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ.
ಉಡುಪಿ.ರಾಜಕೀಯ ವಿಶ್ಲೇಷಕರು.