ರಾಮ ಭಕ್ತನಿಗೆ ಭಾರತರತ್ನ

Upayuktha
0

  



ರಾಮ ಮಂದಿರದ ಹೋರಾಟ ಸುಮಾರು 5 ದಶಕದ ರೋಮಾಂಚನ ಇತಿಹಾಸ ಹೊಂದಿದೆ. ಅದಕ್ಕಾಗಿ ಅನೇಕರ ಬಲಿದಾನದ ಚರಿತ್ರೆ ಇದೆ. ಪ್ರಸ್ತುತ ನಮ್ಮ ಕಾಲಘಟ್ಟದಲ್ಲಿ ರಾಮರಥಯಾತ್ರೆಯ ಮೂಲಕ ರಾಷ್ಟ್ರವ್ಯಾಪಿ  ಹೋರಾಟದ ಕಿಚ್ಚು ಹಚ್ಚಿದವರು  ಶ್ರೀ ರಾಮನ ಅಪ್ಪಟ ಭಕ್ತ ಎಲ್, ಕೆ, ಅಡ್ವಾಣಿಯವರು.


ಲಾಲಕೃಷ್ಣ ಅಡ್ವಾಣಿಯವರು 1927 ನವೆಂಬರ್ 8ರಂದು ಇಂದಿನ ಪಾಕಿಸ್ತಾನದ ಕರಾಂಚಿಯಲ್ಲಿ  ಕಿಶನ್ ಚಂದ್ ಹಾಗೂ ಜ್ಞಾನಿದೇವಿ ದಂಪತಿಗಳ ಉದರದಲ್ಲಿ ಜನಿಸಿದರು. ಅವರು ತಮ್ಮ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣವನ್ನು ಕರಾಂಚಿ  ಹಾಗೂ ಸಿಂದಿನಲ್ಲಿ ಮುಗಿಸಿ 1947ರಲ್ಲಿ ಭಾರತ ವಿಭಜನೆಯಾದಾಗ ತಮ್ಮ ಕುಟುಂಬ ಪರಿವಾರ ಸಮೇತವಾಗಿ ಭಾರತದ ಬಾಂಬೆಯಲ್ಲಿ ಬಂದು ನಿಲ್ಲಿಸಿದರು.ಅದೇ ಬಾಂಬೆಯಲ್ಲಿ ತಮ್ಮ ಹೆಚ್ಚಿನ ವಿದ್ಯಾಭ್ಯಾಸ ಮುಂದುವರೆಸಿ ಕಾನೂನು ಪದವಿಯನ್ನು ಪಡೆದರು.1965 ರಲ್ಲಿ ಶ್ರೀಮತಿ ಕಮಲಾದೇವಿಯನ್ನ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಅವರಿಗೆ ಜಯಂತ ಹಾಗೂ ಪ್ರತಿಭಾ ಎಂಬ ಇಬ್ಬರು ಮಕ್ಕಳಿದ್ದಾರೆ ನಿರಂತರವಾಗಿ ಕುಟುಂಬ ರಾಜಕಾರಣವನ್ನ ವಿರೋಧಿಸುತ್ತಲೇ ಬಂದ ಅಡ್ವಾಣಿಯವರು ತಮ್ಮ ಮಕ್ಕಳನ್ನು ರಾಜಕೀಯ ಪ್ರವೇಶ ಮಾಡದಂತೆ ನೋಡಿಕೊಂಡು ತಮ್ಮ ನಿಲುವಿಗೆ ಕಟಿಬದ್ಧರಾದರು.


 ಎಲ್ ಕೆ ಅಡ್ವಾಣಿ ಅವರ ಬದುಕಿನ ಬಂಡಿಯು ಅನೇಕ ಸಮಸ್ಯೆ ಸವಾಲುಗಳನ್ನು ದಾಟುತ್ತಾ ಸಾಗುತ್ತಿದೆ. 1941 ರಲ್ಲಿ ತಮ್ಮ 14ನೇ ವಯಸ್ಸಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕಕ್ಕೆ ಬಂದರು ಆನಂತರ ಅನೇಕ ವರುಷಗಳು ಸಂಘದ ಪ್ರಚಾರಕರಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು. 1951 ರಲ್ಲಿ ಶ್ಯಾಮ್ ಪ್ರಸಾದ್  ಮುಖರ್ಜಿಯವರಿಂದ  ಸ್ಥಾಪನೆಯಾದ ಜನಸಂಘದ ಸದಸ್ಯರಾಗಿ 1957ರಲ್ಲಿ ಅದರ ಪ್ರಧಾನ ಕಾರ್ಯದರ್ಶಿಯಾಗಿ ಮುಂದೆ ದೆಹಲಿ ಘಟಕದ ಅಧ್ಯಕ್ಷರಾದರು  ದೆಹಲಿಯಿಂದಲೇ 1970ರಲ್ಲಿ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಯಾಗಿ ಮೊದಲ ಬಾರಿಗೆ ಸಂಸತ್ತನ್ನ ಪ್ರವೇಶಿಸಿದರು. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಕೆಲವು ದಿನಗಳ ಶರೇವಾಸವನ್ನು ಅನುಭವಿಸಿದರು  1980 ರಲ್ಲಿ ಜನಸಂಘವನ್ನು ಭಾರತೀಯ ಜನತಾ ಪಕ್ಷವನ್ನಾಗಿ ಬದಲಿಸಿ ಅದರ ಮೊದಲ ಅಧ್ಯಕ್ಷರಾದರು. ಈ ದೇಶ ಕಂಡ ಅಪರೂಪದ ಪ್ರಧಾನಿ ಅಜಾತಶತ್ರು ತನ್ನ ಇಡೀ ಜೀವನವನ್ನೇ  ತಾಯಿ ಭಾರತೀಯ ಸೇವೆಗಾಗಿ ಸಮರ್ಪಿಸಿದ ಅಟಲ್ ಬಿಹಾರಿ ವಾಜಪೇಯಿ ಮತ್ತು ಅಡ್ವಾನಿಯವರ ನೇತೃತ್ವದಲ್ಲಿ 1996ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಪಕ್ಷವೂ ಅತಿ ದೊಡ್ಡ ಏಕೈಕ ಪಕ್ಷವಾಗಿ ಹೊರಹೊಮ್ಮಿತು ಎಲ್ಲರೂ ಅಂದುಕೊಂಡಿದ್ದರು ಅಟಲ್ ಜಿ ಮತ್ತು ಅಡ್ವಾನಿಯವರ ನಡುವೆ ಪ್ರಧಾನಮಂತ್ರಿ ಹುದ್ದೆಗಾಗಿ ಸ್ಪರ್ಧೆ ನಡೆದು ಮನಸ್ತಾಪಗಳು ಉಂಟಾಗಬಹುದೆಂದು ಬಹುತೇಕರ ನಿರೀಕ್ಷೆಯಾಗಿತ್ತು ಆದರೆ ಫಲಿತಾಂಶ ಬಂದ ದಿನದಂದೇ ವಿಜಯದ ಸಂಭ್ರಮಾಚರಣೆಯ ವೇದಿಕೆ ಮೇಲೆ ನಿಂತು ಎಲ್ ಕೆ ಅಡ್ವಾಣಿ ಅವರು ಅಟಲ್ ಜಿಯ ಕೈಯತ್ತಿ ನಮ್ಮ ಮುಂದಿನ ಪ್ರಧಾನಿಗಳು ಅಟಲ್ ಜಿ ಎಂದು ಬಿಟ್ಟರು ಇದು ಅಲ್ಲಿ ನೆರೆದ ಜನಕ್ಕೆ ಮಾತ್ರ ಶಾಕ್ ಆಗದೆ ಸ್ವತಃ ಅಟಲ್ ಜಿಗು ಶಾಕ್ ಆದಂತಾಯಿತು ಯಾವ ಗೆಲುವು ಸೋಲುಗಳು ತಮ್ಮ ಬಂದವ್ಯವನ್ನ ಒಡೆಯಲಾರವು ಎಂದು ತೋರಿಸಿಕೊಟ್ಟರು ಅವರಿಗೆ  ಭಲಾಡ್ಯ ರಾಷ್ಟ್ರ ನಿರ್ಮಾಣದ ಕನಸೇ ಮುಂದಿತ್ತು ಅದಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ ಮಹಾತ್ಯಾಗಿ ಅವರು. ಎಲ್ ಕೆ ಅಡ್ವಾಣಿ ಅವರು 2002ರಲ್ಲಿ ಭಾರತದ ಉಪ ಪ್ರಧಾನಿಗಳಾಗಿ ಅನೇಕ ಪ್ರತಿಭಾವಂತ ಯುವ ಪ್ರತಿಭೆಗಳನ್ನ ಗುರುತಿಸಿ ಬೆಳೆಸಿದರು ಎಂದಿಗೂ ಅವರು ಅಧಿಕಾರಕ್ಕೆ ಅಂಟಿಕೊಂಡು ಕುಳಿತವರಲ್ಲ.


ವಿಶ್ವ ಹಿಂದೂ ಪರಿಷತ್ತಿನ ನೇತೃತ್ವದಲ್ಲಿ ಅಯೋಧ್ಯೆಯ ರಾಮಜನ್ಮ ಭೂಮಿಯ ಚಳುವಳಿಯನ್ನ  ಮುನ್ನೆಲೆಗೆ ತಂದು ರಾಮಮಂದಿರ ಎನ್ನುವುದು ಅದುರಾಷ್ಟ್ರ ಮಂದಿರ ಎನ್ನುವ ಪರಿಕಲ್ಪನೆಯನ್ನು ಹಾಕಿಕೊಟ್ಟರು ರಾಮರಥಯಾತ್ರೆಯ ಮೂಲಕ ದೇಶದ ಮೂಲೆ  ಮೂಲೆಯಲ್ಲೂ ರಾಮನ ಭಜನೆ ಯಾಗುವಂತೆ ಮಾಡಿದರು. ತಮ್ಮ ಇಡೀ ಜೀವನವನ್ನೇ ಆ ರಾಮಮಂದಿರ ಹೋರಾಟಕ್ಕಾಗಿ ಸಮರ್ಪಿಸಿಕೊಂಡು ಭವ್ಯ ಮಂದಿರ ನೋಡುವುದೇ ತಮ್ಮ ಜೀವನದ ಕೊನೆಯ ಆಸೆ ಎಂದವರು. ಅದಕ್ಕಾಗಿ ಅನೇಕ ಕೇಸುಗಳನ್ನ ಹಾಕಿಕೊಂಡು ಕೆಲವು ಬಾರಿ ಸೆರೆಮನೆ ವಾಸವನ್ನು ಅನುಭವಿಸಿದರು.2019 ನವೆಂಬರ್ 9ರಂದು ಈ ದೇಶದ ಸರ್ವೋಚ್ಚ ನ್ಯಾಯಾಲಯವು ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಬೇಕೆಂದು ತೀರ್ಪು  ನೀಡಿತು ಆ ಕ್ಷಣದಲ್ಲಿ ಅಡ್ವಾಣಿಯವರು ಆನಂದ ಭಾಷ್ಪ ಸುರಿಸಿರುವುದು ನಮಗೆಲ್ಲರಿಗೂ ನೆನಪಿದೆ. ಯಾವತ್ತಿಗೂ ಅವರು ಯಾವುದರ ಕ್ರೆಡಿಟ್ಟು ಬಯಸಿದವರಲ್ಲ ಕೆಲವು ದಿನಗಳ ಹಿಂದೆ ರಾಮ ಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ಅವರು ಪತ್ರಿಕೆಗೆ ಒಂದು ಲೇಖನದಲ್ಲಿ ತಿಳಿಸಿದರು  ಪ್ರಭು ಶ್ರೀ ರಾಮನೇ ತನ್ನ ಭಕ್ತನನ್ನ ತನ್ನ ಉದ್ಘಾಟನೆಗಾಗಿ ಆಯ್ಕೆ ಮಾಡಿಕೊಂಡಿದ್ದಾನೆ ಇದನ್ನು ಪ್ರತಿಯೊಬ್ಬರೂ ಆನಂದಿಸಬೇಕೆಂದರು ತಾವೇ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದರು ಆ ಮಂದಿರದ ಎಲ್ಲಾ ಗೌರವ ತಮಗೆ ಸಿಗಬೇಕೆಂದು ಭಯಸಿದವರಲ್ಲ ಪ್ರಭು ಶ್ರೀ ರಾಮ ತನಗೆ ವಹಿಸಿದ ಕಾರ್ಯ ಮಾತ್ರ ತಾನು ಮಾಡಿದೆ ಎಂದು ಹೇಳುತ್ತಾ ಆ ಪ್ರಭು ಶ್ರೀ ರಾಮನ ಕೆಲಸವನ್ನೇ ತಮ್ಮ ಉಸಿರಾಗಿಸಿ ದುಡಿದ ಸನ್ಮಾನ್ಯ ಲಾಲಕೃಷ್ಣ ಅಡ್ವಾಣಿ ಅವರಿಗೆ ಭಾರತ ಸರ್ಕಾರವು ಇಂದು ಭಾರತರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿರುವುದು ಅವರ ಹೋರಾಟದ ತ್ಯಾಗಕ್ಕೆ ನಾವು ನೀಡಿದ ಅಲ್ಪ ಕಾಣಿಕೆ.


-ರಾಮಕೃಷ್ಣ ದೇವರು. ಮರೆಗುದ್ದಿ

ಶ್ರೀ ಷಣ್ಮುಖಾರೂಢ  ಮಠ.ವಿಜಯಪುರ

 ಮೊ :-6364111512


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top