ಆಳ್ವಾಸ್ ಕಾಲೇಜು ಸ್ನಾತಕೋತ್ತರ ಮನೋವಿಜ್ಞಾನ ವಿಭಾಗದಿಂದ ವಿಚಾರ ಸಂಕಿರಣ

Upayuktha
0

ಪರಿಸ್ಥಿತಿ ಅರಿತು ನಿರ್ಧಾರ ಕೈಗೊಳ್ಳಿ: ಡಾ.ವಿನಯ್.ವಿ ಪ್ರಭು




ವಿದ್ಯಾಗಿರಿ: ಯಾವುದೇ ನಿರ್ಧಾರವನ್ನು ಕೈಗೊಳ್ಳುವಾಗ ಪರಿಸ್ಥಿತಿಯನ್ನು ಅರಿತುಕೊಂಡು ಜಾಗರೂಕತೆಯಿಂದ ವರ್ತಿಸಬೇಕು ಎಂದು ಮುಂಬೈ ಎನ್.ಕೆ. ಕಾಲೇಜಿನ ನಿವೃತ್ತ ಸಹ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ.ವಿನಯ್.ವಿ ಪ್ರಭು ಹೇಳಿದರು. 




ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಮನೋವಿಜ್ಞಾನ ವಿಭಾಗವು ಸೆಮಿನಾರ್ ಹಾಲ್‍ನಲ್ಲಿ ಗುರುವಾರ ಹಮ್ಮಿಕೊಂಡ ‘ಮಾರಣಾಂತಿಕ ಆಕರ್ಷಣೆ- ಕೆಟ್ಟ ನಿರ್ಧಾರದಲ್ಲಿ ಸಿಲುಕಿದ ಹಾಗೂ ಅದರ ಪರಿಣಾಮಗಳು’ ಕುರಿತ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು. 




ನಮ್ಮೊಳಗಿನ ಬದ್ಧತೆಯ ಉಲ್ಬಣವೇ ‘ಮಾರಕ ಆಕರ್ಷಣೆ’. ಇದು ನಾವು ಕೈಗೊಳ್ಳುವ ನಿರ್ಧಾರಕ್ಕೆ ಸಂಬಂಧಿಸಿದ ಒಂದು ವಿಚಾರ. ಈ ಬೆಳವಣಿಗೆಯನ್ನು ವ್ಯಾಪಾರ, ಶಿಕ್ಷಣ, ಸಂಬಂಧ ಇತ್ಯಾದಿ ಹಲವು ಕ್ಷೇತ್ರಗಳಲ್ಲಿ ನಾವು ಕಾಣಬಹುದು ಎಂದರು. 




ತಾವು ಆಯ್ಕೆ ಮಾಡಿಕೊಂಡ ಕೋರ್ಸ್ ತಮಗೆ ಸೂಕ್ತವೇ ಎಂಬ ಬಗ್ಗೆ ಹಲವು ವಿದ್ಯಾರ್ಥಿಗಳು ಸಂಶಯ ಪಡುತ್ತಾರೆ. ಇದು ಅವರೊಳಗಿನ ಬದ್ಧತೆಯ ಉಲ್ಬಣತೆಗೆ ಕಾರಣವಾಗುತ್ತದೆ. ಇದೇ ರೀತಿ ವಿವಿಧ ವೃತ್ತಿ ನಿರತರು ತಮ್ಮ ತಮ್ಮ ವೃತ್ತಿ ಕುರಿತ ಬದ್ಧತೆಯನ್ನು ತಾವೇ ಪ್ರಶ್ನಿಸಿಕೊಳ್ಳುತ್ತಾರೆ ಎಂದರು. 




‘ಬದ್ಧತೆಯ ಉಲ್ಬಣದಿಂದ ಹೊರಬರಲು ಪ್ರಮುಖವಾಗಿ ನಾವು ನಮ್ಮ ಮಿತಿಯನ್ನು ಅರಿತುಕೊಳ್ಳಬೇಕು. ನಮ್ಮ ಕಾರ್ಯ ಚಟುವಟಿಕೆ ಕುರಿತು ಸತತ ಪ್ರತಿಕ್ರಿಯೆಯನ್ನು ಪಡೆಯುತ್ತಿರಬೇಕು. ಆ ಪ್ರತಿಕ್ರಿಯೆಗಳು ಕಠಿಣವಾಗಿದ್ದರೂ, ವಾಸ್ತವ ಮತ್ತು ಸತ್ಯದಿಂದ ಕೂಡಿರಬೇಕು. ನಮ್ಮ ಬದ್ಧತೆಯ ಬಗ್ಗೆ ನಮಗೆ ಸ್ಪಷ್ಟತೆ ಇರಬೇಕು’ ಎಂದ ಅವರು, ‘ಯಾವುದೇ ವೃತ್ತಿಯಲ್ಲಿ ಅತೀವ ಮಾನಸಿಕ ಒತ್ತಡ ಅನುಭವಿಸುವ ಬದಲು ಆ ವೃತ್ತಿ ಅಥವಾ ಸಮಸ್ಯೆಯಿಂದ ಸಂಪೂರ್ಣ ಹೊರಬಹುದು ಉತ್ತಮ. ಪ್ರತಿ ವ್ಯಕ್ತಿಗೂ ಎರಡನೇ ಅವಕಾಶವಿದ್ದು, ಅದನ್ನು ಅನುಸರಿಸಬೇಕು’ ಎಂದರು. 




‘ಕವಿ ರಾಬರ್ಟ್ ಫ್ರಾಸ್ಟ್ ಅವರ ‘ವುಡ್ಸ್ ಆರ್ ಡಾರ್ಕ್ ಆ್ಯಂಡ್ ಡೀಪ್...’ ಕವನ ವಾಚಿಸಿದ ಅವರು, ‘ನಾವು ಇನ್ನಷ್ಟು ದೂರ ಸಾಗಬೇಕಾಗಿದೆ. ನಾವು ಮಲಗುವ ಮೊದಲು ಬಹುದೂರ ಸಾಗಬೇಕಿದೆ’ ಎಂಬ ಆಶಯದೊಂದಿಗೆ ಉಪನ್ಯಾಸ ಮುಕ್ತಾಯಗೊಳಿಸಿದರು. ಇದಕ್ಕೂ ಮೊದಲು ಹಲವು ಉದಾಹರಣೆಗಳನ್ನು ನೀಡಿದ ಅವರು ಮಾನಸಿಕ ಒತ್ತಡದಿಂದ ಹೊರಬರುವುದು ಹೇಗೆ ಎಂದು ತಿಳಿಸಿದರು. ಬಳಿಕ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು.  




ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಂಶುಪಾಲ ಡಾ.ಕುರಿಯನ್, ‘ಮಾನಸಿಕ ಒತ್ತಡದಿಂದ ಹೊರಬರಲು ಜನರ ಬಳಿ ಉಪಾಯಗಳು ಇವೆ. ಆದರೆ, ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಇದೆ’. ನಮ್ಮ ನಿರ್ಧಾರಗಳು ಎಂದೂ ಇನ್ನೊಬ್ಬರಿಗೆ ಹಾನಿಮಾಡುವಂತಿರಬಾರದು ಎಂದರು.  




ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಆಡ್ರೆ ಪಿಂಟೊ, ಉಪನ್ಯಾಸಕಿ ಕಾವ್ಯ ಇದ್ದರು. ವಿದ್ಯಾರ್ಥಿನಿ ಅನ್ಸಿಯಾ ಸ್ವಾಗತಿಸಿದರು. ಫಾತಿಮಾ ರಿಫಾ ವಂದಿಸಿದರು. ನವಮಿ ಪರಿಚಯ ವಾಚಿಸಿದರು. ಅಮಿನಾ ಕಾರ್ಯಕ್ರಮ ನಿರೂಪಿಸಿದರು. 




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top