ಉಡುಪಿ: ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ ಮಂಗಳೂರು ಹಮ್ಮಿಕೊಂಡ ನೃತ್ಯೋತ್ಕರ್ಷ 2023 ಎಂಬ ಎರಡು ದಿನದ ನೃತ್ಯ ಸಮಾವೇಶ ಉದ್ಘಾಟನ ಕಾರ್ಯಕ್ರಮವು ಶ್ರೀ ಜನಾರ್ದನ ಮಹಾಂಕಾಳಿ ದೇವಸ್ಥಾನ ಅಂಬಲಪಾಡಿ ಇಲ್ಲಿ ಜರುಗಿತು.
ಉದ್ಘಾಟನೆಯನ್ನು ನೆರವೇರಿಸಿದ ದೇವಳದ ಧರ್ಮದರ್ಶಿಗಳಾದ ಡಾ. ನಿ.ಬಿ. ವಿಜಯಬಲ್ಲಾಳ್ ರವರು, ಮನಸ್ಸಿಗೆ ಮದ ನೀಡದೆ ಮುದ ನೀಡುವ ಮೋಹಕವಾದ ಕಲೆ ಭರತನಾಟ್ಯ. ಕರಾವಳಿಯ ನೃತ್ಯ ಕಲಾವಿದರ ಈ ಸಂಘಟನೆ ನಿಜಕ್ಕೂ ಸ್ತುತ್ಯಾರ್ಹಎಂದರು. ವೇದಿಕೆಯಲ್ಲಿ ಅತಿಥಿಗಳಾಗಿ ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರ್ ರವರು, ಸ್ಥಾಪಕ ಅಧ್ಯಕ್ಷರಾದ ಪಿ. ಕಮಲಾಕ್ಷ ಆಚಾರ್ರವರು ಉಪಸ್ಥಿತರಿದ್ದರು. ಸಮ್ಮೇಳನದ ಅಧ್ಯಕ್ಷರಾದ ಮೈಸೂರಿನ ಪ್ರೊ. ಕೆ. ರಾಮಮೂರ್ತಿ ರಾವ್ ದಂಪತಿಗಳನ್ನು ಗೌರವಿಸಲಾಯಿತು.
ಗೋಷ್ಠಿಗಳಲ್ಲಿ ಮೊದಲು ವಿದ್ವಾನ್ ಚಂದ್ರಶೇಖರ ನಾವಡ ಅಧ್ಯಕ್ಷತೆಯಲ್ಲಿ ಗುರು ಉಷಾ ದಾತಾರ್ ಇವರು ದೇವಾಲಯ ನೃತ್ಯದ ಬಗ್ಗೆ, ಲಂಡನ್ನಿನ ಚಿತ್ರಲೇಖ ಬೋಳಾರ್ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಶೀಲಾ ಚಂದ್ರಶೇಖರ್ ರವರು ಭಕ್ತಿಯ ವಿವಿಧ ಆಯಾಮಗಳ ಬಗ್ಗೆ ನೃತ್ಯ ಪ್ರಾತ್ಯಕ್ಷಿಕೆ, ವಿಚಾರ ಗೋಷ್ಠಿಯಲ್ಲಿ ಭರತನಾಟ್ಯಕ್ಕೆ ಸ್ವನಿಸುರುಳಿ ಸಜೀವ ಹಿಮ್ಮೇಳ ಸಂಗೀತ ಸೂಕ್ತವೇ ಎಂಬ ವಿಷಯದಲ್ಲಿ ಡಾ. ಸಾಗರ್ ತುಮಕೂರು, ವಿದ್ವಾನ್ ಪುಲಕೇಶಿ ಕಸ್ತೂರಿ ಬೆಂಗಳೂರು, ವಿ.ಯಶಾ ರಾಮಕೃಷ್ಣ, ವಿ.ಭ್ರಮರಿ ಶಿವಪ್ರಕಾಶ್, ಡಾ. ಸಹನಾ ಭಟ್ ಹುಬ್ಬಳ್ಳಿ, ಡಾಕ್ಟರ್ ಚೇತನಾ ರಾಮಕೃಷ್ಣ ಮೈಸೂರು ಸಮನ್ವಯಕಾರರಾಗಿ ವಿ. ಸುಮಂಗಲಾ ರತ್ನಾಕರ್ ಭಾಗವಸಿದ್ದರು.
ರಾಜೇಶ್ ಟಿ.ಕೆ ಬೆಂಗಳೂರು, ಹಾಗೂ ಶ್ರೀಜಿತ್ ಕೃಷ್ಣ ಚೆನೈ ಬಳಗದವರಿಂದ ನೃತ್ಯ ಕಾರ್ಯಕ್ರಮ ಸಂಪನ್ನಗೊಂಡಿತು ಕಾರ್ಯದರ್ಶಿ ವಿದ್ವಾನ್ ಸುಧೀರ್ ರಾವ್ ಕೊಡವೂರ್ ರವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವಿದುಷಿ ಪಾವನರವರು ಪ್ರಾರ್ಥಿಸಿದರು, ವಿ.ಮಾನಸಿ ಸುಧೀರ್ ಬಳಗದವರಿಂದ ಪುಷ್ಪಾಂಜಲಿ ನೃತ್ಯದ ಮುಖಾಂತರ ಸ್ವಾಗತಿಸಿದರು. ಕಾರ್ಯಧ್ಯಕ್ಷ ವಿದ್ವಾನ್ ಯು ಕೆ ಪ್ರವೀಣ್ ವಂದಿಸಿದರು. ಸಮ್ಮೇಳನ ಸಮಿತಿಯ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ