ಮಂಗಳೂರು: ಕದ್ರಿಯಲ್ಲಿ ನಡೆದ ಕಟೀಲು ಮೇಳದ ಯಕ್ಷಗಾನ ಪ್ರದಶ೯ನದಲ್ಲಿ ಅಮ್ಮುಂಜೆ ಮೋಹನ್ ಇವರನ್ನು 'ಕದ್ರಿ ವಿಷ್ಣು ಪ್ರಶಸ್ತಿ 2023' ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕದ್ರಿ ಯಕ್ಷ ಬಳಗದ ಅಧ್ಯಕ್ಷ ಕದ್ರಿ ನವನೀತ್ ಶೆಟ್ಟಿ, ಕಟೀಲು ಮೇಳದಲ್ಲಿ 3 ದಶಕಗಳ ತನ್ನ ಯಕ್ಷಯಾನವನ್ನು ಯಶಸ್ವಿಯಾಗಿ ಮುನಡೆಸುತ್ತಿರುವ ತೆಂಕುತಿಟ್ಟಿನ ಪ್ರಸಿದ್ಧ ವೇಷಧಾರಿ ಗುಂಡಿಲ ಗುತ್ತು ಶಂಕರ್ ಶೆಟ್ಟಿ, ಪಟ್ರೆ ಚಂದ್ರು ಹಾಗೂ ಧಮ೯ಸ್ಥಳ ಯಕ್ಷಗಾನ ಕೇಂದ್ರದಲ್ಲಿ ಡಾ. ಕೊಲ್ಯೂರು ರಾಮಚಂದ್ರ ರಾವ್ ಅವರಿಂದ ನಾಟ್ಯ ಕಲಿತು ಕುರಿಯಾ ಗಣಪತಿ ಶಾಸ್ತ್ರಿ, ಬೊಟ್ಟಿಕೆರೆ ಪುರುಷೋತ್ತಮ್ ಪೂಂಜ, ಪಟ್ಲ ಸತೀಶ್ ಶೆಟ್ಟಿ ಭಾಗವತರ ಮಾಗ೯ದಶ೯ನದಲ್ಲಿ ರಂಗದಲ್ಲಿ ಮೆರೆದ ಖ್ಯಾತ ಪುಂಡು ವೇಷಧಾರಿ ಸುಧನ್ವ, ಬಬ್ರುವಾಹನ, ಅಭಿಮನ್ಯು, ಚಂಡ-ಮುಂಡ, ಸುದಶ೯ನ, ಅಶ್ವತ್ಥಾಮ, ಹಿರಣ್ಯಾಕ್ಷ, ಋತುಪರ್ಣ, ಜಾಂಬವ, ರಕ್ತಬೀಜ ಮೊದಲಾದ ಪಾತ್ರಗಳಲ್ಲಿ ತನ್ನದೇ ಶೈಲಿಯಿಂದ ಮೆರೆಯುತ್ತಿರುವ ಸರಳ-ಸಜ್ಜನಿಕೆಯ ರಂಗನಿಷ್ಠ ಕಲಾವಿದ ಎಂದು ಪ್ರಶಂಸಿಸಿದರು.
ಸನ್ಮಾನದ ಪ್ರತೀಕವಾಗಿ ಮಾತನಾಡಿದ ಅಮ್ಮುಂಜೆ ಮೇರು ಹಿರಿಯ ಕಲಾವಿದ ʼಕದ್ರಿ ವಿಷ್ಣು ಪ್ರಶಸ್ತಿʼ ಯು ನನ್ನ ಈವರೆಗಿನ ಸನ್ಮಾನ ಗೌರವಗಳಲ್ಲಿ ಅತೀ ಸಂತಸ ಹಾಗೂ ಗೌರವದ ಪ್ರತೀಕ ಎಂದರು.
ಈ ಸಂದರ್ಭದಲ್ಲಿ ಲೀಲಾಕ್ಷ ಕರ್ಕೇರ, ನಿವೇದಿತಾ ಶೆಟ್ಟಿ, ಪ್ರದೀಪ್ ಕುಮಾರ್ ಕಲ್ಕೂರ, ಭಾಸ್ಕರ್ ರೈ ಕುಕ್ಕುವಳ್ಳಿ, ಪ್ರದೀಪ್ ಆಳ್ವ, ಕೃಷ್ಣ ಶೆಟ್ಟಿ ತಾರೆಮಾರ್, ಸುರೇಶ್ ಶೆಟ್ಟಿ ಬೆಂಗಳೂರು, ಭುಜಬಲಿ ಧರ್ಮಸ್ಥಳ, ಬೊಂಡಾಲ ಸಚ್ಛಿದಾನಂದ ಶೆಟ್ಟಿ, ಗುಂಡಿಲಗುತ್ತು ಶಂಕರ್ ಶೆಟ್ಟಿ, ಸುಧಾಕರ ಪೇಜಾವರ, ರವೀಂದ್ರನಾಥ್ ಶೆಟ್ಟಿ, ಜನಾಧ೯ನ ಅಮ್ಮುಂಜೆ, ಪಣಂಬೂರು ಶ್ರೀಧರ್ ಐತಾಳ್, ತಾರನಾಥ್ ಶೆಟ್ಟಿ ಬೋಳಾರ್, ಎಲ್ಲೂರು ರಾಮಚಂದ್ರ ರಾವ್ ಹಾಗೂ ಮುಲ್ಕಿ ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.
- ಮುಲ್ಕಿ ಕರುಣಾಕರ ಶೆಟ್ಟಿ
ಮೊ: 9880425265
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ