ಧರ್ಮಸ್ಥಳ : ಕನ್ನಡದ ಹಳೆಯ ಹಾಡುಗಳ ಸಾಲಿನಲ್ಲಿ ಹೊಂಬಿಸಿಲು ಚಿತ್ರದ 'ನೀರ ಬಿಟ್ಟು ನೆಲೆದ ಮೇಲೆ' ಹಾಡು ಇನ್ನೂ ತನ್ನ ಛಾಪನ್ನು ಉಳಿಸಿಕೊಂಡಿದೆ. ಈ ಮಧುರ ಹಾಡನ್ನು ರಾಕ್ ಸ್ಟಾರ್ ಗುರುಕಿರಣ್ ಧ್ವನಿಯಲ್ಲಿ ಕೇಳಿದರೆ ಹೇಗಿರುತ್ತದೆ? ಶಹನಾಯಿ ಹಾಗೂ ಹಾಡಿನ ಜುಗಲ್ ಬಂದಿಗೂ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ರೆ? ಹಾಡಿನ ಕಾರ್ಯಕ್ರಮದಲ್ಲಿ ಪ್ರೇಕ್ಷಕರು ನಗೆಯ ಕಡಲಲ್ಲಿ ತೇಲಿಹೋದರೆ?
ಹಾಗಾದರೆ ಹಳೆ ಹಾಡುಗಳಿಗೆ ಹೊಸ ರೂಪ ದೊರಕಿ ಮನಸ್ಸು ಆಹ್ಲಾದಗೊಳ್ಳುತ್ತದೆ. ಅಲ್ಲಿ ಕೇಳುವ ಹಾಡನ್ನು ಗುನಗಬೇಕು ಎನಿಸುತ್ತದೆ. ಇವೆಲ್ಲಕ್ಕೂ ಸಾಕ್ಷಿಯಾಗಿದ್ದು ಧರ್ಮಸ್ಥಳದ ಅಮೃತವರ್ಷಿಣಿ ವೇದಿಕೆ. ಧರ್ಮಸ್ಥಳ ಲಕ್ಷದೀಪೋತ್ಸವದ ಪ್ರಯುಕ್ತ ಅಮೃತವರ್ಷಿಣಿ ಸಭಾಂಗಣದಲ್ಲಿ ಲಲಿತಕಲಾ ಗೋಷ್ಠಿ ಕಾರ್ಯಕ್ರಮ ಜರುಗಿತು. ಈ ಪ್ರಯುಕ್ತ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್, ಅನುರಾಧಾ ಭಟ್, ಇಂದು ನಾಗರಾಜ್, ಸಂತೋಷ್ ವೆಂಕಿ ಮೊದಲಾದವರಿಂದ 'ಗಾನ ನೃತ್ಯ ವೈವಿಧ್ಯ - ಗುರುಕಿರಣ್ ನೈಟ್' ಕಾರ್ಯಕ್ರಮ ನಡೆಯಿತು.
ಪಾಪ್ ಮಿಶ್ರಿತ ಹಾಡುಗಳಿಂದ ಪ್ರಸಿದ್ಧರಾದ ಗುರುಕಿರಣ್ ನಮ್ಮ ಎಂದಿನ ಶೈಲಿಯನ್ನು ಹೊರತುಪಡಿಸಿ, 'ನೀರ ಬಿಟ್ಟು ನೆಲದ ಮೇಲೆ' ಎಂಬ ವಿರುಧ್ದ ಶೈಲಿಯ ಗಾಯನವನ್ನು ಆಯ್ದುಕೊಂಡು, ತಮ್ಮ ಗಾಯನ ಶೈಲಿಯನ್ನು ಮಿಶ್ರಿಣ ಮಾಡಿ ಪ್ರೇಕ್ಷರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮೆಲೋಡಿ ಹಾಡುಗಳನ್ನು ಇಂದಿನ ಪಾಪ್ ಸಂಗೀತಕ್ಕನುಗುಣವಾಗಿ ಹಾಡುವಾಗ, ಹಾಡು ತನ್ನ ಸ್ವಾರಸ್ಯ ಕಳೆದುಕೊಳ್ಳುವ ಸಂದರ್ಭವೇ ಹೆಚ್ಚಾಗಿರುತ್ತದೆ, ಒಬ್ಬ ಪರಿಣಿತ ಸಂಗೀತಗಾರ ಮಾತ್ರ ಅದರ ಮೂಲ ಸ್ವರೂಪವನ್ನು ಹಾಳುಗೆಡದಂತೆ, ಪರಿವರ್ತಿಸಿಕೊಳ್ಳುತ್ತಾನೆ ಅದರಲ್ಲಿ ಗುರುಕಿರಣ್ ಯಶಸ್ವಿಯಾದರು.
ಶಯನಾಯಿ ಹಾಗೂ ಸಂಗೀತದ ಜುಗಲ್ ಬಂದಿ ಸಂಗೀತಾಸಕ್ತಿ ಅಧಿಕವಾಗಿರುವವರಿಗೆ ಸಾಮಾನ್ಯವಾಗಿ ಮೆಚ್ಚುಗೆಯಾಗುತ್ತದೆ, ಆದರೆ ಎಲ್ಲಾ ವರ್ಗದ ವೀಕ್ಷಕರನ್ನು ರಂಜಿಸಿದ್ದು ಶಹನಾಯಿ ಮಧು ಹಾಗೂ ಅನುರಾಧ ಭಟ್ರವರ ಜುಗಲ್ ಬಂಮತ್ತು ಸಂಗೀತ ವಾದಕರು ಹಾಗೂ ಗಾಯಕಿ ಇಂದು ನಾಗರಾಜ್ರವರು ಜೋಡಿಯಾಗಿ ಹೇಳಿದ 'ಬಾಳ ಬಂಗಾರ ನೀನು ಹಾಡು' ಹೆಚ್ಚು ಚಪ್ಪಾಳೆ ಗಿಟ್ಟಿಸಿಕೊಂಡಿದ್ದು ಮಾತ್ರವಲ್ಲದೆ, ಪ್ರೇಕ್ಷಕರನ್ನು ಹಿಡಿದಿಟ್ಟಿತು.
ಸಾಕಷ್ಟು ಹಾಡುಗಳ ಮೂಲಕ ರಂಜಿಸಿದ ಸಂತೋಷ್ ವೆಂಕಿಯ 'ನೀನೇ ರಾಮಾ ನೀನೇ ಶ್ಯಾಮ' ಹಾಡು ಇಂದು ಧರ್ಮಸ್ಥಳದಲ್ಲಿ ನಡೆಯಲಿರುವ ಸರ್ವಧರ್ಮ ಸಮ್ಮೇಳನಕ್ಕೆ ಉತ್ತಮ ಮುನ್ನುಡಿಯನ್ನು ಬರೆಯಿತು. 'ನಾಟ್ಯ ಡಾನ್ಸ್ ಅಕಾಡಮಿ' ಹಾಗೂ 'ಬಾಯ್ಸ್ ಝೋನ್ ನೃತ್ಯ' ತಂಡದವರೂ ತಮ್ಮ ಅವಕಾಶವನ್ನು ಸದುಪಯೋಗ ಪಡಿಸಿಕೊಂಡರು. ಇದಲ್ಲದೇ ಗಾಯಕ ಗಣೇಶ್ ಕಾರಂತ್, ಜಿತೇಂದ್ರ ಕುಮಾರ್ ಕೂಡ ಪ್ರೇಕ್ಷಕರನ್ನು ರಂಜಿಸಿದರು.
'ಕೊಲ್ಲೇ ನನ್ನನ್ನೇ', ನಾಗರಹಾವು ಚಿತ್ರದ ಬಾರೆ ಬಾರೆ, ಹಾವಿನ ದ್ವೇಷ, ಗೀತಾಂಜಲಿ ಮುಂತಾದ ಹಾಡುಗಳು ಕೂಡ ಉತ್ತಮವಾಗಿದ್ದವು. ಸಂಗೀತ ಕಾರ್ಯಕ್ರಮದಲ್ಲಿ ತಬಲ ಸಾರಥ್ಯವನ್ನು ವೇಣು, ರಿಧಮ್ನಲ್ಲಿ ಸೋಹನ್,ಡ್ರಮ್ಸ್ನಲ್ಲಿ ಮಂಜು, ಗಿಟಾರ್ನಲ್ಲಿ ಋತ್ವಾ, ಕೀಬೋಡ್ನಲ್ಲಿ ವೇಣು,ಕೊಳಲ್ಲಿ ಭರತ್ ತಮ್ಮ ನೈಪುಣ್ಯತೆಯನ್ನು ಪ್ರದರ್ಶಿಸಿದರು. ಕಾರ್ಯಕ್ರಮವನ್ನು ನಿರೂಪಕಿ ಅನುಪಮಾ ಭಟ್ ನಿರೂಪಿಸಿದರು.
- ಸುಚೇತಾ ಹೆಗಡೆ
ದ್ವಿತೀಯ ಎಂ.ಎ
ಪತ್ರಿಕೋದ್ಯಮ ಮತ್ತು ಸಮೂಹ ಸಂಹನ ವಿಭಾಗ
ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರ, ಉಜಿರೆ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ