ಬೆಂಗಳೂರು: ಬಿಎಂಎಸ್ ಮಹಿಳಾ ಸ್ವಾಯತ್ತ ಮಹಾವಿದ್ಯಾಲಯ, ಇಂದು (ಡಿ.1) ಬೆಳಿಗ್ಗೆ 11 ಗಂಟೆಗೆ ಬಸವನಗುಡಿಯ ಕಾಲೇಜಿನ ಆವರಣದಲ್ಲಿ ಪದವಿ ಪ್ರದಾನ ಸಮಾರಂಭವನ್ನು ಆಚರಿಸಿತು.
ಈ ಸಮಾರಂಭದಲ್ಲಿ ತಮ್ಮ ಶೈಕ್ಷಣಿಕ ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಪದವಿ ವಿದ್ಯಾರ್ಥಿಗಳ ಗಮನಾರ್ಹ ಸಾಧನೆಗಳನ್ನು ಗೌರವಿಸಲಾಯಿತು.
ಬಿಎಂಎಸ್ ಶಿಕ್ಷಣ ದತ್ತಿಯ ಧರ್ಮದರ್ಶಿಗಳಾದ ಹಾಗೂ ಬಿಎಂಎಸ್ ಮಹಿಳಾ ಮಹಾವಿದ್ಯಾಲಯದ ಅಧ್ಯಕ್ಷರಾದ ಡಾ.ಬಿ.ಎಸ್. ರಾಗಿಣಿ ನಾರಾಯಣ್ ರವರು ಸಮಾರಂಭದ ಗೌರವಾನ್ವಿತ ಅಧ್ಯಕ್ಷತೆಯನ್ನು ವಹಿಸಿದ್ದರು.
ಗೌರವ ಅತಿಥಿಗಳಾಗಿ ಬಿಎಂಎಸ್ ಶಿಕ್ಷಣ ದತ್ತಿಯ ಧರ್ಮದರ್ಶಿಗಳಾದ ಅವಿರಾಮ್ ಶರ್ಮಾರವರು, ಬಿಎಂಎಸ್ ಶಿಕ್ಷಣ ದತ್ತಿಯ ಆಡಳಿತ ನಿರ್ದೇಶಕರಾದ ವಿಂಗ್ ಕಮಾಂಡರ್ ಆರ್.ಎ. ರಾಘವನ್ ರವರು, ಬಿಎಂಎಸ್ ಆಸ್ಪತ್ರೆ ದತ್ತಿಯ ಅಧ್ಯಕ್ಷರಾದ ಗೌತಮ್ ವಿ ಕಲತ್ತೂರ್ ರವರು ಆಗಮಿಸಿದ್ದರು.
ಡಾ. ಬಿ.ಎಸ್. ರಾಗಿಣಿ ನಾರಾಯಣ್ ರವರು ಪದವಿ ಪ್ರದಾನ ಸಮಾರಂಭವನ್ನು ಆರಂಭಿಸಲು ಮುಕ್ತವಾಗಿ ಘೋಷಿಸುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು
ಬಿಎಂಎಸ್ ಮಹಿಳಾ ಸ್ವಾಯತ್ತ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ವಸುಂಧರಾ ಡಿ ಇ ರವರು ಗಣ್ಯರನ್ನು ಸ್ವಾಗತಿಸಿದರು.
ಬಿಎಂಎಸ್ ಶಿಕ್ಷಣ ದತ್ತಿಯ ಉಪ ನಿರ್ದೇಶಕರಾದ ಪ್ರಸಾದ್ ರವರು, ಹಣಕಾಸು ಅಧಿಕಾರಿಗಳಾದ ಬಿಎಸ್ ಸಂಜೀವರವರು, ಹಿರಿಯ ಹಣಕಾಸು ವ್ಯವಸ್ಥಾಪಕರಾದ ಅನಿರ್ಬನ್ ಶರ್ಮಾ ರವರು, ಬಿಎಂಎಸ್ ಪದವಿ ಪೂರ್ವ ಕಾಲೇಜಿನ ಪ್ರಭಾರಿ ಪ್ರಾಂಶುಪಾಲರಾದ ಡಾ. ಸುರೇಶ್ ರವರು, ಬಿಎಂಎಸ್ ಮಹಿಳಾ ಸ್ವಯತ್ತ ಮಹಾವಿದ್ಯಾಲಯದ ಉಪ ಪ್ರಾಂಶುಪಾಲಕರಾದ ಶ್ರೀಮತಿ ಗಾಯತ್ರಿ ಎ ರವರು, ಶೈಕ್ಷಣಿಕ ಡೀನ್ ರಾದ ಡಾ. ರೀಟಾ ಭಟ್ಟಾಚಾರ್ಜಿ ರವರು ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಎಸ್. ಅಹಲ್ಯರವರು ಸಂಸ್ಕೃತ ಶ್ಲೋಕದೊಂದಿಗೆ ಪದವೀಧರರನ್ನು ಉದ್ದೇಶಿಸಿ ಮಾತನಾಡಿ, ಯುವ ಪದವೀಧರರನ್ನು ಪೋಷಿಸಿದ ಪೋಷಕರನ್ನು ಶ್ಲಾಘಿಸಿದರು. ಇದು ವಿದ್ಯಾರ್ಥಿಗಳ ಜೀವನದ ಪ್ರಮುಖ ದಿನವಾಗಿದೆ ಎಂದು ಹೇಳಿದರು. ಆದರೆ ಪಾಶ್ಚಿಮಾತ್ಯರು ಪದವಿ ದಿನದ ಸಂಪ್ರದಾಯವನ್ನು ಪ್ರಾರಂಭಿಸಲಿಲ್ಲ. ತೈತ್ತಿರೀಯ ಉಪನಿಷತ್ತುಗಳಲ್ಲಿ ಉಲ್ಲೇಖಿಸಿದಂತೆ ಇದು ಭಾರತೀಯರ ಪರಿಕಲ್ಪನೆಯಾಗಿದೆ ಎಂದರು.
ನೂತನ ಪದವೀಧರರಿಗೆ PDC ಗಳನ್ನು ನೀಡಲಾಯಿತು ಮತ್ತು ಇದು ಎಲ್ಲಾ ಪದವೀಧರರ ಉಜ್ವಲ ಭವಿಷ್ಯದ ನಿರೀಕ್ಷೆಯೊಂದಿಗೆ ಶೈಕ್ಷಣಿಕ ಸಾಧನೆಯ ಸ್ಮರಣೀಯ ಆಚರಣೆಯಾಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ