ಬೆಂಗಳೂರು: ಇಂದು ಹಂಸಜ್ಯೋತಿ ಟ್ರಸ್ಟ್‌ ಬೆಂಗಳೂರು ವತಿಯಿಂದ 68ನೇ ಕನ್ನಡ ನಾಡ ಹಬ್ಬ

Upayuktha
0


ಬೆಂಗಳೂರು: ಹಂಸಜ್ಯೋತಿ ಟ್ರಸ್ಟ್‌ ಬೆಂಗಳೂರು ವತಿಯಿಂದ 68ನೇ ಕನ್ನಡ ನಾಡ ಹಬ್ಬದ ಪ್ರಯುಕ್ತ ಹಂಸ ಸಾಂಸ್ಕೃತಿಕ- ಸಾಮಾಜಿಕ ಸಿಂಚನ ಕಾರ್ಯಕ್ರಮ ಡಿ.20ರಂದು ಬುಧವಾರ ನಡೆಯಲಿದೆ.


ಅದರ ಅಂಗವಾಗಿ ಕಿದ್ವಾಯಿ ಆಸ್ಪತ್ರೆಯ ರೋಗಿಗಳಿಗೆ ಬೆಳಗಿನ ಉಪಾಹಾರ, ಹಣ್ಣುಗಳು, ಸಿಹಿ ವಿತರಣೆ ಮಾಡಲಾಗುವುದು. ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆ, ವೆಂಕಟೇಶ್ವರ ಧರ್ಮಶಾಲ, ಕಪೂರ್ ಪಾರ್ಕ್‌ನ ಮುಂಭಾಗದಲ್ಲಿ ಬೆಳಗ್ಗೆ 9 ಗಂಟೆಗೆ ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯರಾಮ್ ರಾಯ್‌ಪುರ ಉದ್ಘಾಟಿಸಲಿದ್ದಾರೆ.


ಬೆಂಗಳೂರು ನಗರ ಜಿಲ್ಲೆ ಅಬಕಾರಿ ಉಪ ಆಯುಕ್ತ ಡಾ. ಬಿ.ಆರ್ ಹಿರೇಮಠ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ. ಧರಣಿದೇವಿ ಮಾಲಗತ್ತಿ, ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯ ನಿರ್ದೇಶಕ ಡಾ|| ವಿ. ಲೋಕೇಶ್, ಗಾಂಧಿಬಜಾರ್ ವಿದ್ಯಾರ್ಥಿಘ ಭವನದ ಮಾಲೀಕರಾದ ಎಸ್. ರಾಮಕೃಷ್ಣ ಅಡಿಗ, ಶೇಷಾದ್ರಿಪುರ ಶಿಕ್ಷಣ ದತ್ತಿ ಗೌರವ ಪ್ರಧಾನ ಕಾರ್ಯದರ್ಶಿ ಡಾ. ವೂಡೇ ಪಿ. ಕೃಷ್ಣ, ಹಿರಿಯ ರಂಗಕರ್ಮಿ ಶ್ರೀನಿವಾಸ್ ಜಿ. ಕಪ್ಪಣ್ಣ, ಎನ್‌ಟಿಪಿಸಿ ಮುಖ್ಯ ಸಲಹೆಗಾರ ಎಂ.ಟಿ ಜಯರಾಂ, ಬೆಂಗಳೂರು ವಿಶ್ವವಿದ್ಯಾಲಯದ ಡಾ. ಆರ್. ಸರ್ವಮಂಗಳ ಮುಂತಾದವರು ಭಾಗವಹಿಸಲಿದ್ದಾರೆ.


ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ಡೊಳ್ ಚಂದ್ರು ತಂಡದವರಿಂದ ಡೊಳ್ಳು, ವೀರಗಾಸೆ, ಪೂಜಾಕುಣಿತ ಹಾಗೂ ಚಿಲಿಪಿಲಿ ಗೊಂಬೆ ಕುಣಿತಗಳ ಜಾನಪದ ಝೇಂಕಾರ ನಡೆಯಲಿದೆ.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top