ಭಯೋತ್ಪಾದನೆಯನ್ನು ಪ್ರಶಂಸೆ ಮಾಡುವ, ಪರೋಕ್ಷವಾಗಿ ಭಯೋತ್ಪಾದಕರನ್ನು ಬೆಂಬಲಿಸುವ ದೇಶದ ಯಾವುದೇ ವ್ಯಕ್ತಿ, ಸಂಸ್ಥೆ, ಪಕ್ಷಗಳಿದ್ದರೂ... ಅಂತಹ ವ್ಯಕ್ತಿ, ಸಂಸ್ಥೆ, ಪಕ್ಷಗಳ ವಿರುದ್ದ ನಮ್ಮ ನಿಲುವು, ವ್ಯವಹಾರಗಳಿರಲಿ.
ಮುಂದಿನ ಪ್ರತೀ ಚುನಾವಣೆಯಲ್ಲೂ ನಮ್ಮ ಮತ ಭಯೋತ್ಪಾದನೆಯನ್ನು ಬೆಂಬಲಿಸುವ ವ್ಯಕ್ತಿ, ಪಕ್ಷಗಳ ವಿರುದ್ದವಾಗಿರಲಿ ರಾಕ್ಷಸ ಭಯೋತ್ಪಾದಕರನ್ನು ಬೆಂಬಲಿಸುವ ವ್ಯಕ್ತಿ ನನ್ನ ಹತ್ತಿರದ ಸಂಬಂಧಿಯಾದರೂ ಆತನನ್ನು ವಿರೋಧಿಸುವುದು... ಮನು ಕುಲದ ಉಳಿವಿಗಾಗಿ, ವಿಶ್ವದ ಶಾಂತಿಗಾಗಿ, ನಮ್ಮ ಸಹನೀಯ ಭವಿಷ್ಯದ ಬದುಕಿಗಾಗಿ ಅನಿವಾರ್ಯ.
ದೇಶದ ನೂರಾರು ಪಕ್ಷಗಳಲ್ಲಿ ಯಾವುದೇ ಪಕ್ಷ ಭಯೋತ್ಪಾದನೆಯನ್ನು ಬೆಂಬಲಿಸುತ್ತದೆ ಎಂದಾದರೆ, ಆ ಪಕ್ಷದ ವಿರುದ್ದ ನಮ್ಮ 'ಮತ' ಚಲಾಯಿಸಬೇಕು.
ಭಯೋತ್ಪಾದಕರನ್ನು ಬೆಂಬಲಿಸುವ ಯಾರೇ ದರಿದ್ರ ವ್ಯಕ್ತಿಗಳಿರಲಿ, ಬೆಂಬಲಿಸುವ ಯಾರೇ ದರಿದ್ರ ರಾಜಕಾರಣಿಗಳಿರಲಿ, ಬೆಂಬಲಿಸುವ ಯಾವುದೇ ದರಿದ್ರ ಪಕ್ಷಗಳಿರಲಿ ಅವುಗಳಿಗೆ ನಮ್ಮದೊಂದು ಧಿಕ್ಕಾರವಿರಲಿ.
- ಅರವಿಂದ ಸಿಗದಾಳ್, ಮೇಲುಕೊಪ್ಪ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ