ಕಲೆಗೆ ಬೆಲೆ ಕಟ್ಟಲು ಅಸಾಧ್ಯ. ಕಲಾ ಕುಂಚದಿಂದ ವಿವಿಧ ಚಿತ್ತಗಳನ್ನು ಬಿಡಿಸಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಚಿತ್ರ ಕಲಾವಿದ ಸೋಮಶೇಖರ್ ಅರಕಲಗೂಡಿನಲ್ಲಿ 2002ರಲ್ಲಿ ನಡೆದ 8ನೇ ಹಾಸನ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸ್ಥಳೀಯ ಚಿತ್ರ ಕಲಾವಿದ ಸೋಮಶೇಖರ್ ತಮ್ಮ ಪೈಂಟಿಂಗ್ಸ್ ಪ್ರದರ್ಶಿಸಿದ್ದರು. ಈ ವರ್ಷ ಅರಕಲಗೂಡಿನಲ್ಲಿ ನಡೆದ 21ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲೂ ಇವರ ಕಲಾಕೃತಿಗಳ ಪ್ರದರ್ಶನವಿತ್ತು. ಈ ಎರಡೂ ಸಂದರ್ಭ ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಈ ವರ್ಷ ಸೋಮಶೇಖರ್ ಅವರ ಕಲಾಮಳಿಗೆಗೆ ಭೇಟಿ ನೀಡಿ ಚಿತ್ರಗಳ ವೀಕ್ಷಣೆ ಮಾಡಿ ಪೇಂಟಿಂಗ್ಗಳ ವಿವರಣೆ ಪಡೆದಿದ್ದೆ.
ಸೋಮಶೇಖರ್ಗೆ ನನ್ನ ಪೋನ್ ನಂಬರ್ ನೀಡಿ, ಅವರ ಕಲಾ ಪರಿಚಯ ಬರೆಯಲು ಬಯೋಡೇಟಾ ಕಳಿಸಲು ಕೋರಿ ಬಸ್ ಹತ್ತಿ ಹಾಸನಕ್ಕೆ ವಾಪಸ್ಸಾಗಿ ಆರು ತಿಂಗಳಾಗಿದೆ. ಸದ್ಯ ಲೋಕ ದೃಷ್ಟಿ ಕಲಾ ಸೃಷ್ಟಿ ಕಲಾವಿದರ ಕಲಾಸಾಧನೆಯ ಪುಸ್ತಕ ಪ್ರಕಟಿಸಲು ಸಿದ್ಧತೆ ಮಾಡಿಕೊಳ್ಳುತ್ತಿರಲು ದಿಢೀರನೇ ಸೋಮಶೇಖರ್ ತಮ್ಮ ಭಯಾನಕ ಪೈಂಟಿಂಗ್ಸ್ಗಳೊಂದಿಗೆ ಬಯೋಡೇಟಾ ಕಳಿಸಿದ್ದರು.
ಶ್ರೀಮತಿ ಜವರಮ್ಮ ರಾಮೇಗೌಡ ದಂಪತಿಗಳ ಹಿರಿಯ ಮಗ. ಸೋಮಶೇಖರ್ ಚಿಕ್ಕವನಿರುವಾಗಲೇ ಕಲೆಯಲ್ಲಿ ಬಹಳ ಆಸಕ್ತಿ ಉಳ್ಳವರಾಗಿ ಅನಕೃ ಆಟ್ರ್ಸ್ ಎಂದೇ ಅರಕಲಗೂಡಿನಲ್ಲಿ ಪ್ರಖ್ಯಾತಿ ಪಡೆದಿದ್ದರಂತೆ..! ಹಾಸನದ ನಿರ್ಮಲಾ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಆರ್ಟ್ ಮಾಸ್ಟರ್ ಡಿಪ್ಲೋಮಾ ಮಾಡುವಾಗಲೇ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಮಾಡಿದ್ದವರು. ಹಂಪಿ ಯೂನಿವರ್ಸಿಟಿಯಲ್ಲಿ ಪದವಿ ಪಡೆದಿದ್ದಾರೆ.
ಸುಮಾರು 25 ವರ್ಷಗಳ ಚಿತ್ರಕಲಾಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರಿನ ಪ್ರತಿಷ್ಟಿತ ಶಾಲೆಗಳಲ್ಲಿ ಶಿಕ್ಷಕರಾಗಿ ಮತ್ತು ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಸಾವಿರಾರು ಮಕ್ಕಳಿಗೆ ಚಿತ್ರಕಲೆ ಕಲಿಸಿದ್ದಾರೆ. ಬೆಂಗಳೂರಿನಲ್ಲಿ ತಮ್ಮ ಸ್ವಂತ ಕಲಾ ಹವ್ಯಾಸಿ ಶಾಲೆಯನ್ನು ತೆರೆದ ಇವರ ವಿದ್ಯಾರ್ಥಿಗಳು ಅಮೇರಿಕಾ ಮತ್ತು ದುಬೈಗಳಲ್ಲಿ ಇಂಜಿನಿಯರ್ಗಳಾಗಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ವಾಸ್ತವಿಕ ಮತ್ತು ಸಮಕಾಲೀನ ಕಲೆ ಬಾವಚಿತ್ರ ರಿಯಲಿಸ್ಟಿಕ್ ಚಿತ್ರಕಲೆ ಮೈಗೂಡಿಸಿಕೊಂಡಿದ್ದಾರೆ. ಇವರ ಕಲಾಕೃತಿಗಳು ದೇಶ ವಿದೇಶಗಳಲ್ಲಿ ಸೇಲ್ ಆಗಿವೆ. ಇವರು ರಚಿಸುವ ಕಲಾಕೃತಿಗಳು ಪಾರದರ್ಶಕ ಜಲವರ್ಣದಲ್ಲಿ ಲ್ಯಾಂಡ್ಸ್ಕೇಪ್ಗಳು, ಭಾವಚಿತ್ರಗಳು ಅದ್ಭುತವಾಗಿ ಮೂಡಿ ಬರುತ್ತವೆ.
ಇವರು ಸಮಕಾಲೀನ ಕಲಾಶೈಲಿ ಸೃಜನಾತ್ಮಕ ತಂತ್ರಗಾರಿಕೆ ಕ್ಯಾನ್ವಾಸ್ನಲ್ಲಿ ಸಹಜ ವಿಭಿನ್ನವಾಗಿ ರಚಿಸುವಲ್ಲಿ ಹೊಸತನ ಹುಡುಕಾಟದಲ್ಲಿ ತಲ್ಲೀನರು. ಬೆಂಗಳೂರಿನ ಚಿತ್ರಕಲಾ ಪರಿಷತ್ನಲ್ಲಿ ನಡೆಯುವ ಚಿತ್ರಸಂತೆಯಲ್ಲಿ ಇವರ ಅತಿ ಹೆಚ್ಚು ಪೇಂಟಿಂಗ್ ಮಾರಾಟವಾಗಿದೆ. ಎಎಂಸಿ ಅಕಾಡೆಮಿ ಕಲಾಶಾಲೆಯಲ್ಲಿ ಕಲಾಶಿಕ್ಷಕರಾಗಿ ಚಿತ್ರಕಲಾ ಪರಿಷತ್ನಲ್ಲಿ ಆರ್ಟ್ ಎಕ್ಸ್ಪ್ಲೋರ್ನಲ್ಲಿ ಸಮೂಹ ಚಿತ್ರ ಕಲಾಪ್ರದರ್ಶನ ಮಾಡಿದವರು. ಕರ್ನಾಟಕ ಲಲಿತಾ ಕಲಾ ಅಕಾಡೆಮಿಯಿಂದ ಧನ ಸಹಾಯದೊಂದಿಗೆ ಮುಂಬೈನ ಮಲಬಾರ್ ಹಿಲ್ನ ಆರ್ಟ್ದೇಶ್ ಗ್ಯಾಲರಿಯಲ್ಲಿ ಸಮೂಹ ಚಿತ್ರಕಲಾ ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ. ಕರ್ನಾಟಕ ಲಲಿತಾ ಕಲಾ ಅಕಾಡೆಮಿಯ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.
ದೇವರನಾಡು ಎಂದೇ ಹೆಸರಾದ ತಿರುವನಂತಪುರದಲ್ಲಿ ಕರ್ನಾಟಕದ ಐದು ಕಲಾವಿದರ ಆರ್ಟ್ ಎಕ್ಸ್ಪ್ಲೋರ್ ತಂಡ ಚಿತ್ರಕಲಾ ಪ್ರದರ್ಶನ ಮಾಡಿದ್ದಾರೆ. ಜಿಲ್ಲಾ ತಾಲ್ಲೂಕು ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತಿಗಳ ಭಾವಚಿತ್ರಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನ್ನು ಪ್ರದರ್ಶಿಸಿದ್ದಾರೆ. ಗ್ರಾಮೀಣ ಜನಜೀವನ ಶೈಲಿಯ ಚಿತ್ರಗಳು ಗಮನೆ ಸೆಳೆದಿವೆ. ಮುಂಬೈನಲ್ಲಿ ಇಶಾ ಪೌಂಡೇಶನ್ ರಾಷ್ಟ್ರಮಟ್ಟದಲ್ಲಿ ಆಯೋಜಿಸಿದ ರ್ಯಾಲಿ ಫಾರ್ ರಿವರ್ ಚಿತ್ರ 3ನೇ ಸ್ಥಾನ ಗಳಿಸಿದೆ. ಬೆಂಗಳೂರಿನಲ್ಲಿ ಹಲವಾರೂ ಗ್ರೂಪ್ ಶೋ ಕ್ಯಾಂಪ್ಗಳಲ್ಲಿ ಭಾಗವಹಿಸಿದ ಅನುಭವ ಇವರದು. ಕರ್ನಾಟಕದ ಅನೇಕ ಕಡೆ ಅಲ್ಲದೇ ಆಂಧ್ರ, ಗೋವಾ, ಕೇರಳ, ಮಹಾರಾಷ್ಟ್ರ ರಾಜ್ಯಗಳಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದವರು. ಇವರ ರಚನೆಯ ಭಾವಚಿತ್ರಗಳು, ತೈಲವರ್ಣ ಪೆನ್ಸಿಲ್ ವರ್ಕ್ಗಳು, ಪರ್ಮನೆಂಟ್ ವಾಲ್ ಗ್ಯಾಲರಿಗಳಲ್ಲಿ ಸ್ಥಿರವಾಗಿವೆ.
-- ಗೊರೂರು ಅನಂತರಾಜು, ಹಾಸನ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ