ನವರಾತ್ರಿ ದಿನದಂದು ಪೂಜಿಸಲ್ಪಡುವ ನವ ದೇವತೆಗಳು

Upayuktha
0


ವರಾತ್ರಿ ನವ ಅಂದರೆ ಒಂಬತ್ತು ದೇವತೆಗಳನ್ನು, ದೇವಿಯ ಒಂಬತ್ತು ವಿವಿಧ ರೂಪಗಳನ್ನು ಆರಾಧಿಸುವ, ಪೂಜಿಸುವ ಹಿಂದೂ ಧರ್ಮದ ಹಬ್ಬವಾಗಿದೆ. ನವರಾತ್ರಿ ಕಳೆದು ಹತ್ತನೇ ದಿವಸ ಶಮಿ ಎಂಬ ವೃಕ್ಷಕ್ಕೆ ಪೂಜೆಯನ್ನು ಸಲ್ಲಿಸುವ ಮೂಲಕ ವಿಜಯ ದಶಮಿ ಆಚರಣೆಯನ್ನು ನಡೆಸಲಾಗುತ್ತದೆ.


ನವರಾತ್ರಿ ದಿನದಂದು ನವ ದೇವತೆಗಳನ್ನು ಆಚರಿಸುವುದಕ್ಕೆ ಪ್ರತಿಯೊಂದು ದೇವತೆಗಳಿಗೂ ವಿವಿಧ ಹೆಸರುಗಳಿವೆ ಹಾಗೂ ಹಿನ್ನಲೆಗಳನ್ನು ಹೊಂದಿವೆ.ಜಗನ್ಮಾತೆ ದುರ್ಗಾದೇವಿಯು ಒಂಬತ್ತು ಶಕ್ತಿಯ ರೂಪದಲ್ಲಿ ಅವತಾರವೆತ್ತಿರುವ ಕಾರಣ ಆಕೆಯನ್ನು ನವದುರ್ಗೆ ಎಂದು ಕರೆಯಲಾಗುತ್ತದೆ. ಆ ಒಂಬತ್ತು ನವಶಕ್ತಿಯ ದೇವತೆಗಳಲ್ಲಿ ಆಚರಿಸಲ್ಪಡುವ ದೇವತೆಗಳೆಂದರೆ,


1. ಶೈಲಪುತ್ರಿ

ಶೈಲಮ್ ಅಂದರೆ ಯಾವ ಪರ್ವತದಲ್ಲಿ ಮಾಣಿಕ್ಯ, ರತ್ನದಂತಹ ಅತ್ಯಮೂಲ್ಯವಾದ ಸಂಗ್ರಹವಿದೆಯೋ, ಬಲಗೈಯಲ್ಲಿ ತ್ರಿಶೂಲ, ಎಡಗೈಯಲ್ಲಿ ಕಮಲ ಪುಷ್ಪವನ್ನು ಹಿಡಿದಿರುವವಳು, ಶಕ್ತಿಸ್ವ ರೂಪಿಣಿಯ ವಾಹನ ವೃಷಭ, ಪರ್ವತರಾಜ ಹಿಮವಂತನ ಪುತ್ರಿಯಾಗಿ ಅವತರಿಸಿದ ಕಾರಣ ಈಕೆಯನ್ನು ಶೈಲಪುತ್ರಿ ಎಂದು ಕರೆಯಲಾಗುತ್ತದೆ.


2. ಬ್ರಹ್ಮಚಾರಿಣಿ

ಬ್ರಹ್ಮ ರೂಪವಾಗುವುದು ಯಾರ ಶೀಲವಾಗಿದೆಯೋ, ಬಲಗೈಯಲ್ಲಿ ಜಪಮಾಲೆಯನ್ನು, ಎಡಗೈಯಲ್ಲಿ ಕಮಂಡಲವನ್ನು ಹಿಡಿದಿರುವ, ಈಕೆಯ ಸ್ವರೂಪವು ಜ್ಯೋರ್ತಿಮಯ, ಭವ್ಯವಾದ ತಪಸ್ಸನ್ನು ಆಚರಿಸವವಳಾಗಿದ್ದಾಳೆ ಬ್ರಹ್ಮಚಾರಿಣಿ.


3. ಚಂದ್ರಘಂಟಾ

ಮಮತೆ, ಕ್ಷಮಾಶೀಲತೆ, ವಾತ್ಸಲ್ಯ ಮೂರು ಗುಣಗಳನ್ನು ಹೊಂದಿರುವವಳು, ಶಾಂತಿದಾಯಕ, ಶ್ರೇಯಸ್ಕರ ಸ್ವರೂಪ, ಚಿನ್ನದಂತೆ ಹೊಳೆಯುವ ಮೈಕಾಂತಿಯನ್ನು ಹೊಂದಿರುವವಳು, ಹತ್ತು ಕೈಗಳಲ್ಲಿ ಅಸ್ತ್ರಗಳನ್ನು ಹೊಂದಿರುವ ಸಿಂಹವಾಹಿನಿಯಾದ ಈಕೆಯ ಮಸ್ತಕದಲ್ಲಿ ಚಂದ್ರನಿರುತ್ತಾನೆ.


4. ಕೂಷ್ಮಾಂಡಾ

ಜನ್ಮ, ಬೆಳವಣಿಗೆ, ಮೃತ್ಯು ತ್ರಿವಿಧ ತಾಪಗಳ ಸೃಷ್ಟಿಯ ಆದಿ ಸ್ವರೂಪ, ತನ್ನ ಮಧುರ ನಗುವಿನಿಂದ ಬ್ರಹ್ಮಾಂಡವನ್ನು ಸೃಷ್ಟಿಸಿದವಳು  ಕೂಷ್ಮಾಂಡಾ ದೇವಿ.


 5. ಸ್ಕಂದಮಾತಾ

ಭೂಲೋಕದಿಂದ ಸತ್ಯಲೋಕದವರೆಗಿನ ಲೋಕಗಳನ್ನು ಸ್ಕಂದರೇಷೆ ಎನ್ನಲಾಗುತ್ತದೆ. ಏಳು ಲೋಕಗಳ ನಿಯಂತ್ರಕರವಾಗಿರುವವಳು, ಮಯೂರವಾಹನಾದ ಸ್ಕಂದನ ತಾಯಿಯಾದ್ದರಿಂದ ಈಕೆಯನ್ನು ಸ್ಕಂದಮಾತಾ ಎಂದು ಕರೆಯಲಾಗುತ್ತದೆ.


6. ಕಾತ್ಯಾಯಿನಿ

ಮಹಿಷಾಸುರನ ವಿನಾಶಕ್ಕಾಗಿ ದೇವತೆಗಳು ತಮ್ಮ ತೇಜದ ಅಂಶಗಳನ್ನು ಇಟ್ಟು ಈಕೆಯನ್ನು ಸೃಷ್ಟಿಸಿದರು. ಮೊದಲಿಗೆ ಈಕೆಯನ್ನು ಪೂಜಿಸಿದ ಮಹರ್ಷಿ ಕಾತ್ಯಾಯನರಲ್ಲಿ ಪುತ್ರಿ ರೂಪದಲ್ಲಿ ಅವತರಿಸಿದ ಈಕೆಯನ್ನು ಕಾತ್ಯಾಯಿನಿ ಎಂದು ಕರೆಯಲಾಗುತ್ತದೆ.


7. ಕಾಲರಾತ್ರಿ

ನಾಲ್ಕು ಕೈಗಳಲ್ಲಿ ಅಭಯಮುದ್ರೆ, ವರಮುದ್ರೆ, ಕಬ್ಬಿಣದ ಮುಳ್ಳು, ಖಡ್ಗವನ್ನು ಹೊಂದಿರುವ, ಮೂರು ಕಣ್ಣುಗಳು, ಮಿಂಚಿನ ಮಾಲೆಗಳು, ಉಸಿರಾಟದಿಂದ ಹೊರಡುವ ಜ್ವಾಲೆಗಳು, ಶರೀರದ ಬಣ್ಣ ಕಪ್ಪಾಗಿದ್ದು, ಕೂದಲನ್ನು ಹರಡಿಕೊಂಡಿರುವ "ವಿನಾಶಿಕಾ" ಅಂದರೆ ಸಂಪೂರ್ಣವಾಗಿ ನಾಶ ಮಾಡುವವಳು ಈಕೆಯನ್ನು ಕಾಲಾರಾತ್ರಿ ಎಂದು ಕರೆಯಲಾಗುತ್ತದೆ.


8. ಮಹಾಗೌರಿ

 ಕೈಗಳಲ್ಲಿ ಡಮರುಗ, ಅಭಯಮುದ್ರೆ, ವರಮುದ್ರೆ, ತ್ರಿಶೂಲವನ್ನು ಹೊಂದಿರುವವಳು, ತೇಜಸ್ಸಿನ ಅತ್ಯುಚ್ಚ ತೇಜಸ್ಸನ್ನು ಅಂದರೆ ಮಹಾನ್ ಗೌರವವನ್ನು ಪಡೆದುಕೊಂಡವಳು, ಶ್ವೇತವರ್ಣಿಯಾದ ಈಕೆಯನ್ನು ಮಹಾಗೌರಿ ಎಂದು ಕರೆಯಲಾಗುತ್ತದೆ.


 9. ಸಿದ್ಧಿದಾತ್ರಿ

ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕ್ರಮ್ಯ, ಈಶಿತ್ವ, ವಶಿತ್ವ ಹೀಗೆ ಎಂಟು ಸಿದ್ದಿಗಳನ್ನು ನೀಡುವವಳನ್ನು ಸಿದ್ಧಿದಾತ್ರಿ ಎಂದು ಕರೆಯಲಾಗುತ್ತದೆ.


     

- ಶಿಲ್ಪಾ ಜಯಾನಂದ್

ಪ್ರಥಮ ಎಂ.ಸಿ.ಜೆ ವಿಭಾಗ

 ವಿವೇಕಾನಂದ (ಸ್ವಾಯತ್ತ)ಕಾಲೇಜ್, ಪುತ್ತೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top