ಬೆಂಗಳೂರು: 2023ನೇ ಸಾಲಿನ 20ನೇ ವರುಷದ 'ಶ್ರೀ ಶಿವಕುಮಾರ ಪ್ರಶಸ್ತಿ’ಗೆ ಖ್ಯಾತ ರಂಗ ವಿನ್ಯಾಸಕ ಮತ್ತು ರಾಷ್ಟ್ರೀಯ ಕಲಾ ನಿರ್ದೇಶಕ ಶಶಿಧರ ಅಡಪ ಅವರು ಭಾಜನರಾಗಿದ್ದಾರೆ.
ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘ, ರಂಗಭೂಮಿಯಲ್ಲಿನ ಜೀವಮಾನದ ಸಾಧನೆಗಾಗಿ ಪ್ರತಿವರ್ಷ ಕೊಡಮಾಡುವ ಪ್ರತಿಷ್ಠಿತ ‘ಶ್ರೀ ಶಿವಕುಮಾರ ಪ್ರಶಸ್ತಿ’ ಈ ಬಾರಿ ರಾಷ್ಟ್ರೀಯ ರಂಗ ಸಂಘಟಕ, ರಂಗ ವಿನ್ಯಾಸಕ, ರಾಷ್ಟ್ರೀಯ ಖ್ಯಾತಿಯ ಕಲಾ ನಿರ್ದೇಶಕ ಶ್ರೀ ಶಶಿಧರ ಅಡಪ ಅವರಿಗೆ ಸಂದಿದೆ. ಪ್ರಶಸ್ತಿಯು 50,000 ರೂ. ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿರುತ್ತದೆ.
ಶಶಿ ಅಡಪ ಅವರು ಸಿಜಿಕೆ ಅವರ ಆತ್ಮೀಯ ಒಡನಾಡಿಗಳು. ಸಿಜಿಕೆ ಸ್ಥಾಪಿಸಿದ ರಂಗ ನಿರಂತರ ತಂಡದ ಮೊದಲ ಸಾಲಿನ ಸ್ಥಾಪಕರಲ್ಲಿ ಪ್ರಮುಖರು. ನಂತರದ ವರುಷಗಳಲ್ಲಿ ರಂಗ ನಿರಂತರ ಸಂಸ್ಥೆಯ ಅಧ್ಯಕ್ಷರಾಗಿ ಸಿಜಿಕೆ ನೆನಪಿನ ಬಹಭಾಷಾ ರಾಷ್ಟ್ರೀಯ ನಾಟಕೋತ್ಸವದ ರುವಾರಿಗಳು. ಇಂದಿಗೂ ರಂಗ ನಿರಂತರ ರಾಷ್ಟ್ರೀಯ ನಾಟಕೋತ್ಸವದ ಪ್ರಮುಖ ಸಂಘಟಕರು ಶಶಿ ಅಡಪ ಅವರು.
ಇತ್ತೀಚಿನ ದಿನಗಳ ರಂಗ ಸಂಪದ ತಂಡದ ಪ್ರತಿಷ್ಠಿತ ರಂಗ ಪ್ರಸ್ತುತಿ, ಬಿ. ಸುರೇಶ ಅವರ ನಿರ್ದೇಶನದ "ಲೋಕದ ಒಳ ಹೊರಗೆ" ನಾಟಕದ ರಂಗ ವಿನ್ಯಾಸ ಶಶಿ ಅಡಪ ಅವರದ್ದು. ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆಯ ಪ್ರತಿಷ್ಠಿತ ಧ್ವನಿ-ಬೆಳಕು ಕಾರ್ಯಕ್ರಮಗಳಾದ "ಮನುಷ್ಯ ಜಾತಿ ತಾನೊಂದೇ ವಲಂ", "ಭಾರತ ಭಾಗ್ಯ ವಿಧಾತ" ಮತ್ತು ರಂಗಾಯಣ ಮೈಸೂರಿನ "ಮಲೆಗಳಲ್ಲಿ ಮದುಮಗಳು" ಇವುಗಳಿಗೆ ರಂಗ ವಿನ್ಯಾಸ ಮಾಡಿಕೊಟ್ಟ ಹೆಮ್ಮೆಯೂ ಶಶಿಧರ ಅಡಪ ಅವರಿಗಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ