ನೀರ್ನಳ್ಳಿ ಗಣಪತಿ ಅವರಿಗೆ ಉಂಡೆಮನೆ ಪ್ರಶಸ್ತಿ ಪ್ರದಾನ

Upayuktha
0



ಕಾಸರಗೋಡು: ಯಲ್ಲಾಪುರ ತಾಲ್ಲೂಕು ಶಿಕ್ಷಣ ಸಮಿತಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಖ್ಯಾತ ವ್ಯಂಗ್ಯ ಚಿತ್ರಕಲಾವಿದ ನೀರ್ನಳ್ಳಿ ಗಣಪತಿ ಸೀತಾರಾಮ ಹೆಗಡೆ (ನೀರ್ನಳ್ಳಿ ಗಣಪತಿ) ಯವರಿಗೆ ಈ ವರ್ಷದ ಉಂಡೆಮನೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

 

ವ್ಯಂಗ್ಯ ಚಿತ್ರಕಲಾವಿದರಾಗಿ ಬೆಳೆದು ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ರಾಮಕಥೆಯಲ್ಲಿ ಶ್ರೀಮದ್ವಾಲ್ಮೀಕಿರಾಮಾಯಣದ "ಕುಂಚಕವಿ"ಯಾಗಿ ಅರಳಿದ ನೀರ್ನಳ್ಳಿಯವರು ಗೀತರಾಮಾಯಣದ ಸರಣಿ ಕಾರ್ಯಕ್ರಮಗಳಲ್ಲೂ 'ಗೀತ-ಕುಂಚ' ಕಲಾವಿದರಾಗಿ ಹೆಸರು ಪಡೆದಿರುತ್ತಾರೆ. ಶಂಕರಾಚಾರ್ಯರ ಸ್ತೋತ್ರ ಗಾಯನ ಸಂದರ್ಭದಲ್ಲೂ ಭಾವಕ್ಕೆ ಅನುಗುಣವಾಗಿ ಚಿತ್ರ ರಚಿಸಿ ಯಶಸ್ವಿಯಾದ ಗರಿಮೆ ಇವರದ್ದಾಗಿದೆ. ಇವರ ವ್ಯಂಗ್ಯ ಚಿತ್ರಗಳು ನಾಡಿನ ಹಲವು ಪತ್ರಿಕೆಗಳಲ್ಲಿ ನಿಯತವಾಗಿ ಪ್ರಕಟವಾಗುತ್ತಿದ್ದುದು ಅವರ ಸಮಕಾಲೀನ ಆಗುಹೋಗುಗಳ ಬಗೆಗಿರುವ ಸ್ಪಂದನೆಗೆ ಇರುವ ಸಾಕ್ಷಿಗಳಾಗಿವೆ.


ಇಂದೂ ದಿನವೊಂದಕ್ಕೆ ಹಲವು ಶೈಲಿಗಳ  ಚಿತ್ರಗಳನ್ನು ರಚಿಸುತ್ತಾ ಪ್ರಕಟಿಸುತ್ತಾ ಇರುವ ಅವರ ಕಲಾಸೇವೆ ಸ್ತುತ್ಯರ್ಹ. ಅವರ ಸರ್ವತೋಮುಖ ಕಲಾಸೇವೆಯನ್ನು ಗುರುತಿಸಿ ಈ ವರ್ಷದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು ಎಂದು "ಉಂಡೆಮನೆ ಶಂಭು ಭಟ್ಟರ ಸವಿನೆನಪಿನ ಶಿಕ್ಷಣ ಪ್ರೋತ್ಸಾಹ ಯೋಜನೆ"ಯ ಸಂಚಾಲಕ ಉಂಡೆಮನೆ ಶಂ.ವಿಶ್ವೇಶ್ವರ ಭಟ್ಟರು ತಿಳಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top