ಮಂಗಳೂರು: ಕರ್ನಾಟಕ ನಾಯರ್ ಸಮಾಜ ಮತ್ತು ಇಸ್ಕಾನ್-ಶ್ರೀ ಜಗನ್ನಾಥ ಮಂದಿರ, ಕುಡುಪುಕಟ್ಟೆ ಇವರ ಸಂಯುಕ್ತಾಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಇತ್ತೀಚೆಗೆ ಶೋಭಾಯಾತ್ರೆ ಆಯೋಜಿಸಲಾಗಿತ್ತು. ಮಂಗಳೂರು ಡಿಸಿಪಿ ದಿನೇಶ್ ಕುಮಾರ್ ಐಪಿಎಸ್ ದೀಪ ಬೆಳಗಿಸುವ ಮೂಲಕ ಶೋಭಾಯಾತ್ರೆಯನ್ನು ಉದ್ಘಾಟಿಸಿದರು. ಮಂಡಳಿಯ ನಿರ್ದೇಶಕ ಮುರಳಿ ಹೆಚ್ ಸ್ವಾಗತಿಸಿದರು. ಕೆಎನ್ಎಸ್ಎಸ್ ಅಧ್ಯಕ್ಷ ಸಿ. ವಿಜಯಕುಮಾರ್, ಉಪಾಧ್ಯಕ್ಷ ಪಿ.ಕೆ.ಎಸ್ ಪಿಳ್ಳೈ, ಇಸ್ಕಾನ್ನ ಎಚ್.ಜಿ. ಪ್ರೇಮಭಕ್ತಿ ಪ್ರಭು ಹಾಗೂ ಎಚ್.ಜಿ.ಯಾದವ ಪ್ರಭು ಜೀ ಜನ್ಮಾಷ್ಟಮಿ ಸಂದೇಶ ನೀಡಿದರು. ನಾರಾಯಣ ಕೇಳೋತ್ ವಂದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ