ಎಚ್ ಎನ್ ಕಲಾಕ್ಷೇತ್ರ ಜಯನಗರದಲ್ಲಿ ಅದ್ದೂರಿ ಕಾರ್ಯಕ್ರಮ | 'ಜಲಪಾತ’ ಹಾಡಿನ ತಂಡದೊಂದಿಗೆ ಸಂವಾದ, ಹಾಡು
ಬೆಂಗಳೂರು: ಭಾರತೀತೀರ್ಥ ಸಾಂಸ್ಕೃತಿಕ ಮತ್ತು ಜಾನಪದ ಅಧ್ಯಯನ ಕೇಂದ್ರ ಟ್ರಸ್ಟ್ ಮತ್ತು ಕೃಷಿ ಭಾರತ್ ಫೌಂಡೇಷನ್ ಇಂಡಸ್ ಹರ್ಬ್ಸ್ ವತಿಯಿಂದ ‘ಜಲಪಾತ– ಭೂ ರಮೆಯ ಸ್ವಗತ’ ಹಾಡಿನ ತಂಡದ ಜತೆಗೆ ಬೆಂಗ್ಳೂರ ಮಲೆನಾಡು ಉತ್ಸವವನ್ನು ಸೆಪ್ಟೆಂಬರ್ 10ರಂದು ಬೆಳಿಗ್ಗೆ 10.30ರಿಂದ ರಾತ್ರಿ 9ರವರೆಗೆ ಜಯನಗರದ ಎಚ್.ಎನ್. ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಚಂದ್ರಶೇಖರ್ ತುಂಬರಮನೆ ಅವರ ಉತ್ಸವಾಧ್ಯಕ್ಷತೆಯಲ್ಲಿ, ಎಚ್.ಸಿ. ಜಯಪ್ರಕಾಶ್ ಅವರು ಜನತೆಗೆ ಅರ್ಪಿಸುವ, ಎಚ್.ಜಿ. ಚಂದ್ರಶೇಖರ, ಅಡೇಕಂಡಿ ಲಕ್ಷ್ಮೀನಾರಾಯಣ ಅವರ ಗೌರವ ಸ್ವಾಗತ ವ್ಯವಸ್ಥೆಯಲ್ಲಿ, ಸುಧರ್ಮ ಹೆಗ್ಡೆ, ಅಜಿತ್ ಕಲ್ಕುಳಿ, ಎಂ.ಎನ್.ದತ್ತಾತ್ರಿ, ಶಶಿಕಾಂತ, ಮಾಲತೇಶ ಸಿಗ್ಸೆ ಗೌರವ ಸಂಚಾಲಕತ್ವದಲ್ಲಿ ಬೆಂಗ್ಳೂರ ಮಲೆನಾಡು ಉತ್ಸವ ನಡೆಯಲಿದೆ ಎಂದು ಟಿ.ಸಿ. ತುಂಬರಮನೆ ಮತ್ತು ರಮೇಶ್ ಬೇಗಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮಗಳು: ಭಾನುವಾರ ಬೆಳಿಗ್ಗೆ 10.45ಕ್ಕೆ ಕೃಷಿ ಭಾರತ್ ಫೌಂಡೇಶನ್ ಆಶ್ರಯದಲ್ಲಿ ಹಿತ್ಲಹಳ್ಳಿ ನಾಗೇಂದ್ರ ಭಟ್ ರಚಿತ ಪುಸ್ತಕಗಳ ಬಿಡುಗಡೆ ಮತ್ತು ಕಾರ್ಯಕ್ರಮ ಉದ್ಘಾಟನೆ ನಡೆಯಲಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಮತ್ತು ಪರಿಸರ ಗ್ರಂಥ ರಚನೆಕಾರ ಹಿತ್ಲಳ್ಳಿ ನಾಗೇಂದ್ರ ಭಟ್ ಉತ್ಸವ ಉದ್ಘಾಟಿಸಲಿದ್ದು, ಬಸವನಗುಡಿ ರಾಮಕೃಷ್ಣ ಆಶ್ರಮದ ಸ್ವಾಮಿ ತದ್ಯುಕ್ತಾನಂದರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಚಂದ್ರಶೇಖರ ತುಂಬರಮನೆ ಉತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಸಿದ್ಧ ಪರಿಸರ ತಜ್ಞ ಡಾ.ಎಲ್ಲಪ್ಪ ರೆಡ್ಡಿ ವಹಿಸಲಿದ್ದಾರೆ. ಚಿತ್ರಕಲಾ ಪರಿಷತ್ನ ಅಧ್ಯಕ್ಷ ಡಾ.ಬಿ.ಎಲ್. ಶಂಕರ್ ಗ್ರಂಥಗಳನ್ನು ಲೋಕಾರ್ಪಣೆ ಮಾಡುವರು. ನಿಕಟಪೂರ್ವ ಉತ್ಸವ ಅಧ್ಯಕ್ಷರಾದ ಎನ್.ಎಸ್. ಶ್ರೀಧರ ಮೂರ್ತಿ ಮತ್ತು ಕೃಷಿ ಭಾರತ್ ಫೌಂಡೇಶನ್ನ ಚಂದ್ರಶೇಖರ ಬಾಳೆ ಅವರ ವಿಶೇಷ ಉಪಸ್ಥಿತಿ ಇರಲಿದೆ. ಇದೇ ಸಂದರ್ಭದಲ್ಲಿ ‘ವನ್ಯಶಾಸ್ತ್ರ ಸಂಹಿತಾ (ಆಂಗ್ಲ ಭಾಷೆ) ಮತ್ತು ಜ್ಯೋತಿರ್ವಿಜ್ಞಾನ ದೀಪಿಕಾ (ಕನ್ನಡ ಭಾಷೆ) ಗ್ರಂಥಗಳು ಲೋಕಾರ್ಪಣೆಗೊಳ್ಳಲಿದೆ.
ಹೆಚ್ಚಿನ ಮಾಹಿತಿಗೆ: 9448101708
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ