ಕಾಲೇಜ್ ಲೈಫ್ ಮುಗಿಯಿತು ಅಂತ, ನಾವು ನೀವು ಕೂತು ಅಳುವುದಕ್ಕಿಂತ ಮೂರು ವರುಷಗಳಲ್ಲಿ ನಾವೇನು ನಮ್ಮ ಭವಿಷ್ಯಕ್ಕಾಗುವುದನ್ನು ಕಲಿತಿದ್ದೇವೆ ಎಂಬುದು ನಮ್ಮನ್ನು ನಾವೇ ಒಮ್ಮೆ ಪ್ರಶ್ನೆಸಿಕೂಳ್ಳುವುದು ಉತ್ತಮ. ಯಾಕೆಂದರೆ ಮುಂದಿನ ಜೀವನದಲ್ಲಿ ನಾವು ಸಾಧನೆ ದಾರಿಯಲ್ಲಿ ಸಾಗಬೇಕು. ಈ ಬದುಕು ನಮ್ಮದೇ..! ಭವಿಷ್ಯದ ಆಯ್ಕೆಗಳು ನಮ್ಮದೇ..! ಸಾಗುತ್ತಿರುವ ದಾರಿಗಳು ನಮ್ಮದೇ..! ಸೋಲು ಗೆಲುವು ನಮ್ಮದೇ..! ನಾವು ಮುಂದಿನ ಪಯಣಕ್ಕೆ ಹೊಸ ಹೆಜ್ಜೆ ಇಡುತಿದ್ದೇವೆ. ಎಲ್ಲವೂ ಇಲ್ಲಿ ಕ್ಷಣಿಕವಾಗಿರುದರಿಂದ ಕಳೆದು ಹೋದ ಸಮಯವು ಮರಳಿ ಬಾರದು.ಜೀವನದಲ್ಲಿ ಅನುಭವ ಹೆಚ್ಚಾದಂತೆ ಜ್ಞಾನವು ವಿಸ್ತಾರವಾಗುತ್ತದೆ. ಜೀವನದಲ್ಲಿ ಮೇಲೆ ಬರಬೇಕಾದರೆ ನಾವೇನು ಮಾಡಬೇಕು ಎಂಬುದು ಇಲ್ಲಿ ಯೋಚಿಸಬೇಕು. ಗುರಿ ತಲುಪಲು ತಾಳ್ಮೆಯಿಂದ ಕಾರ್ಯ,ನಿಷ್ಠೆ,ಶ್ರದ್ಧೆ,ಆಸಕ್ತಿಯಿಂದ ಸಾಧನೆಯ ಹಾದಿಯಲ್ಲಿ ಮುಂದುವರಿಯುತ್ತ ಹೋಗಬೇಕು.
ಒಳ್ಳೆಯ ಉಪಾಯ ಹಾಗೂ ತಾಳ್ಮೆಯಿಂದ ಇದ್ದವನಿಗೆ ಜಗತ್ತನ್ನು ಕೈ ವಶ ಮಾಡಲು ಸಾಧ್ಯವಿದೆ ಎಂದರೆ ನಾನು-ನೀವು ಕೈ ಕಟ್ಟಿ ಕುಳಿತರೆ ನಾವು ಪಡೆಯಬೇಕಾದ್ದನ್ನು ಅಥವಾ ಪಡೆಯಲು ಸಾಧ್ಯವಿಲ್ಲ.
ಪಿ. ಯು. ಸಿಯ ನಂತರ ನಮಗೆ ಸೂಕ್ತವೆನಿಸಿದ ವಿಷಯಗಳ ಮತ್ತು ಉತ್ತಮ ಕಾಲೇಜಿನ ಆಯ್ಕೆಯು ಎಲ್ಲವೂ ನಮ್ಮದೇ ಆಗಿತ್ತು.ಕಾಲೇಜು ಸೇರಿ 3 ವರುಷಗಳಲ್ಲಿ ನಾವೇನು ಸಾಧನೆ ಮಾಡಿದ್ದೇವೆ, ನಮಗೆ ನಾವು ಎಷ್ಟು ಸಮಯ ಮೀಸಲು ಇಟ್ಟಿದ್ದೆವೇ, ಗೆಳೆಯರೊಂದಿಗೆ ಯಾವ ರೀತಿ ಕಾಲಕಳೆದಿದ್ದೇವೆ ನಮ್ಮ ನೆಚ್ಚಿನ ಶಿಕ್ಷಕರೊಂದಿಗೆ ನಮ್ಮ ಕನಸಿನ ಹಾಗೂ ಶಿಕ್ಷಣ ಸಂಬಂಧಿತ ವಿಚಾರದ ಕುರಿತು ಚರ್ಚಿಸಿ ಸಲಹೆ ಪಡೆದಿದ್ದೇವೆ. ಎಂಬುದು ಮುಖ್ಯ, ಏಕೆಂದರೆ ಇದು ನಮ್ಮ ಭವಿಷ್ಯದ ಕನಸುಗಳಿಗೆ ಸಾಟಿಯಾಗಬಹುದು .
ಛಲದಿಂದ ಸಾದಿಸುವೆ ಎಂಬ ಒಂದು ಧ್ಯೆಯವನ್ನು ನಾವು ಜೀವನದಲ್ಲಿ ಸದಾ ನೆನಪಿಟ್ಟುಕೊಳ್ಳಬೇಕು. ಛಲವಿದ್ದರೆ ಮಾತ್ರ ನಾವು ನಮ್ಮ ಕನಸಿನ ಹಾದಿಯು ಎಷ್ಟು ಕಠಿಣವಿದ್ದರೂ ಸಾಗಬಹುದು. ನಮ್ಮ ಜೀವನದಲ್ಲಿ ರೋಚಕತೆಯ ಬದುಕಿಗಿಂತ ರಚನಾತ್ಮಕವಾಗಿರಲಿ ಏಕೆಂದರೆ ನಾವು ಕಲಿಯುದರಲ್ಲಿ ವಿಭಿನ್ನತೆ ಮತ್ತು ಹೊಸತನವನ್ನು ಹುಡುಕಬೇಕು.
ಇನ್ನು ನಮ್ಮನ್ನು ನಾವು ರೂಪಿಸುವ ವಿಚಾರವನ್ನು ತೆಗೆದುಕೊಂಡಾಗ ಕಾಲೇಜು ನಲ್ಲಿ ಗ್ರಂಥಾಲಯದಲ್ಲಿ ಎಲ್ಲರೂ ಓದುತ್ತಿದ್ದರೆ. ಎಲ್ಲರೂ ಗಣ್ಯ ವ್ಯಕ್ತಿಗಳು ಆಗುತ್ತಿದ್ದಾರೇನು. ಎಂಬ ಮಾತುಗಳು ಅಲ್ಲಲಿ ಕಿವಿಗೆ ಬೀಳುತ್ತಿರುತ್ತದೆ.ಅವರವರ ವೈಯಕ್ತಿಕ ಅಭಿರುಚಿ ಮೇಲೆ ಅವರ ಬದುಕಿನ ಆಯ್ಕೆ. ಏಕೆಂದರೆ ಆಸಕ್ತಿಗಳು ಬೇರೆ ಬೇರೆಯಾಗಿರುತ್ತದೆ.ನಮ್ಮಲ್ಲಿ ನಾವು ಅಭಿರುಚಿಯನ್ನು ಬೆಳೆಸಿಕೊಂಡಾಗ ಮಾತ್ರ ಸಣ್ಣ ಸಸಿಯು ಚಿಗುರಿ ಬೆಳೆದು ಹೆಮ್ಮರವಾಗುವಂತೆ ನಾವು ಸಾಧಿಸಿ ಎತ್ತರಕ್ಕೆ ಬೆಳೆದು ನಿಲ್ಲಲ್ಲೂ ಸಾಧ್ಯ.
-ಜೀವನ್. ಕೆ ಕೊಂಡೆಪ್ಪಾಡಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ