ಹಾಸನ: ಹಾಸನ ಜಿಲ್ಲಾ ಕಲಾವಿದರ ಹಿತ ರಕ್ಷಣಾ ಸಮಿತಿ ವತಿಯಿಂದ ಹಾಸನ ಸಾಹಿತ್ಯ ಪರಿಷತ್ತು ಭವನದಲ್ಲಿ ಇತ್ತೀಚೆಗೆ ನಿಧನರಾದ ಪೌರಾಣಿಕ ನಾಟಕಗಳ ನಿರ್ದೇಶಕರು ದೊಡ್ಡ ಗೇಣಿಗೆರೆ ರಂಗಪ್ಪದಾಸರ ಸಂಸ್ಮರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ನಾಟಕಕಾರರು ಸಾಹಿತಿ ಗೊರೂರು ಅನಂತರಾಜು ಮಾತನಾಡಿ ಹಾಸನದ ಪೌರಾಣಿಕ ರಂಗಭೂಮಿಯಲ್ಲಿ ದೊಡ್ದ ಹೆಸರು ಮಾಡಿದ್ದ ದೊಡ್ಳಗೇಣಿಗೆರೆ ಗ್ರಾಮದ ರಂಗೇಗೌಡರು ರಂಗ ಸಂಗೀತ ಅಭ್ಯಾಸ ಮಾಡಿ, ರಂಗನಟರಾಗಿ ಹಾರ್ಮೋನಿಯಂ ಮೇಷ್ಟಾಗಿ ಹರಿಕಥಾ ಕೀರ್ತನೆಕಾರರಾಗಿ ರಂಗಪ್ಪದಾಸ್ ಎಂಬ ಅಭಿನಾಮದಿಂದ ಜಿಲ್ಲೆಯಲ್ಲಿ ಖ್ಯಾತನಾಮರಾಗಿದ್ದರು. ರಂಗ ನಿದೇ೯ಶನದಲ್ಲಿ ಹಲವಾರು ಹೊಸ ಕಲಾವಿದರನ್ನು ಬೆಳಕಿಗೆ ತಂದರು. ಉತ್ತಮ ಕಂಠಸಿರಿಯ ಗಾಯಕರಾಗಿ ಗುರುರಾಜುಲು ನಾಯ್ಡು ಸ್ಮರಿಸುವಂತೆ ಅವರು ಗೊರೂರು ಗಣೇಶೋತ್ಸವ ಕಾರ್ಯಕ್ರಮದಲ್ಲಿ ಹರಿಕಥೆ ನಡೆಸಿಕೊಡುತ್ತಿದ್ದರು. ಅವರ ಆಂಜನೇಯ ಪಾತ್ರದ ಹಾಡು ಅಭಿನಯ ಮರೆಯುವಂತಿಲ್ಲ. ಅವರು ಅಂತಿಮ ದಿನಗಳಲ್ಲಿ ತಾವೇ ರಚಿಸಿದ ಪಾದುಕ ಪಟ್ಟಾಭಿಷೇಕ ನಾಟಕವನ್ನು ರಂಗದ ಮೇಲೆ ತರುವ ಆಸೆ ವ್ಯಕ್ತ ಪಡಿಸಿದ್ದರು ಎಂದು ರಂಗಪ್ಪದಾಸರ ಕಲಾ ಸೇವೆಯನ್ನು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಡಾ. ಎಚ್.ಎಲ್. ಮಲ್ಲೇಶ್ ಗೌಡರು ಮಾತನಾಡಿ, ಕೆಲವರಿಗೆ ಕಲೆ ದೈವದತ್ತವಾಗಿ ಬರುತ್ತದೆ. ಕೆಲವರು ಸತತ ಅಭ್ಯಾಸದ ಮೂಲಕ ಕಲಾವಿದರಾಗಿ ರೂಪುಗೊಳ್ಳುತ್ತಾರೆ. ರಂಗಪ್ಪದಾಸರಿಗೆ ದೈವದತ್ತವಾಗಿ ಒಲಿದಿದೆ. ಅವರು ನಮ್ಮ ನಡುವಿನ ಘಂಟಸಾಲ. ಪುಟ್ಟಣ್ಣ ಕಣಗಾಲ್ ರೀತಿಯ ನಿದೇ೯ಶಕರು, ನಾನು ಕೂಡ ಅವರ ಶಿಷ್ಯರಾಗಿ ಮೂರು ಬಾರಿ ಕೃಷ್ಣನ ಪಾತ್ರವನ್ನು ನಿರ್ವಹಿಸಿದ್ದೇನೆ. ಕಲಾವಿದರ ರಂಗತಾಲೀಮಿಗೆ ಅವಶ್ಯವಿರುವ ರಂಗತಾಲೀಮು ಕೊಠಡಿ ನಿರ್ಮಿಸುವ ದಿಶೆಯಲ್ಲಿ ತಾವು ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಇದಕ್ಕೆ ಧ್ವನಿಗೂಡಿಸಿದ ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ ಅಧ್ಯಕ್ಷರು ರವಿಕುಮಾರ್ ನಾವು ಕಲಾವಿದರೆಲ್ಲಾ ನಿಮ್ಮ ಜೊತೆಗೆ ಇರುತ್ತೇವೆ. ನಿಮ್ಮ ನೇತೃತ್ವದಲ್ಲಿ ಆದಷ್ಟು ಶೀಘ್ರವಾಗಿ ರಂಗ ತಾಲೀಮಿನ ಕೊಠಡಿ ನಿರ್ಮಾಣವಾಗಲೆಂದು ಆಶಿಸಿದರು.
ಕಾಯ೯ಕ್ರಮದಲ್ಲಿ ಜನಪದ ಗಾಯಕ ಶಿವನಂಜೇಗೌಡರು, ಪೊಲೀಸ್ ಇಲಾಖೆಯ ಕೆ. ಕೆ. ರಂಗಸ್ವಾಮಿ, ರಂಗ ನಿದೇ೯ಶಕರು ಸೀಗೆನಾಡು ಪಾಲಾಕ್ಷಾಚಾರ್, ಎ.ಸಿ. ರಾಜು, ಹೂವಿನಹಳ್ಳಿ ಕಾವಲು ಗುಂಡುರಾಜ್, ವೀರಭದ್ರಾಚಾರ್, ವೆಂಕಟಸುಬ್ಬಯ್ಯ, ಕಲಾವಿದರಾದ ಗಾಡೇನಹಳ್ಳಿ ಕೃಷ್ಣೇಗೌಡರು, ಯರೇಹಳ್ಳಿ ಮಂಜೇಗೌಡರು, ಶ್ರೀಕಂಠಪ್ಪ, ದಶ೯ನ್ ವೆಂಕಟೇಶ್, ಕಾರ್ಲೆ ಗೋವಿಂದೇಗೌಡರು, ಕೆಇಬಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹೇಮಚಂದ್ರ, ನಾಗಮೋಹನ್, ಕವಿ ಎನ್. ಎಲ್ ಚನ್ನೇಗೌಡರು ರಂಗಪ್ಪದಾಸರೊಂದಿಗಿನ ತಮ್ಮ ಒಡನಾಟ ಸ್ಮರಿಸಿ ಮಾತನಾಡಿದರು. ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಹೆಚ್. ಎಂ.ಶಿವಣ್ಣ, ರಂಗ ನಿದೇ೯ಶಕರು, ಮಹದೇವಪ್ಪ, ಕಲಾವಿದರು ಬಾರೇಹೊಸೂರು ಜವರೇಗೌಡರು ವೇದಿಕೆಯಲ್ಲಿದ್ದರು.
ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ನಿವೃತ್ತ ಎ.ಎಸ್.ಐ. ರಮೇಶ್ ಕೆ. ಯರೇಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಖಜಾಂಚಿ ಬಿ. ಪಿ. ರಮೇಶ್ (ಗೌಡಪ್ಪ) ಬಿಟ್ಟಗೋಡನಹಳ್ಳಿ ಕಾಯ೯ಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ರಂಗನಟರು ರಂಗಗೀತೆಗಳಿಂದ ರಂಜಿಸಿದರು. ರಂಗಪ್ಪದಾಸ್ ರವರ ಧರ್ಮಪತ್ನಿಯವರನ್ನು ಸನ್ಮಾನಿಸಿ ಕಲಾವಿದರ ಹಿತರಕ್ಷಣಾ ಸಮಿತಿಯಿಂದ ಧನಸಹಾಯ ನೀಡಲಾಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ