ಬೆಂಗಳೂರು: ಹಿಂದೂಗಳ ಲಕ್ಷಗಟ್ಟಲೆ ವರ್ಷಗಳ ಸಂಸ್ಕೃತಿಯಲ್ಲಿನ ಅದ್ವಿತೀಯ ಪರಂಪರೆ ಅಂದರೆ ಗುರು-ಶಿಷ್ಯ ಪರಂಪರೆ. ರಾಷ್ಟ್ರ ಮತ್ತು ಧರ್ಮವು ಸಂಕಟದಲ್ಲಿರುವಾಗ ಸುವ್ಯವಸ್ಥೆಯನ್ನು ನಿರ್ಮಾಣ ಮಾಡುವಂತಹ ಮಹಾನ್ ಕಾರ್ಯವನ್ನು ಗುರು ಪರಂಪರೆ ಮಾಡಿದಂತಹ ಗೌರವಶಾಲಿ ಇತಿಹಾಸವು ಭಾರತಕ್ಕೆ ಲಭಿಸಿದೆ. ಭಗವಾನ್ ಶ್ರೀಕೃಷ್ಣನು ಅರ್ಜುನನಿಂದ, ಆರ್ಯ ಚಾಣಕ್ಯರು ಸಾಮ್ರಾಟ ಚಂದ್ರಗುಪ್ತನಿಂದ ಆಗಿನ ಸಾಮಾಜಿಕ ಪಿಡುಗುಗಳ ನಿರ್ಮೂಲನೆಯನ್ನು ಮಾಡಿದರು ಹಾಗೂ ಆದರ್ಶ ಧರ್ಮಾಧಿಷ್ಠಿತ ರಾಜ್ಯವ್ಯವಸ್ಥೆಯನ್ನು ಸ್ಥಾಪಿಸಿದರು. ಇಂತಹ ಮಹಾನ್ ಗುರುಪರಂಪರೆಯನ್ನು ಕಾಪಾಡುವ ಮತ್ತು ಶ್ರೀ ಗುರುಗಳ ಚರಣಗಳಲ್ಲಿ ಶರಣಾಗತಭಾವದಿಂದ ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನವೆಂದರೆ ಗುರುಪೂರ್ಣಿಮೆ.
ಗುರುಪೂರ್ಣಿಮೆಯ ದಿನ ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಪರಂಪರೆಯು ಅನಾದಿ ಕಾಲದಿಂದ ನಡೆಯುತ್ತಾ ಬಂದಿದೆ. ಈ ಉದ್ದೇಶದಿಂದ ಹಿಂದೂ ಜನಜಾಗೃತಿ ಸಮಿತಿಯು ಜುಲೈ 3 ಸೋಮವಾರದಂದು ಸಂಜೆ 5:30ಕ್ಕೆ ಗಾಂಧಿ ಬಜಾರ್ನ ಭವಾನಿ ಕಲ್ಯಾಣ ಮಂಟಪ, ಪದ್ಮಾವತಿ ಕಲ್ಯಾಣ ಮಂಟಪ, ರಾಜಾಜಿನಗರ, ಶ್ರೀ ವಿನಾಯಕ ಮಿನಿಹಾಲ್, ಯಲಹಂಕ ನ್ಯೂ ಟೌನ್ನಲ್ಲಿ ‘ಗುರುಪೂರ್ಣಿಮಾ ಮಹೋತ್ಸವ’ದ ಆಯೋಜನೆ ಮಾಡಲಾಗಿದೆ.
ಈ ಮಹೋತ್ಸವದಲ್ಲಿ ಶ್ರೀ ವ್ಯಾಸಪೂಜೆ ಮತ್ತು ಗುರುಪೂಜೆ; ‘ಹಿಂದೂಗಳ ಜಾಗೃತಿ ಮತ್ತು ಐಕ್ಯತೆಯ ಆವಶ್ಯಕತೆ’ಯ ಕುರಿತು ಪ್ರವಚನ ಮತ್ತು ಸಮಾಜಸೇವೆಯಲ್ಲಿರುವ ಗಣ್ಯರಿಂದ ರಾಷ್ಟ್ರ ಮತ್ತು ಧರ್ಮದ ಮಾರ್ಗದರ್ಶನ, ಅದೇ ರೀತಿ ಸ್ವಂತದ ರಕ್ಷಣೆಗಾಗಿ ಸ್ವರಕ್ಷಾ ಪ್ರಶಿಕ್ಷಣದ ಪ್ರಾತ್ಯಕ್ಷಿಕೆ ಇರಲಿದೆ. ಈ ಮಹೋತ್ಸವದಲ್ಲಿ ವಿವಿಧ ಗ್ರಂಥಗಳ ಪ್ರದರ್ಶನ, ರಾಷ್ಟ್ರ ಮತ್ತು ಧರ್ಮಜಾಗೃತಿ ಮೂಡಿಸುವ ಫಲಕಗಳ ಪ್ರದರ್ಶನ ಇತ್ಯಾದಿಗಳ ಲಾಭವನ್ನೂ ಪಡೆಯಬಹುದಾಗಿದೆ. ಈ ಗುರುಪೂರ್ಣಿಮಾ ಮಹೋತ್ಸವದ ಮೂಲಕ ಶ್ರೀಗುರುಗಳ ಆಶೀರ್ವಾದ ಲಭಿಸುವುದು ಹಾಗೂ ಹಿಂದೂಗಳ ಸಂಘಟನೆಯೂ ಆಗುವುದು. ಗುರುಪೂರ್ಣಿಮಾ ಮಹೋತ್ಸವದಲ್ಲಿ ಪಾಲ್ಗೊಂಡು ಗುರುಪೂರ್ಣಿಮೆಯ ದಿನ ಕಾರ್ಯನಿರತವಿರುವ ಒಂದು ಸಾವಿರ ಪಟ್ಟು ಗುರುತತ್ತ್ವದ ಲಾಭ ಪಡೆಯಲು ಎಲ್ಲ ರಾಷ್ಟ್ರ ಮತ್ತು ಧರ್ಮಪ್ರೇಮಿ ಹಿಂದೂಗಳು ಕುಟುಂಬ ಸಮೇತ ಉಪಸ್ಥಿತರಿರಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯು ಕರೆ ನೀಡಿದೆ.
ಗುರುಪೂರ್ಣಿಮೆಯ ವಿವರ:
1. ಪದ್ಮಾವತಿ ಕಲ್ಯಾಣ ಮಂಟಪ, ವೆಸ್ಟ್ ಆಫ್ ಕಾರ್ಡ್ ರಸ್ತೆ, ರಾಜಾಜಿನಗರ.
2. ಶ್ರೀ ವಿನಾಯಕ ಮಿನಿ ಹಾಲ್, ಶ್ರೀ ಗಾಯತ್ರಿ ಗಣಪತಿ ದೇವಸ್ಥಾನ ಪಕ್ಕ, ಯಲಹಂಕ ನ್ಯೂ ಟೌನ್.
3. ಭವಾನಿ ಕಲ್ಯಾಣ ಮಂಟಪ, ಪೂರ್ವ ಆಂಜನೇಯ ದೇವಸ್ಥಾನ ಬೀದಿ, ಬಸವನಗುಡಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ