ಪುಂಜಾಲಕಟ್ಟೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ, ರಾಷ್ಟ್ರೀಯ ಸೇವಾ ಯೋಜನೆ ಘಟಕ 1&2 ಹಾಗೂ ಆಂತರಿಕ ಗುಣ ಮಟ್ಟ ಭರವಸೆ ಕೋಶ, ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಪುತ್ತೂರು ಇವರ ಜಂಟಿ ಆಶ್ರಯದೊಂದಿಗೆ ಇಂದು (ಜು.1) ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆ ಇಲ್ಲಿ ಗ್ರಂಥಮಿತ್ರ ಕಾರ್ಯಕ್ರಮವನ್ನು ಆಯೋಜಿಸಲಾಗಿತು.
ಗ್ರಾಮ ಪಂಚಾಯತ್ ಮಡಂತ್ಯಾರ್ ಇದರ ಅಧ್ಯಕ್ಷರಾದ ಶ್ರೀಮತಿ ಶಶಿಪ್ರಭಾ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ.ಟಿ.ಕೆ ಶರತ್ ಕುಮಾರ್ ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಗ್ರಂಥಮಿತ್ರದಿಂದ ಪ್ರಯೋಜನ ಪಡೆದ ಎನ್ ಎಸ್ ಎಸ್ ನ ಸ್ವಯಂ ಸೇವಕರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಗ್ರಂಥಾಲಯದ ಅವಶ್ಯಕತೆಯ ಬಗ್ಗೆ ಮಾಹಿತಿ ನೀಡಿದರು. ಸುರೇಶ್ ಶೆಟ್ಟಿ ಮುಖ್ಯೋಪಾಧ್ಯಯರು ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆ, ಶ್ರೀಮತಿ ಸರೋಜನಿ.ಬಿ ಗ್ರಂಥಪಾಲಕಿ ಗ್ರಾಮಪಂಚಾಯತ್ ಮಡಂತ್ಯಾರು, ಎಸ್ ಡಿಎಂಸಿ ಸದಸ್ಯರಾದ ಜಯರಾಮ್ ಶೆಟ್ಟಿ, ಎನ್ ಎಸ್ ಎಸ್ ನ ಯೋಜನಾಧಿಕಾರಿಗಳಾದ ಸಂತೋಷ್ ಪ್ರಭು ಮತ್ತು ಶ್ರೀಮತಿ ಚಿತ್ರಾ ಪಡಿಯಾರ್ ಇವರು ಉಪಸ್ಥಿತರಿದ್ದರು. ಗ್ರಂಥಮಿತ್ರ ಪ್ರಯೋಜನ ಪಡೆದ ಎನ್ ಎಸ್ ಎಸ್ ನ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ನಿರೂಪಿಸಿ ಯಶಸ್ವಿಗೊಳಿಸಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ, ರಾಷ್ಟ್ರೀಯ ಸೇವಾ ಯೋಜನೆ ಘಟಕ 1&2 ಹಾಗೂ ಆಂತರಿಕ ಗುಣ ಮಟ್ಟ ಭರವಸೆ ಕೋಶ ಇದರ ವತಿಯಿಂದ ಇಂದು (ಜು.1) ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆ ಇಲ್ಲಿ ನವಚೇತನ ಎಂಬ ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕೈ ತೋಟ ರಚನೆ ಇದರ ಮುಖ್ಯ ಉದ್ದೇಶವಾಗಿದರಿಂದ ಎನ್ ಎಸ್ ಎಸ್ ನ 25 ಸ್ವಯಂ ಸೇವಕರು ಈ ಶ್ರಮದಾನದಲ್ಲಿ ಪಾಲ್ಗೊಂಡು ಕೈ ತೋಟ ಹಾಗೂ ಶಾಲೆಯ ದಾರಿಯ ಮುಂಭಾಗವನ್ನು ಸ್ವಚ್ಚ ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ