ಬೆಂಗಳೂರು: ನೃತ್ಯ ದಿಶಾ ಟ್ರಸ್ಟಿನ ಸಂಸ್ಥಾಪಕರೂ ಗುರುಗಳೂ ಆದ 'ಕಲಾಭೂಷಿಣಿ' ಶ್ರೀಮತಿ ದರ್ಶಿನಿ ಮಂಜುನಾಥ್ ಅವರ ಶಿಷ್ಯೆ ಕು. ದಿಶಾ ಮಂಗನಹಳ್ಳಿ ರವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವು ಇತ್ತೀಚೆಗೆ ನಗರದ ಜೆ.ಸಿ. ರಸ್ತೆಯಲ್ಲಿರುವ ಎ ಡಿ ಎ ರಂಗಮಂದಿರದಲ್ಲಿ ವಿಜೃಂಭಣೆಯಿಂದ ಜರುಗಿತು.
ಈ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗುರು.ಶ್ರೀಮತಿ ಉಷಾ ದಾತಾರ್, ಡಾ. ಸಿ. ನಿರ್ಮಲಾ ಯಲಿಗಾರ್, ಮೃದಂಗ ವಿದ್ವಾನ್ ಶ್ರೀ ರೇಣುಕಾ ಪ್ರಸಾದ್, ಡಾ. ವಿದ್ಯಾಕುಮಾರಿ ಭಾಗವಹಿಸಿದ್ದರು.
ಮೊದಲಿಗೆ ಭರತನಾಟ್ಯ ಮಾರ್ಗದಲ್ಲಿನ ಶ್ರೀರಂಜಿನಿ ರಾಗದ 'ಪುಷ್ಪಾಂಜಲಿಯೊಂದಿಗೆ ದಿಶಾ ಕಾರ್ಯಕ್ರಮ ಪ್ರಾರಂಭಿಸಿದಳು. ತದನಂತರ ನರ್ತಿಸಿದ ಕೃತಿ ಪ್ರಭೋ ಗಣಪತಿ ಯನ್ನು ಅಮೋಘವಾಗಿ ಅಭಿನಯಿಸಿದಳು.
ಮುಂದಿನ ಆಯ್ಕೆ ಸಂಕೀರ್ಣ ಅಲರಿಪು ನೃತ್ಯವನ್ನು ಸಮಂಜಸವಾಗಿ ನರ್ತಿಸಿದಳು.
ಶ್ರೀ ಚಾಮುಂಡೇಶ್ವರಿ ಸುತ್ತಿಯಲ್ಲಿ ಮಹಿಷಾಸರಮರ್ದಿನಿ ಕಥಾ ಪ್ರಸಂಗವನ್ನು ಅದ್ಬುತವಾಗಿ ಅಭಿನಯಿಸಿದಳು ದಿಶಾ.
ಮುಂದಿನ ಭಾಗ ವರ್ಣ, ವಿರೋಹತ್ಕಂಟಿತೆ ನಾಯಕಿ ಭಾವದ ವೆಲನೈ ವರ ಸೋಲ್ಲಡಿಯಲ್ಲಿ ದಿಶಾ ಅವರು ಮುರುಗನ್ ಜನನ, ತಾಯಿ ಪಾರ್ವತಿಯಿಂದ ವೆಲ್ ಆಯುಧ ಪಡೆದು ಸುರಪ್ರಧ ರಕ್ಕಸನನ್ನು ಕೊಂದಂತಹ ಮುರುಘಾನನ್ನು ಕರೆದುಕೊಂಡು ಬಾ ಎಂದು ಸಖಿಗೆ ಪರಿಪರಿಯಾಗಿ ಕೇಳಿ ಕೊಂಡತಹ ಈ ವರ್ಣವನ್ನು ಅದ್ಬುತವಾಗಿ ನರ್ತಿಸಿದಳು. ಜತ್ತಿಗಳ ಅಮೋಘ ಸಂಯೋಜನೆಗೆ ದಿಶಾ ಸುಂದರವಾಗಿ ಹೆಜ್ಜೆ ಹಾಕಿದಳು.
ಉತ್ತರಾರ್ಧದಲ್ಲಿ ಶುಖ ಕವಿಯ ರಾಮ ನವರಸ ಹಾಗೂ ಯಮನೆಲ್ಲಿ ಕಾಣೆನೆಂದು ಅಭಿನಯಿಸಿದರು. ಈ ದೇವರ ನಾಮದಲ್ಲಿ ದಿಶಾ ದಶಾವತಾರ ಅಮೋಘವಾಗಿ ನರ್ತಿಸಿದರು. ತನ್ನ ಗುರುಗಳ ವಿದ್ವತ್ ಪೂರ್ಣ ಸಂಯೋಜನೆಗೆ ಸೈ ಅನ್ನಿಸುವಂತೆ ಅಭಿನಯಿಸಿದಳು ದಿಶಾ.
ದಿಶಾ ಅವರ ಕಾರ್ಯಕ್ರಮದಲ್ಲಿ ತುಂಬಾ ಮೆಚ್ಚುಗೆ ಪಡೆದ ನೃತ್ಯ ತುಳಸಿದಾಸರ ಹನುಮಾನ್ ಚಾಲೀಸ. ದಿಶಾ ತನ್ಮಯತೆಯಿಂದ ಹನುಮನಂತ ಗುಣಗಾನ ಮಾಡಿದಳು.
ಕಾರ್ಯಕ್ರಮ ಮೋಹನ ಕಲ್ಯಾಣಿ ತಿಲ್ಲಾನದೊಂದಿಗೆ ಸಂಪೂರ್ಣಗೊಂಡಿತು. ಗುರು ದರ್ಶಿನಿ ಮಂಜುನಾಥ್ ರವರ ಸುಂದರ ಸಂಯೋಜನೆಗೆ ಅದ್ಬುತವಾಗಿ ನೃತ್ತ ಹಾಗೂ ಅಭಿನಯಗಳಿಂದ ರಸಿಕರ ಮನ ಗೆದ್ದಳು ದಿಶಾ. ಹನುಮಂತನ ಸ್ತುತಿಯೊಂದಿಗೆ ರಂಗಪ್ರವೇಶ ಸಂಪೂರ್ಣವಾಯಿತು.
ಒಟ್ಟಾರೆ ರಂಗಪ್ರವೇಶ ಯಶಸ್ವಿಯಾಗಿ ಮೂಡಿಬಂತು. ಗುರು.ದರ್ಶಿನಿ ಅವರ ಸಂಯೋಜನೆ ಕು. ದಿಶಾ ಮಂಗನಹಳ್ಳೀ ಅವರ ಅಭಿನಯಕ್ಕೆ ರಸಿಕರು ಪ್ರಸಂಶೆ ವ್ಯಕ್ತಪಡಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ