ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಫಿಶರೀಸ್ ಚಿತ್ರಾಪುರ ಕುಳಾಯಿ ಶಾಲಾ ಪ್ರಾರಂಭೋತ್ಸವು ನಡೆಯಿತು. ಇಲಾಖಾ ವತಿಯಿಂದ ನೀಡಲಾದ ಪುಸ್ತಕ ಮತ್ತು ಸಮವಸ್ತ್ರಗಳನ್ನು ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯೆ ಹಾಗೂ ಮಾಜಿ ಉಪಮೇಯರ್ ವೇದಾವತಿ ವಿತರಿಸಿದರು.
ಶಾಲಾ ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ ಚಿತ್ರಾಪುರ, ನಿವೃತ್ತ ಶಿಕ್ಷಕಿ ಪುಷ್ಪಾವತಿ, ಶ್ರೀನಿವಾಸ ರಾವ್, ದೇವದಾಸ ಕುಳಾಯಿ, ಶಾಲಾಭಿವೃದ್ಧಿ ಸಮಿತಿ ಸದಸ್ಯ ಚಂದ್ರ ಮುಖ್ಯ ಅತಿಥಿಗಳಾಗಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶೋಭ, ಹಿರಿಯ ಶಿಕ್ಷಕಿಯರಾದ ಸುಕೇಶಿನಿ, ಶರ್ಮಿಳಾ, ಕಾಮಾಕ್ಷಿ, ಅನಿತಾ ತಂತ್ರಿ ಮತ್ತು ಸಿಂತಿಯಾ ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ