ಅಂಬೇಡ್ಕರರು ಕಲಿಯುಗದ ಜನಕೆ ಧೀಶಕ್ತಿ
ತುಂಬಿದರು ಎಂದು ಬಣ್ಣಿಸಿದರಂದು
ಕಂಬನಿಯು ಮಿಡಿವವರ ಕಣ್ಣೀರ ತೊಡೆಯಲಿಕೆ
ಕುಂಭಿನಿಗೆ ಬಂದವರು ಲಕ್ಷ್ಮಿದೇವಿ
ಈ ಮೇಲಿನ ಮುಕ್ತಕದಂತೆ ಅಂಬೇಡ್ಕರ್ ಅವರು ಕಲಿಯುಗದ ಜನಕ್ಕೆ ಎಲ್ಲರಿಗೂ ಶಕ್ತಿಯಾಗಿ ನಿಂತವರು. ಪ್ರತಿಯೊಬ್ಬರಿಗೂ ಶಕ್ತಿಯನ್ನು ತುಂಬುತ್ತಾ ಮುಂದೆ ನಡೆದವರು ಅಂದಿನ ಕಾಲದಲ್ಲಿ ಅನುಭವಿಸುತ್ತಿದ್ದ ಸಮಸ್ಯೆಗಳಿಗೆ ಪರಿಹಾರವನ್ನು ಹೇಳುತ್ತಾ ಜನರ ಕಂಪನಿಗಳನ್ನು ಅಳಿಸುತ್ತಾ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಸಮಸ್ಯೆಯ ಪರಿಹಾರವನ್ನು ಹುಡುಕುತ್ತಾ ಹೊರಟವರು. ಜಗತ್ತು ಕಂಡ ಅದ್ಭುತ ನಾಯಕರು ಇವರು. ಬ್ರಿಟಿಷರಿಂದ ಆರಂಭಿಸಲ್ಪಟ್ಟ ಹಿಂದೂ ವೈಯಕ್ತಿಕ ಕಾನೂನಿನ ಸುಧಾರಣೆ ಮತ್ತು ಕ್ರೋಡೀಕರಣ ಪ್ರಕ್ರಿಯೆಯು 1947ರಲ್ಲಿ ಭಾರತ ಸ್ವತಂತ್ರವಾದ ಮೇಲೆ ವಸಾಹತು ಶಾಹಿ ನಂತರ ಸರ್ಕಾರದ ಪ್ರಧಾನ ಮಂತ್ರಿಯಾಗಿ ಜವಾಹರ್ ಲಾಲ್ ನೆಹರು ನೇತೃತ್ವದಲ್ಲಿ ಸಂಪೂರ್ಣಗೊಂಡಿತು. ಹಿಂದೂ ಧರ್ಮದ ಜೀವನ ಸ್ವರೂಪದ ಬಗ್ಗೆ ಬಹಳ ವ್ಯಾಪಕವಾದ ಕೆಲವು ಶಾಶ್ವತವಾದ ನಿರ್ದಿಷ್ಟ ಮೂಲಭೂತ ನಂಬಿಕೆಗಳು ಇರಬಹುದು. ಹೀಗಾಗಿ ಇಂದು ಕಾನೂನುಗಳು ಹೆಚ್ಚು ಏಕರೂಪವಾಗಿಲ್ಲವೆಂದು ವಿದ್ವಾಂಸರಾದ ಡೆರೆಟ್ ಗ್ರಂಥವಾದ ಹಿಂದೂ ಕಾನೂನಿನಲ್ಲಿ ಉಲ್ಲೇಖಿಸಲಾಗಿದೆ.
ನಾವು ಹಿಂದೂಗಳನ್ನು ಗುರುತಿಸಬೇಕಾದರೆ ಭೂಮಿಯ ಅಂತ್ಯ ಭಾಗದಿಂದ ಸಂಗ್ರಹಿಸಲ್ಪಟ್ಟಿರಬಹುದಾದ ಮನುಷ್ಯ ಜೀವಿಗಳ ವೈವಿಧ್ಯಮಯವಾದ ಜೀವನ ಕ್ರಮ ಮನೋವೈಜ್ಞಾನ ಹವ್ಯಾಸ, ಮತ್ತು ಕಸುಬು ಮುಂತಾದ ಮಾನವನ ಸಮುದಾಯ ವಿಭಿನ್ನ ಸ್ವರೂಪದ ಆಧಾರದ ಮೇಲೆ ಹಿಂದುಗಳನ್ನು ವಿವರಿಸಿದ್ದಾರೆ. ಆಯಾಯ ಗುಂಪುಗಳಿರಬಹುದು ಕೆಲಸ ಮಾಡುವ ಕ್ರಮವಿರಬಹುದು. ವಿಭಿನ್ನ ಶೈಲಿಯ ಅರ್ಥದಲ್ಲಿ ಭಿನ್ನ ರೀತಿಯಲ್ಲಿ ಹಿಂದುಗಳೆಂದು ವರ್ಗೀಕರಿಸಲಾಗಿದೆ. ಅಷ್ಟೇ ಅಲ್ಲ ವರ್ಗಗಳನ್ನು ಸಹ ಜಾತೀಯವಾಗಿ ವಿಭಾಗ ಮಾಡಲಾಗಿತ್ತು. ಹಾಗೆ ಧರ್ಮಶಾಸ್ತ್ರವು ಕೆಲವೊಂದು ಗ್ರಾಂಥಿಕ ವಿಷಯಗಳ ಮೇಲೆ ಹಿಡಿತವನ್ನು ಹೊಂದಿದೆ ಅವುಗಳೆಂದರೆ ವಿವಾಹವಾಗಿರಬಹದು, ದತ್ತು ಸ್ವೀಕಾರ ಆಗಿರಬಹುದು, ಅಲ್ಪಸಂಖ್ಯಾತರಾಗಿರಬಹುದು, ಅನುಕ್ರಮ ಹಕ್ಕು ದಾರಿಕೆ ಆಗಿರ ಬಹುದು, ಧಾರ್ಮಿಕ ದತ್ತಿಗಳಾಗಿರಬಹುದು, ಜಾತಿ ಸವಲತ್ತುಗಳು ಮುಂತಾದ ಖಾಸಗಿ ಕಾನೂನುಗಳಲ್ಲಿ ಹಿಂದೂ ಧರ್ಮ ವಿಚಾರಗಳನ್ನು ಕಾಣಬಹುದು ಏಕೆಂದರೆ ಹಿಂದೂ ಕಾನೂನು ಅಸಮಂಜಸ ನಿಯಮಗಳನ್ನು ಹೆಸರಿಸುವುದು, ಹಾಗೂ ವರ್ಣಿಸುವುದು ಕಷ್ಟ ಸಾಧ್ಯವಾಗಿದ್ದು ಬೇರೆ ವಿಚಾರಗಳಿಗೆ ಸಂಬಂಧಿಸಿದಂತೆ ಹಿಂದೂ ಕಾನೂನುಗಳು ಕಲೆಬೆರಿಕೆಗಳಿಂದಾದ ನಿಯಮಗಳು ಸಾಮರಸ್ಯವಿಲ್ಲದೆ. ಪೈ ಪೋಟಿಯುತವಾಗಿವೆ. ಹೀಗಾಗಿ ಹಿಂದೂ ಕಾನೂನುಗಳ ಏಕ ಪ್ರಕಾರತೆಯನ್ನು ಕೊರತೆಯನ್ನು ಹಾಡಬಹುದು. ಜೊತೆಗೆ ಹಿಂದೂಗಳಲ್ಲಿರುವಂತಹ ಹೊಂದಾಣಿಕೆಯ ಕೊರತೆ ಇರಬಹುದು. ರೀತಿ ನೀತಿ ನಿಯಮಗಳಲ್ಲಿನ ಅಡೆತಡೆಗಳು ಇರಬಹುದು. ಅದರಲ್ಲಿನ ಸರಿಯಾಗಿ ನಿರ್ವಹಿಸುವ ಶಕ್ತಿ ಇಲ್ಲದೆ ಇರಬಹುದು. ಸಮಸ್ಯೆಗಳನ್ನು ಕಾಣುತ್ತಿದ್ದೇವೆ.
ಭಾರತ ಸ್ವತಂತ್ರವಾದ ಮೇಲೆ ವಸಾಹತುಶಾಹಿ ನಂತರ ಸರ್ಕಾರದ ಪ್ರಧಾನ ಮಂತ್ರಿಯಾದ ಜವಹರಲಾಲ್ ನೆಹರು ನೇತೃತ್ವದಲ್ಲಿ ಸಂಪೂರ್ಣಗೊಂಡಿತು. ಹಸ್ತಕ್ಷೇಪ ಮಾಡದಿರುವ ಬ್ರಿಟಿಷ್ ನೀತಿಯ ಪ್ರಕಾರ ವೈಯಕ್ತಿಕ ಕಾನೂನಿನ ಸುಧಾರಣೆಯು ಹಿಂದೂ ಸಮುದಾಯದಲ್ಲಿ ಹುಟ್ಟಿದಂತೆ ಬೇಡಿಕೆಯಾಯಿತು. ಇದು ಆಗಿನ ಸಂಗತಿ ಆಗಿರಲಿಲ್ಲ, ಆ ವೇಳೆಗೆ ಮಹತ್ವವಾದ ವಿರೋಧವು ವಿವಿಧ ಹಿಂದೂ ರಾಜಕಾರಣಿಗಳು ಸಂಘಟನೆಗಳು ಮತ್ತು ಧರ್ಮಭಕ್ತರುಗಳಿಂದ ವ್ಯಕ್ತವಾಗಿ ಅವರು ಹಿಂದು ಸಮುದಾಯದಿಂದ ತಮ್ಮನ್ನು ತಾವು ಬೇರ್ಪಡಿಸಿಕೊಂಡರು. ಆದ ಕಾರಣ ಕಾನೂನುಗಳ ಸುಧಾರಣೆಯಾಗಬೇಕಿತ್ತು.. ಹೇಗಾದರೂ ಏಕರೂಪತೆ ಎಂಬುದು ಆದರ್ಶಪ್ರಾಯ ರಾಷ್ಟ್ರದ ಮೊದಲ ಹೆಜ್ಜೆ. ಹೀಗಾಗಿ ಕ್ರೋಡೀಕರಣವು ಹಿಂದೂ ಸಮುದಾಯವನ್ನು ಒಗ್ಗೂಡಿಸುವ ಸಲುವಾಗಿ ಅಗತ್ಯವಾದದ್ದು ಎಂದು ನೆಹರು ಆಡಳಿತವು ಕಂಡುಕೊಂಡಿತು. 1955 - 56ರಲ್ಲಿ ಅವರು ನಾಲ್ಕು ಹಿಂದೂ ಕೋಡ್ ಬಿಲ್ಸ್ ಗಳನ್ನು ಜಾರಿಗೊಳಿಸುವಲ್ಲಿ ಯಶಸ್ವಿ ಆದರೂ ಅವುಗಳೆಂದರೆ
1.. ಹಿಂದೂ ವಿವಾಹ ಕಾಯ್ದೆ
2.. ಹಿಂದೂ ಅನು ಪೂರ್ವಿ ಅಥವಾ ಅನುಕ್ರಮ ಕಾಯ್ದೆ
3.. ಹಿಂದೂ ಅಲ್ಪಸಂಖ್ಯಾತ ಮತ್ತು ಗಾರ್ಡನ್ ಶಿಪ್ ಕಾಯ್ದೆ
4.. ಹಿಂದೂ ದತ್ತು ಸ್ವೀಕಾರ ಮತ್ತು ಜೀವನಾಂಶ ಕಾಯ್ದೆ ಈ ಕಾಯ್ದೆಗಳು ಸ್ತ್ರೀಯರ ಧಾರ್ಮಿಕ ಮತ್ತು ರಾಷ್ಟ್ರೀಯವಾದಿ ಗುಂಪುಗಳಿಗೆ ಸಂಬಂಧಿಸಿದಂತೆ ಇಂದಿಗೂ ಸಹ ವಿವಾದಾತ್ಮಕವಾಗಿದೆ.
ಈ ಸಮುದಾಯಗಳ ವ್ಯಾಪ್ತಿಗೆ ಬಿದ್ದಿದ್ದ ವಿಷಯಗಳನ್ನು ವೈಯಕ್ತಿಕ ಕಾನೂನುಗಳನ್ನು ಕರೆಯಲಾಯಿತು. ಭಾರತೀಯ ರಾಜಕೀಯ ವ್ಯವಸ್ಥೆಯನ್ನು ಸಂಘಟಿಸಿರುವಲ್ಲಿ 1940ರ ವೇಳೆಯ ಮೊದಲೇ ಬ್ರಿಟಿಷರಿಂದ ಆರಂಭವಾದ ವ್ಯಕ್ತಿತ್ವ ಹಿಂದೂ ಕಾನೂನುಗಳ ಕ್ರೋಢೀಕರಣ ಪ್ರಕ್ರಿಯೆಯು ಬಹಳ ಪ್ರಮುಖವಾದದ್ದು. ಮಹಿಳೆಯರಿಗೆ ಇಂದು ಭರಪೂರ ಹಕ್ಕುಗಳಿವೆ. ಆಯೋಗಗಳು ಸಹ ಇವೆ. ದೌರ್ಜನ್ಯಕ್ಕೆ ರಕ್ಷಣೆ ಇದೆ. ಆಸ್ತಿಯಲ್ಲಿ ಪಾಲು ಇದೆ. ಆಶ್ಚರ್ಯವೆಂದರೆ ಭಾರತೀಯ ಮಹಿಳೆಯರಿಗೆ ನೀಡಿದ್ದು ಯಾರು? ಅದು ಬಾಬಾ ಸಾಹೇಬ್ ಅಂಬೇಡ್ಕರ್ ಅಲ್ಲದೆ ಬೇರಾರು ಅಲ್ಲ. ಈ ಬಿಸಿಯಲ್ಲಿ ಈ ದೇಶದ ಪ್ರಥಮ ಕಾನೂನು ಸಚಿವರಾಗಿ ಮಹಿಳೆಯರ ಹಕ್ಕುಗಳ ರಕ್ಷಣೆಯ ನಿಟ್ಟಿನಲ್ಲಿ ಅಂಬೇಡ್ಕರ್ ಅಂದು ರೂಪಿಸಿದ ಮಸೂದೆ ಬಗ್ಗೆ ತಿಳಿಯುವುದಾದರೆ ಅಂಬೇಡ್ಕರ್ ರವರು ರಚಿಸಿದ ಹಿಂದೂ ಕೋಡ್ ಬಿಲ್ ಮುಖ್ಯವಾಗಿ ಏಳು ಅಂಶಗಳನ್ನು ಒಳಗೊಂಡಿತ್ತು. ಅವುಗಳೆಂದರೆ.
* ಆಸ್ತಿಯ ಹಂಚಿಕೆ
* ಆಸ್ತಿಯ ವಾರಸುದಾರರನ್ನು ಪಟ್ಟಿ ಮಾಡುವುದು
* ಜೀವನಾಂಶ
* ಮದುವೆ
* ವಿಚ್ಛೇದನ
* ದತ್ತು ಸ್ವೀಕಾರ
ಪ್ರಸ್ತುತ ವಿಷಯಗಳು ಹೇಳಬೇಕೆಂದರೆ ಅಂದು ಮಹಿಳೆಯರಿಗಾಗಿ ಹೋರಾಟವನ್ನು ಮಾಡಿದವರು ಅಂಬೇಡ್ಕರ್ ರವರು ಮಾತ್ರ ಅವರ ಹೋರಾಟದ ಫಲವೇ ಇಂದು ಮಹಿಳೆಯರು ಸ್ವಚ್ಛಂದವಾಗಿ ಜೀವಿಸಲು ಸಹಕಾರಿಯಾಗಿದೆ. ಅಪ್ರಾಪ್ತ ವಯಸ್ಕರ ಮದುವೆ. (ಅಂಬೇಡ್ಕರ್ ಬರಹಗಳು ಇಂಗ್ಲಿಷ್ ನಂಬರ್ 14 ಭಾಗ-1 ಪುಟ ಸಂಖ್ಯೆ 41 ) ಖಂಡಿತ ಈ ಏಳು ಅಂಶಗಳ ಅಂಬೇಡ್ಕರರ ಅಂತಹದ್ದೊಂದು ಪ್ರಯತ್ನಕ್ಕೆ ಪ್ರಮುಖ ಕಾರಣ ಈ ದೇಶದ ಮಹಿಳೆಯರು ಮತ್ತು ಮಕ್ಕಳ ಹಿತ ಚಿಂತನೆ ಎಂಬುದು ಮತ್ತೆ ಮತ್ತೆ ಹೇಳಿ ಒತ್ತಿ ಹೇಳಬೇಕಾದ ಅಂಶ.
* ಆಸ್ತಿಯಲ್ಲಿ ಮಹಿಳೆಯರಿಗೆ ಪಾಲುಗಾರಿಕೆ ಬಗ್ಗೆ
ಮೊದಲಿಗೆ ಅಂಬೇಡ್ಕರರು ಹೇಳುವಂತೆ, ಆ ಕಾಲದಲ್ಲಿ ಹಿಂದೂಗಳಲ್ಲಿ ಆಸ್ತಿ ಹಂಚಿಕೆ ಬಗ್ಗೆ ಎರಡು ವಿಧಗಳಿತ್ತು.
ಒಂದನೆಯ ಮಿತಾಕ್ಷರ
ಎರಡನೆಯದು ದಯಾಭಾಗ.
ಇದರಲ್ಲಿ ಹಿಂದೂಗಳು ಪ್ರಮುಖವಾಗಿ ಮಿತಾಕ್ಷರ ಪದ್ಧತಿಯಲ್ಲಿ ಅನುಸರಿಸುತ್ತಿದ್ದರು. ಮಿತಾಕ್ಷರದ ಈ ಪದ್ಧತಿಯಲ್ಲಿ ಆಸ್ತಿಯ ವ್ಯಕ್ತಿಯು ಬದುಕಿದಾಗ ಅದು ಆತನ ಸ್ವಂತ ಆಸ್ತಿಯಾಗಿರುತ್ತಿರಲಿಲ್ಲ. ಬದಲಿಗೆ ಅದು ತಂದೆ, ಮಗ, ಮೊಮ್ಮಗ, ಮತ್ತು ಮರಿ ಮೊಮ್ಮಗ, ಹೀಗೆ ನಾಲ್ವರು ಸಮಾನ ಪಾಲುಗಳಿಗೆ ಸೇರುತ್ತಿದ್ದರು.
ತಂದೆ, ಮಗ, ಮೊಮ್ಮಗ, ಮರಿ ಮೊಮ್ಮಗ, ಈ ಸರಣಿಯಲ್ಲಿ ಹೆಣ್ಣು ಮಕ್ಕಳಿಗೆ ಅವಕಾಶವೇ ಇಲ್ಲ. ಎಂಬುದನ್ನು ಗಮನಸಬೇಕಾದ ಅಂಶ. ಅಂಬೇಡ್ಕರ್ ಮಿತಾಕ್ಷರದ ಈ ಪದ್ಧತಿಯ ಬದಲಿಗೆ ದಯಾಭಾಗ ಪದ್ಧತಿಯನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು. ದಯಾ ಭಾಗ ಈ ಪದ್ಧತಿಯ ಪ್ರಕಾರ ವ್ಯಕ್ತಿಯು ಬದುಕಿದಾಗ ಆಸ್ತಿಯೂ ಆತನ ಸ್ವಂತದಾಗಿದ್ದು ಸತ್ತನಂತರ ಅದು ಆತನ ಉತ್ತರಾಧಿಕಾರಿಗೆ ಸೇರುತ್ತಿತ್ತು. ಉತ್ತರಾಧಿಕಾರಿ ಅದನ್ನು ಮಾರಬಹುದಿತ್ತು ಕೊಡುಗೆ ಅಥವಾ ವಿಲ್ ಮೂಲಕ ತನಗೆ ಬೇಕಾದವರಿಗೆ ಕೊಡಬಹುದಿತ್ತು. ಅಂಬೇಡ್ಕರ್ ಅವರ ದಾಯ ಭಾಗ ಪದ್ಧತಿ ಶಿಫಾರಸು ಮಾಡಲಾಗಿ ಆಸ್ತಿ ಆತನ ರಕ್ತ ಸಂಬಂಧಿಗಳಿಗೆ ಹೋಗುವಂತಾಯಿತು. ಈ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಆಸ್ತಿ ವಾರಸುದಾರರಿಗೆ ಸಂಬಂಧಿಸಿದಂತೆ ಮಹಿಳೆಯರ ಪರವಾಗಿ ಒಂದು ಬದಲಾವಣೆ ತಂದರು. ಅದೇನೆಂದರೆ ಅದುವರೆಗೂ ನಿಯಮದಲ್ಲಿ ಕೇವಲ ಮಗನಷ್ಟೇ ವಾರಸುದಾರನಾಗಿರುತ್ತಿದ್ದ. ಆದರೆ ಅಂಬೇಡ್ಕರರು ಆತನ ವಾರಸುದಾರರಿಗೆ ಮಕ್ಕಳು, ವಿಧವೆ ಮಗಳು, ಈಗಾಗಲೇ ಮರಣ ಹೊಂದಿರುವಂತಹ ಮಗನ ವಿಧವಾ ಪತ್ನಿ- ಇವರೆಲ್ಲರೂ ಮಗನಷ್ಟೇ ಸಮಾನವಾದ ಹಕ್ಕು ಬರುವಂತೆ ಮಾಡಿದರು.
ಅಂಬೇಡ್ಕರರು ಅಂತಹ ವಾರಸು ದಾರಿಕೆಗೆ ಮಗಳು, ವಿಧವೆ ಈಗಾಗಲೇ ಮರಣ ಹೊಂದಿದ್ರೆ ಮಗನ ಬಿಡುವ ಪತ್ನಿ ಇವರೆಲ್ಲರನ್ನು ಮಗನಷ್ಟೇ ಸಮಾನವಾದ ಸುಧಾರರಾಗಿ ತೆಗೆದುಕೊಳ್ಳಬಹುದು ಎಂದು. ಹೆಣ್ಣು ಮಕ್ಕಳಿಗೂ ಆಸ್ತಿಯಲ್ಲಿ ಪಾಲು ನೀಡಿದರು. ಅಂದ ಹಾಗೆ ಅದು ಎಷ್ಟು ಪಾಲು? ಅಂದ್ರೆ ತಂದೆಯ ಆಸ್ತಿಯಲ್ಲಿ ಮಗನಿಗೆ ಎಷ್ಟು ಸಿಗುತ್ತದೆಯೋ, ಅದರ ಅರ್ಧದಷ್ಟು ಮಗಳಿಗೆ ಈ ಸಂದರ್ಭದಲ್ಲಿ ಆ ಹೆಣ್ಣು ಮಗಳು ಮದುವೆಯಾಗಿದ್ದರೆ ಅಥವಾ ಮದುವೆಯಾಗದಿದ್ದರೆ ಖಂಡಿತ ಅದು ಅದ್ಯಾವುದೋ ಅಡ್ಡಿ ಬರದಂತೆ ಮಗನ ಅರ್ಧದಷ್ಟು ಆಕೆ ಪಡೆಯಬಹುದಿತ್ತು. ಮಹಿಳೆಯರ ಹಿತ ದೃಷ್ಟಿಯಿಂದ ಕೆಲವು ಅಂಶಗಳನ್ನು ಅಂಬೇಡ್ಕರ್ ಅವರು ಪಟ್ಟಿ ಮಾಡಿದರು. ಅವುಗಳೆಂದರೆ:
* ಆತ ಅಸಹನೀಯ ರೋಗದಿಂದ ನರಳುತ್ತಿದ್ದರೆ.
* ಆತ ಅತಿ ಕ್ರೂರನಾಗಿದ್ದರೆ.
* ಆತ ಇನ್ನೊಬ್ಬಳನ್ನು ಇಟ್ಟುಕೊಂಡಿದ್ದರೆ.
* ಆತ ಅವಳನ್ನು ಬಿಟ್ಟು ಎರಡು ವರ್ಷಗಳಿಗೂ ಮೀರಿ ದೂರ ಇದ್ದರೆ.
* ಆತ ಬೇರೆ ಯಾವುದಾದರೂ ಧರ್ಮಕ್ಕೆ ಮತಾಂತರ ಹೊಂದಿದ್ದರೆ ಅಥವಾ ಇನ್ನೂ ಯಾವುದಾದರೂ ನ್ಯಾಯ ಬದ್ಧ ಕಾರಣಗಳು.
* ಒಟ್ಟಾರೆ ಹೀಗೆ ಅಂಬೇಡ್ಕರರು ಮಹಿಳೆಗೆ ಕಾನೂನಾತ್ಮಕವಾಗಿ ಸ್ವಾತಂತ್ರ್ಯ ನೀಡಿದರು.
ಮದುವೆ ಮತ್ತು ವಿಚ್ಛೇದನದ ಹಕ್ಕುಗಳ ಬಗ್ಗೆ:
ಅಂಬೇಡ್ಕರ್ ರವರು ಮಹಿಳೆ ಮತ್ತು ವಿಚ್ಛೇದನದ ಹಕ್ಕುಗಳ ಬಗ್ಗೆ ಹಲವಾರು ಅಂಶಗಳನ್ನು ಯೋಚಿಸಿ. ಮುಂದುವರೆದು ಮದುವೆ ಮತ್ತು ವಿಚ್ಛೇದನಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಅದು ವರವಿಗೂ ಹಿಂದೂ ಕಾನೂನಿನಲ್ಲಿ ಸಾಂಕ್ರಮೆಂಟ್ ಅಥವಾ ಧಾರ್ಮಿಕ ಮದುವೆಗೆಷ್ಟೇ ಮಾನ್ಯತೆ ಇತ್ತು.
ಸಿವಿಲ್ ಮ್ಯಾರೇಜ್ ಅಥವಾ ನಾಗರಿಕ ಮದುವೆಗೆ ಯಾವುದೇ ಮಾನ್ಯತೆ ಇರಲಿಲ್ಲ. ಹಾಗೆಯೇ ಧಾರ್ಮಿಕ ಮದುವೆಯಲ್ಲಿ ಜಾತಿ, ಉಪಜಾತಿ ನಮೂದಿಸುವುದು ಕಡ್ಡಾಯವಾಗಿತ್ತು. ಆದರೆ ಅಂಬೇಡ್ಕರರು ರೂಪಿಸಿದ ಮದುವೆಯ ನಿಯಮದಲ್ಲಿ ಜಾತಿ ಮತ್ತು ಉಪಜಾತಿ ಕಡ್ಡಾಯ ನಮೂದಿಸುವುದು ಕೈ ಬಿಟ್ಟರು. ಪ್ರಾಪ್ತ ವಯಸ್ಕರಾಗಿದ್ದರೂ ಸಾಕು ಅವರು ಯಾವುದೇ ಜಾತಿ ಉಪಜಾತಿಯರಲ್ಲಿ ಮದುವೆ ಸಿಂಧು ಎಂದು ನಿಯಮ ರೂಪಿಸಿದರು. ಅಂದ ಹಾಗೆ ಅದುವರೆಗೂ ಹೀಗಿದ್ದ ಧಾರ್ಮಿಕ ಮದುವೆ ಪದ್ಧತಿ ವಿಚ್ಛೇದನಕ್ಕೆ ಅವಕಾಶ ಇರಲಿಲ್ಲ ಆದರೆ ಅಂಬೇಡ್ಕರ್ ಅವರು ವಿಚ್ಛೇದನಕ್ಕೆ ಅವಕಾಶ ನೀಡಿದರು ಅದಕ್ಕೆ ಅವರು ಏನು ಕಾರಣಗಳನ್ನು ನೀಡಿದರು ಅವುಗಳೆಂದರೆ.
* ಪತ್ನಿಯನ್ನು ಪರಿತ್ಯಜಿಸಿ ದೂರ ಇರುವುದು.
* ಬೇರೆ ಧರ್ಮಕ್ಕೆ ಮತಾಂತರ ಹೊಂದುವುದು.
* ಬೇರೆಯವರನ್ನು ಇಟ್ಟುಕೊಂಡಿರುವುದು
ಮದುವೆಯನ್ನು ರದ್ದುಗೊಳ್ಳಿಸಿಕೊಳ್ಳುವ ನಿಯಮ ಕೂಡ ಅಂಬೇಡ್ಕರರು ಸೇರಿಸಿದರು. ಆ ಸಂದರ್ಭಗಳೆಂದರೆ,
* ನಪುಂಸಕತ್ವ
* ಸಂಪಿಡ
* ಮಾನಸಿಕ ಅಸ್ವಸ್ಥತೆ
* ಪೋಷಕರ ಬಲವಂತ
ಹಾಗೆ ಅದುವರೆಗೆ ಬಹುಪತ್ನಿತ್ವ ಜಾರಿಯಲ್ಲಿತ್ತು. ಆದರೆ ಅಂಬೇಡ್ಕರ್ ಅವರು ಏಕಪತ್ನಿತ್ವ ನಿಯಮವನ್ನು ವಿವಾಹ ಕಾನೂನಿಗೆ ಸೇರಿಸಿದರು.ಒಟ್ಟಾರೆ ಹೀಗೆ ಮಹಿಳೆಯರ ರಕ್ಷಣೆಯ ನಿಟ್ಟಿನಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ಒಳಗೊಂಡ ಮಸೂದೆಯನ್ನು ಅಂಬೇಡ್ಕರರು ರೂಪಿಸಿ ಸಂಸತ್ತಿನಲ್ಲಿ ಮಂಡಿಸಿದರು. ಪ್ರಶ್ನೆ ಏನೆಂದರೆ ಅದು ಅಂಗೀಕಾರಗೊಂಡಿದೆ? ಖಂಡಿತ ಆ ಕಥೆ ಹೇಳಿದರೆ ಅದೇ ಒಂದು ಮಹಾ ಕಾವ್ಯವಾಗುತ್ತದೆ. ಯಾಕೆಂದರೆ ಕರ್ಮಠ ಹಿಂದುಗಳು ಮಹಿಳೆಯರಿಗೆ ಹಕ್ಕುಗಳನ್ನು ಕೊಡುವ ದೆಸೆಯಲ್ಲಿ ತಮ್ಮ ಧರ್ಮಕ್ಕೆ ಆ ಪರಿಯ ತಿದ್ದುಪಡಿಯನ್ನು ತರುವುದನ್ನ ಅದರಲ್ಲಿ ಅಸ್ಪೃಶ್ಯನ ಒಬ್ಬ ತರುವುದನ್ನು ಸಹಿಸಿಕೊಳ್ಳುತ್ತಾರೆಯೆ? ಪ್ರಸ್ತುತ ಸಮಾಜದಲ್ಲಿ ಒಳ್ಳೆಯ ಕಾರ್ಯವನ್ನು ಮಾಡುವುದಕ್ಕೆ ಬಿಡದಂತಹ ಜನಗಳು ಒಂದು ನೀತಿ ಸಂಹಿತೆಯಲ್ಲಿ ಮಹಿಳೆಯರಿಗೆ ಒಂದು ಸ್ಥಾನವನ್ನು ನೀಡಿ ಎಂದು ಕೇಳುವುದಕ್ಕೆ ಮತ್ತು ಕಾನೂನಿನದಲ್ಲಿ ಅಳವಡಿಸುವುದಕ್ಕೆ ಬಿಡುತ್ತಾರೆ. ಯಾವುದಕ್ಕೂ ಅಂಜದಂತಹ ಅಂಬೇಡ್ಕರ್ ರವರು ಈ ಮಸೂದೆಗೆ ಎದುರಾಗಿ ಅವರು ಸ್ಮೃತಿ, ಶೃತಿ ಧರ್ಮಗಳ ಉಲ್ಲೇಖ ಮುಂದಿಡುತ್ತಾರೆ. ಒಂದು ವೇಳೆ ಮದುವೆಯೊಂದು ನಡೆಯಿತೆಂದರೆ ಅದು ಪವಿತ್ರ ಎಂದರ್ಥ. ಅದನ್ನು ರದ್ದುಗೊಳ್ಳಿಸಲು ಸಾಧ್ಯವೇ ಇಲ್ಲ. ಇನ್ನು ಸನಾತನ ವೈದಿಕ ಧರ್ಮದ ಪ್ರಕಾರ ವಿಚ್ಛೇದನವಂತೂ ಸಾಧ್ಯವೇ ಇಲ್ಲ.! ಇನ್ನು ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಹಕ್ಕು ನೀಡುವುದರ ಬಗ್ಗೆ ಶ್ರೀ ಎಂ ಎ ಅಯ್ಯಂಗಾರ್ ರವರು ಹೇಳುವುದು ಹಿಂದೂ ಬೆಳೆಸಿಕೊಳ್ಳುವುದು ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಪಾರು ನೀಡದಿರುವುದು ಇತ್ಯಾದಿ. ಪ್ರತಿಯೊಂದು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.
ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು ನೋಡಬೇಕೆಂದರೆ ಧುರೀಣರೇ ಅದನ್ನು ವಿರೋಧಿಸಿದರು. ನೆಹರು ಅದನ್ನು ಚರ್ಚೆಗಾದರೂ ಪರಿಗಣಿಸಬೇಕೆಂದು ಯತ್ನಿಸಿದರು. ಆದರೆ ಅದು ಸಾಧ್ಯವಾಗದೆ ಕೊನೆಗೆ ಮತಕ್ಕೆ ಹಾಕಿದಾಗ 28 / 23 ಮತಗಳ ಅಂತರದಲ್ಲಿ ತಿರಸ್ಕೃತವಾಯಿತು. ಇದರಿಂದ ಅತಿಯಾಗಿ ನೊಂದ ಅಂಬೇಡ್ಕರ್ ಅಳುವವರಿಲ್ಲದೆ ಶೋಕಿಸುವವರಿಲ್ಲದೆ ಹಿಂದೂ ಕೋಡ್ ಬಿಲ್ ಕೊಲೆಯಾಯಿತು ಎಂದೇ ಪ್ರತಿಕ್ರಿಯಿಸಿ ಕಾನೂನು ಮಂತ್ರಿ ಪದವಿಗೆ ರಾಜೀನಾಮೆ ನೀಡಿದರು.
ಮಹಿಳೆಯರಿಗಾಗಿ ದನಿಯೆತ್ತಿದಂತ ಮಹಾನ್ ವ್ಯಕ್ತಿ. ಅವರ ವ್ಯಕ್ತಿತ್ವದಿಂದ ನಾವು ಕೆಲಸ ಸಂಗತಿಗಳನ್ನು ಅವಶ್ಯಕತೆಯನ್ನು ಕಲಿಯಬೇಕಿದೆ.ಹೀಗೆ ಧರ್ಮರಾಜ ಕಾರಣ ಅನುಯ ಸಾಮಾಜಿಕ ಬದಲಾವಣೆಗಳು ಮಹಿಳೆಯರ ಮತ್ತು ಶೋಷಿತರ ಚಳುವಳಿ ಕಟ್ಟಲು ಇರುವ ದೊಡ್ಡ ತೊಡಕುಗಳಾಗಿವೆ. ಅಷ್ಟೇ ಅಲ್ಲ ಧರ್ಮ ಮತ್ತು ಮಾರುಕಟ್ಟೆಗಳು ರಾಜಕಾರಣದೊಂದಿಗೆ ಹಸ್ತಕ್ಷೇಪ ಮಾಡುತ್ತಿರುವುದರಿಂದ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಜನತಂತ್ರ ದುರ್ಬಲಗೊಳ್ಳುತ್ತ ಸಂಖ್ಯೆ ಹೋಗುತ್ತಿದೆ. ಹೀಗಿರುತ್ತ ಡೆಮಾಕ್ರಸಿ ಧರ್ಮ ರಾಷ್ಟ್ರೀಯತೆ ಮಾರುಕಟ್ಟೆ ಮತ್ತಿತರ ಒಪ್ಪಿತ ವ್ಯವಸ್ಥೆಗಳನ್ನು ಪ್ರಶ್ನಿಸುತ್ತಲೇ ಅದನ್ನು ಅರ್ಥಪೂರ್ಣಗೊಳಿಸುವ ಜವಾಬ್ದಾರಿ ಮಹಿಳೆಯರ ಮೇಲಿದೆ. ಜೊತೆಗೆ ಮದುವೆ ಮತ್ತು ಕುಟುಂಬ ಎಂಬ ಸಾಮಾಜಿಕ ರಚನೆಗಳನ್ನು ಹಾಗೂ ಧರ್ಮ ರಾಜಕಾರಣಗಳನ್ನು ಚಾಲನೆಗೊಳಿಸುವ ಜವಾಬ್ದಾರಿಯಾಗಿದ್ದು, ಭಾರತೀಯರ ಕೌಟುಂಬಿಕ ಹಾಗೂ ವೈಯಕ್ತಿಕ ಬದುಕಿನಲ್ಲಿ ಬದಲಾವಣೆಗಳಾಗಬೇಕು.
ಒಟ್ಟಾರೆ ಪ್ರಸ್ತುತದಲ್ಲಿ ಯಾರು ಹಿಂದು ಕಾನೂನುಗಳ ಕೆಲವು ವಿನಾಯಿತಿಗಳ ಅರ್ಹತೆ ಪಡೆದಿದ್ದರೂ ಮತ್ತು ಹಿಂದೂ ಎಂದು ಯಾರನ್ನು ಕರೆಯಬೇಕು ಎಂಬ ವಿವಾದವು ಹಿಂದೂ ಕೋಡ್ ಬಿಲ್ ಅರ್ಜಿಯಲ್ಲಿ ಕಂಡುಬರುತ್ತದೆ. ಈಗಲೂ ಹಲವು ಸಮುದಾಯಗಳಲ್ಲಿ ಮಹಿಳೆಯರನ್ನು ಒಳಗೊಂಡಂತೆ ರಾಷ್ಟ್ರೀಯವಾದಿ ಮತ್ತು ಧಾರ್ಮಿಕ ಸಂಘಗಳಲ್ಲಿ ವಿವಾದ ಕಂಡುಬರುತ್ತವೆ.
ಅಂಬೇಡ್ಕರ್ ರವರ ಭಾರತೀಯ ಮಹಿಳೆ ಮತ್ತು ಹಿಂದೂ ಕೊಡ್ ಬಿಲ್ ಬಗ್ಗೆ ಹೋರಾಟಗಳನ್ನು ನಡೆಯುತ್ತಾ ಹೋದರೆ ತಮ್ಮ ಅಧಿಕಾರಕ್ಕೂ ರಾಜೀನಾಮೆಯನ್ನು ನೀಡಿದ್ದನ್ನು ನೆನೆಸಿಕೊಂಡರೆ ಮೈ ಜುಮ್ ಎನ್ನುತ್ತದೆ. ಒಟ್ಟಾರೆ ಭಾರತೀಯ ಹಿಂದೂ ಕೋಡ್ ಬಿಲ್ ನಲ್ಲಿ ಮಹಿಳೆಯರ ಸ್ಥಾನಮಾನಕ್ಕಾಗಿ ಅಂಬೇಡ್ಕರ್ ಅವರ ಹೋರಾಟಕ್ಕೆ ನನ್ನ ನಮನಗಳು.
-ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್.
ಸಾಹಿತಿ. ಶಿಕ್ಷಕಿ. ಹಾಸನ.