ನೂತನ ಗೃಹರಕ್ಷಕರಿಗೆ ಪ್ರಥಮ ಚಿಕಿತ್ಸೆ ತರಬೇತಿ ಶಿಬಿರ

Upayuktha
0

ಮಂಗಳೂರು: ಶ್ರೀ ಭಾರತೀ ಕಾಲೇಜು, ನಂತೂರಿನಲ್ಲಿ ಹೊಸದಾಗಿ ನೋಂದಾಯಿತ ಗೃಹರಕ್ಷಕರಿಗೆ ಏ. 14 ರಂದು ಪೂರ್ವಾಹ್ನ 9.30 ರಿಂದ 12.30 ಗಂಟೆಯವರೆಗೆ ಪ್ರಥಮ ಚಿಕಿತ್ಸೆಯ ಬಗ್ಗೆ ಡಾ| ರಾಮಚಂದ್ರ ಭಟ್‍ ಅವರು ತರಬೇತಿಯನ್ನು ನೀಡಿದರು. ಗಾಯಗೊಂಡು ರಕ್ತ ಸ್ರಾವವಾದಾಗ ಯಾವ ರೀತಿ ರಕ್ತ ಸೋರಿ ಹೋಗುವುದನ್ನು ತಡೆಗಟ್ಟಬಹುದು ಮತ್ತು ಎಲುಬು ಮುರಿದಾಗ ಯಾವ ರೀತಿ ಪ್ರಥಮ ಚಿಕಿತ್ಸೆ ನೀಡಬಹುದು ಎಂಬುದರ ಬಗ್ಗೆ ತಿಳಿಸಿದರು. ಅದೇ ರೀತಿ ಹಾವು ಕಚ್ಚಿದಾಗ, ಅಪಸ್ಮಾರ ಉಂಟಾದಾಗ ರೋಗಿಗಳಿಗೆ ಯಾವ ರೀತಿ ಪ್ರಥಮ ಚಿಕಿತ್ಸೆ ನೀಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು. ಅಪಘಾತವಾದ ತಕ್ಷಣ ಜೀವ ಉಳಿಯಲು ಯಾವ ರೀತಿ ಪ್ರಥಮ ಚಿಕಿತ್ಸೆ ಕೊಡಬೇಕು ಮತ್ತು ಗಾಯಗೊಂಡ ರೋಗಿಯನ್ನು ಯಾವ ರೀತಿ ಆಸ್ಪತ್ರೆಗೆ ಸಾಗಿಸಬೇಕು  ಎಂಬುದರ ಬಗ್ಗೆ ಮಾಹಿತಿ ನೀಡಿದರು. 


ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು, ಉಪ ಸಮಾದೇಷ್ಟರಾದ ಶ್ರೀ ರಮೇಶ್, ಬೆಂಗಳೂರು ಅಕಾಡೆಮಿಯ ಬೋಧಕರಾದ ಶ್ರೀ ಚಂದನ್, ಮಂಗಳೂರು ಘಟಕದ ಸೀನಿಯರ್ ಪ್ಲಟೂನ್ ಕಮಾಂಡರ್ ಮಾರ್ಕ್ ಶೇರಾ, ಹಿರಿಯ ಗೃಹರಕ್ಷಕರಾದ ಸುನಿಲ್, ಸುನಿಲ್ ಪೂಜಾರಿ, ರೇವತಿ, ಕನಕಪ್ಪ, ದಿವಾಕರ್ ಹಾಗೂ 58 ಮಂದಿ ಗೃಹರಕ್ಷಕ, ಗೃಹರಕ್ಷಕಿಯರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter











Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top