ಮಂಗಳೂರು: ವಿಪ್ರ ವೇದಿಕೆ ರಿ ಕೋಡಿಕಲ್ ಸಂಘಟನೆಯ ಮಹಾಸಭೆಯು ಇತ್ತೀಚೆಗೆ ವೇದಮೂರ್ತಿ ವಿಶು ಕುಮಾರ್ ಜೋಯಿಸರ ಸಭಾಗೃಹದಲ್ಲಿ ಜರಗಿತು. ಅಧ್ಯಕ್ಷೆ ಬಿ. ವಿದ್ಯಾ ರಾವ್ ಕಳೆದ ಎರಡು ವರ್ಷದ ಚಟುವಟಿಕೆಗಳ ಅವಲೋಕನ ಮಾಡಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷ ಗುರು ರವಿ ಅಲೆವೂರಾಯ ಸಾರಥ್ಯದಲ್ಲಿ ಶ್ರೀ ಕೃಷ್ಣ ಪಾರಿಜಾತ ಯಕ್ಷಗಾನ ಬಯಲಾಟ ಜರಗಿತು. ಕೊನೆಯಲ್ಲಿ ಕಲಾವಿದರನ್ನು ಗೌರವಿಸಲಾಯಿತು.
ಗೌರವಾಧ್ಯಕ್ಷ ಜಯರಾಮ್ ಪದಕಣ್ಣಾಯ ಕಾರ್ಯದರ್ಶಿ ದುರ್ಗಾದಾಸ್ ಕಟೀಲು ಕೋಶಾಧಿಕಾರಿ ಕಿಶೋರ್ ಕೃಷ್ಣ ಹಾಗೂ ಟ್ರಸ್ಟಿಗಳಾದ ಗಿರೀಶ್ ರಾವ್ ವಿಶುಕುಮಾರ್ ಜೋಯಿಸ್ ಉಪಸ್ಥಿತರಿದ್ದರು. ಟ್ರಸ್ಟಿ ಶ್ರೀಧರ ಹೊಳ್ಳ ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ