ಹೆಸರಾಂತ ಅಂಕಣಕಾರ ಶ್ರೀವತ್ಸ ಜೋಶಿ ಅವರು ಬರೆದಿರುವ 'ಸ್ವಚ್ಛ ಭಾಷೆ ಅಭಿಯಾನ: ಕಸವಿಲ್ಲದ ಕನ್ನಡಕ್ಕೊಂದು ಕೈಪಿಡಿ' ಪುಸ್ತಕಕ್ಕೆ ಎಲ್ಲೆಡೆ ಸ್ವಚ್ಛ ಭಾಷಾ ಪ್ರೇಮಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಂತಹದೊಂದು ಮೆಚ್ಚುಗೆ ನುಡಿಯನ್ನು ಉಪಯುಕ್ತ ನ್ಯೂಸ್ ಓದುಗರ ಜತೆಗೆ ಖುಷಿಯಿಂದ ಹಂಚಿಕೊಂಡಿದ್ದಾರೆ ಶ್ರೀವತ್ಸ ಜೋಶಿ ಅವರು. ಅವರಿಗೆ ಓದುಗರೊಬ್ಬರು ಕಳುಹಿಸಿದ ಸಂದೇಶದ ಯಥಾರೂಪ ಮುಂದಕ್ಕೆ ಓದಿ.
******
“ರೈಲ್ವೇಗೆ ಬಂದಿರುವ ಸ್ವಚ್ಛತೆ ಪ್ರಜ್ಞೆ ಭಾಷೆ ಬಳಕೆಗೂ ಬಂದಿದ್ದರೆ..."
... ಎಂದುಕೊಳ್ಳುತ್ತಿದ್ದಾರೆ ರೈಲಿನ side upper berth ನಲ್ಲಿ ಕುಳಿತು "ಸ್ವಚ್ಛ ಭಾಷೆ ಅಭಿಯಾನ: ಕಸವಿಲ್ಲದ ಕನ್ನಡಕ್ಕೊಂದು ಕೈಪಿಡಿ" ಪುಸ್ತಕವನ್ನು ಓದುತ್ತಿರುವ ಸುಧಾಕರ ಜೈನ್. ಇವರು ವೃತ್ತಿಯಲ್ಲಿ ಪತ್ರಕರ್ತರು, ‘The Hindu’ ಪತ್ರಿಕೆಯ ಸ್ಟಾಫ್ ಫೋಟೊಗ್ರಾಫರ್. ಮೂಲತಃ ಮೂಡಬಿದರೆಯವರು.
“ಈ ಪುಸ್ತಕ ನಾನು ಇಲ್ಲಿಯವರೆಗೆ ಓದಿದ ಎಲ್ಲಾ ತರಗತಿಯ ಕನ್ನಡ ಪಠ್ಯಪುಸ್ತಕಗಳಿಗಿಂತ ಎತ್ತರದಲ್ಲಿದೆ. ನನ್ನ ಸಾವಿರ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿರುವ ಪುಸ್ತಕ ಇದು." ಎಂದು ಪುಸ್ತಕದ ಬಗ್ಗೆ ಸುಧಾಕರ್ ಅವರ ಅಭಿಪ್ರಾಯ. ಅದನ್ನೇ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ಹಾಗೆಯೇ ನನಗೆ ಕಳುಹಿಸಿದ ವಾಯ್ಸ್ ಮೆಸೇಜಿನಲ್ಲಿ ಅವರು “ಪುಸ್ತಕವನ್ನು ಪೂರ್ತಿ ಓದಿದ ಮೇಲೆ ಮಾತಾಡ್ತೇನೆ ಮತ್ತೆ. ನನಗೆ ಈನಡುವೆ ರಣಜಿ ಕ್ರಿಕೆಟ್ ಪಂದ್ಯಾವಳಿಯ ಎಸೈನ್ಮೆಂಟ್ ಇದ್ದುದರಿಂದ ಇದನ್ನಿನ್ನೂ ಓದಲಿಕ್ಕೆ ಬಿಡುವಾಗಿರಲಿಲ್ಲ. ತಗೊಂಡು ಬಂದಿಟ್ಟಿದ್ದೆ. ಈಗ ಊರಿಗೆ ಪ್ರಯಾಣ ಮಾಡ್ತಾ ಇದ್ದೇನೆ (“ಊರುಗ್ ಪೋವೋಂದುಲ್ಲೆ"). ಹಾಗೆ ಟ್ರೈನ್ನಲ್ಲಿ ಕೂತ್ಕೊಂಡು ಓದ್ತಾ ಇದ್ದೇನೆ. ಅದ್ಭುತ ಮಾರಾಯ್ರೇ! ಸೋತು ಸೋತು ಶರಣಾಗಿ ಗೋವಿಂದಾ! ಬಹಳ ಇಷ್ಟ ಆಗಿದೆ. ಇದರ ಬಗ್ಗೆ ಚಿಕ್ಕಚಿಕ್ಕ ವಿಡಿಯೊಗಳನ್ನು ಮಾಡಿ ರೀಲ್ನಲ್ಲಿ ಬಿಡಬೇಕು. ಒಂದಷ್ಟು ಜನರಿಗೆ ತಿಳಿಬೇಕು ಮಾರಾಯ್ರೇ ಈ ಥರದ್ದು ಒಂದು ಪುಸ್ತಕ ಇದೆಯಂತ. ತಿಳಿಲಿಕ್ಕೆ ಕೊರತೆ ಆಗಿದೆ ಅಂತಲ್ಲ ನಾನು ಹೇಳ್ತಿರೋದು. ನನಗೇ ಗೊತ್ತಿರ್ಲಿಲ್ಲ ಅಲ್ಲ? ನನ್ನಂಥ ಎಷ್ಟು ಜನರಿದ್ದಾರೇನೋ!" ಎಂದಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ