ಮಂಗಳೂರು: ಕೆಆರ್ ಎಂಎಸ್ಎಸ್ ವಿಶ್ವವಿದ್ಯಾನಿಲಯ ವಿಭಾಗದ ಅಭಿನಂದನಾ ಸಮಾರಂಭ ನಾಳೆ

Upayuktha
1 minute read
0

 


ಮಂಗಳೂರು: ಕರ್ನಾಟಕ ರಾಜ್ಯ ಮಹಾವಿದ್ಯಾನಿಲಯ ಶಿಕ್ಷಕ ಸಂಘ (KRMSS) ದ ಮಂಗಳೂರು ವಿಶ್ವವಿದ್ಯಾನಿಲಯ ವಿಭಾಗದ ವತಿಯಿಂದ ಕರ್ತವ್ಯ ಬೋಧ ದಿವಸ್‌ ಮತ್ತು ಸಿಂಡಿಕೇಟ್‌ ಅಭಿನಂದನಾ ಸಮಾರಂಭ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ಫೆಬ್ರವರಿ 22 ರಂದು (ಬುಧವಾರ) ಸಂಜೆ 3.30 ಕ್ಕೆ ನಡೆಯಲಿದೆ. 


ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ಮಹಾವಿದ್ಯಾನಿಲಯ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷ ಡಾ. ರಘು ಅಕ್ಮಂಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ವಿವಿಯ ಕುಲಸಚಿವ ಡಾ. ಕಿಶೋರ್‌ ಕುಮಾರ್‌ ಸಿಕೆ, ನಿಕಟಪೂರ್ವ ಕುಲಸಚಿವ (ಪರೀಕ್ಷಾಂಗ) ಪ್ರೊ. ಪಿ ಎಲ್‌ ಧರ್ಮ, ಹಣಕಾಸು ಅಧಿಕಾರಿ ಡಾ. ಸಂಗಪ್ಪ ವೈ, ಪೂರ್ವತನ ಹಣಕಾಸು ಅಧಿಕಾರಿ ಡಾ. ಕೆ ಎಸ್‌ ಜಯಪ್ಪ ಅವರ ಗೌರವ ಉಪಸ್ಥಿತಿ ಇರಲಿದೆ. ವಕೀಲ ರವಿಚಂದ್ರ ಪಿ ಎಂ, ಪ್ರೊ. ಕರುಣಾಕರ ಕೋಟೇಗಾರ್‌, ರಮೇಶ್‌ ಕೆ, ಡಾ. ಪಾರ್ವತಿ ಅಪ್ಪಯ್ಯ, ವಿವೇಕಾನಂದ ಪಣಿಯಾಲ, ಡಾ. ಎಂ ಎಸ್‌ ತಳವಾರ, ಮೋಹನ ಪಡಿವಾಳ, ರವೀಂದ್ರನಾಥ ರೈ ಸೇರಿದಂತೆ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಕ್ತ ಮತ್ತು ನಿಕಟಪೂರ್ವ ಸಿಂಡಿಕೇಟ್‌ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 


ಅತಿಥಿ ಉಪನ್ಯಾಸಕರ ವೇತನವನ್ನು ಏರಿಸಿದ್ದು, ಮಹಿಳಾ ಅತಿಥಿ ಉಪನ್ಯಾಸಕಿಯರಿಗೆ ಸಂಬಳ ಸಹಿತ ಮಾತೃತ್ವ ರಜೆ, ಕಾಲೇಜು ಉಪನ್ಯಾಸಕರಿಗೆ ಮೊದಲ ಬಾರಿಗೆ ಪ್ರಾಧ್ಯಾಪಕ ಹುದ್ದೆ, ಕೊರೋನಾ ಅವಧಿಯಲ್ಲಿ ಅತಿಥಿ ಉಪನ್ಯಾಸಕರಿಗೆ ವೇತನ ನೀಡಿದ್ದು, ಅತಿಥಿ ಉಪನ್ಯಾಸಕರಿಗೆ ಎಂಟು ತಿಂಗಳು ನೀಡುತ್ತಿದ್ದ ವೇತನವನ್ನು ಹನ್ನೊಂದು ತಿಂಗಳುಗಳ ಕಾಲ ಸಿಗುವಂತೆ ಮಾಡಿದ್ದು ಸೇರಿದಂತೆ ಅನೇಕ ಪ್ರಮುಖ ನಿರ್ಣಯಗಳನ್ನು ಪ್ರಸಕ್ತ ಸಿಂಡಿಕೇಟ್‌ ಅವಧಿಯಲ್ಲಿ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಈ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ, ಎಂದು ಕರ್ನಾಟಕ ರಾಜ್ಯ ಮಹಾವಿದ್ಯಾನಿಲಯ ಶಿಕ್ಷಕ ಸಂಘ ಮಂಗಳೂರು ವಿಶ್ವವಿದ್ಯಾನಿಲಯ ವಿಭಾಗದ ಅಧ್ಯಕ್ಷ ರವಿಶಂಕರ್‌ ಎಂ ಎನ್‌ ಹಾಗೂ ಕಾರ್ಯದರ್ಶಿ ವೆಂಕಟೇಶ್‌ ನಾಯಕ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ವೆಂಕಟೇಶ್ ನಾಯಕ್: 97382 78067 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
To Top