ಬೆಂಗಳೂರು: ಜಯನಗರ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ 'ಕಲಿಯುಗ ಕಾಮಧೇನು' ಶ್ರೀ ರಾಘವೇಂದ್ರ ಗುರುಸಾರ್ವಭೌಮರ 402ನೇ 'ಪಟ್ಟಾಭಿಷೇಕ ಮಹೋತ್ಸವ'ದ ಪ್ರಯುಕ್ತ ಫೆಬ್ರವರಿ 22 ರ ಬುಧವಾರ ಸಂಜೆ 7-30ಕ್ಕೆ ಖ್ಯಾತ ಗಾಯಕರಾದ ವಿ|| ಹರಿಹರನ್ ಎಂ.ಬಿ. ಮತ್ತು ವಿ|| ಅಶೋಕ್ ಎಸ್. (ಬೆಂಗಳೂರು ಸಹೋದರರು) ಇವರಿಂದ "ಹರಿದಾಸ ನಮನ" ವಿಶೇಷ ದ್ವಂದ್ವ ಗಾಯನ ಕಾರ್ಯಕ್ರಮವನ್ನು ಏರ್ಪಡಿಸಿದೆ.
ವಿ|| ದೀಪಕ್ ಮೂರ್ತಿ (ಪಿಟೀಲು), ವಿ|| ಜಿ.ಎಸ್. ನಾಗರಾಜ್ (ಮೃದಂಗ), ವಿ|| ಬಿ.ಎಸ್. ರಘುನಂದನ್ (ಘಟ)
ಸ್ಥಳ: ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ, 45ನೇ ಅಡ್ಡರಸ್ತೆ, ಜಯನಗರ 5ನೇ ಬಡಾವಣೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ


