ನವೋದ್ಯಮಿಗಳಿಗೆ 'ಕಾವು' ನೀಡಿ ಬೆಳೆಸುವ ಎಐಸಿ ನಿಟ್ಟೆ: ಕಾರ್ಯಚಟುವಟಿಕೆಗಳು, ಸಾಧನೆಗಳು

Upayuktha
0

ನಿಟ್ಟೆ: ಅಟಲ್ ಇನ್‌ಕ್ಯುಬೇಶನ್ ಸೆಂಟರ್ ನಿಟ್ಟೆ (ಎಐಸಿ, ನಿಟ್ಟೆ) ಭಾರತ ಸರಕಾರದ ವಿತ್ತೀಯ ಸಚಿವಾಲಯ ಮತ್ತು ನೀತಿ ಆಯೋಗದ ಸಹಯೋಗದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು, ನಿಟ್ಟೆ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಎನ್. ವಿನಯ ಹೆಗ್ಡೆ ಅವರ ಮಾರ್ಗದರ್ಶನ ಈ ಕೇಂದ್ರಕ್ಕೆ ಶ್ರೀರಕ್ಷೆ. ಈ ಕೇಂದ್ರದ ಮುಖ್ಯ ಕಾರ್ಯನಿರ್ವಹಾಣಾಧಿಕಾರಿ ಯಾಗಿ (ಸಿಇಒ) ಡಾ. ಎ.ಪಿ ಆಚಾರ್ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಈ ಕೇಂದ್ರವು ದೇಶದ ಅತ್ಯುನ್ನತ ಪರಿಣಾಮಕಾರಿ ಬಿಸಿನೆಸ್ ಇನ್‌ಕ್ಯುಬೇಶನ್ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ 72 ಸ್ಟಾರ್ಟ್‌ ಅಪ್‍ಗಳು ಈ ಕೇಂದ್ರದಿಂದ ಮಾರ್ಗದರ್ಶನ ಹೊಂದಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಇಲ್ಲಿ ಉಲ್ಲೇಖಾರ್ಹ.


ಎಐಸಿ ನಿಟ್ಟೆಯು ದೇಶದ ಉದ್ದಿಮೆಶೀಲತೆ ವ್ಯವಸ್ಥೆಯನ್ನು ನಿಟ್ಟೆಯಲ್ಲಿ ಕಲ್ಪಿಸಿ ಸಾಕಾರ ಗೊಳಿಸಿರುವುದು ನಿಜಕ್ಕೂ ಹರ್ಷದಾಯಕ ವಿಚಾರ. ಎಐಸಿ ನಿಟ್ಟೆಯು ತನ್ನ ಪ್ರಮುಖ ಚಟುವಟಿಕೆಗಳನ್ನು 4 ಪ್ರಧಾನ ವಲಯಗಳಾದ ಕೃಷಿ, ಆರೋಗ್ಯ, ಜೈವಿಕ ತಂತ್ರಜ್ಞಾನ ಹಾಗೂ ಮಾಹಿತಿ ತಂತ್ರಜ್ಞಾನಗಳಿಗೆ ಮೀಸಲಿಟ್ಟಿದೆ. ಈ ಪ್ರಧಾನ ವಲಯಗಳನ್ನು ಅನುಸರಿಸಿ ಸ್ಟಾರ್ಟ್‌ ಅಪ್ ಮೆಂಟರಿಂಗ್ ಮತ್ತು ಇನ್‌ಕ್ಯುಬೇಶನ್‍ ನಡೆಯುತ್ತಿವೆ.


ಎಐಸಿ ನಿಟ್ಟೆಯಲ್ಲಿ ಉತ್ಪನ್ನ ಅಭಿವøದ್ಧಿಗೆ ಸಂಬಂಧಿಸಿದ ಹಲವಾರು ಲ್ಯಾಬ್‍ಗಳನ್ನು ಸ್ಥಾಪಿಸಲಾಗಿದೆ. ಬ್ಲೂಮ್‍ಬರ್ಗ್‍ನ ನೆರವು, ಮಣ್ಣು ಪರೀಕ್ಷಾ ಕೇಂದ್ರವೂ ಇಲ್ಲಿ ಲಭ್ಯವಿದೆ. ಅದರ ಜೊತೆ ಕಚೇರಿ ಸೌಲಭ್ಯ, ವಿವಿಧ ತಂತ್ರಜ್ಞಾನಗಳ ನೆರವು, ಹೈಸ್ಪೀಡ್ ಅಂತರ್ಜಾಲ, ದಿನದ 24 ಗಂಟೆ ಭದ್ರತೆ, ಆರೋಗ್ಯ ಮತ್ತು ಇನ್ನಿತರ ಸೌಲಭ್ಯಗಳನ್ನು ಈ ಸಂಸ್ಥೆಯು ಒದಗಿಸಿ ತನ್ನ ಒಟ್ಟಾರೆ ಕಾರ್ಯವೈಖರಿಯನ್ನು ಜನಸಾಮಾನ್ಯರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದೆ. ವಿವಿಧ ಕ್ಷೇತ್ರದಲ್ಲಿ ಪರಿಣತಿಯನ್ನು ಹೊಂದಿರುವ 30 ಮಾರ್ಗದರ್ಶಕರು ಹೊಸದಾಗಿ ಉದ್ಯಮ ಪ್ರಾರಂಭಿಸುವವರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.


ಎಐಸಿ ನಿಟ್ಟೆಯು 2021ರ “ಬೆಸ್ಟ್ ಕ್ಯು.ಎ ಇನ್‌ಕ್ಯುಬೇಶನ್” ಪ್ರಶಸ್ತಿಗೆ ಭಾಜನವಾಗಿದೆ.  ಈ ಪ್ರಶಸ್ತಿಯನ್ನು World Quality Summit 2021 Asia Inc.500 World Quality Summit ನಲ್ಲಿ ಪ್ರದಾನ ಮಾಡಲಾಯಿತು. ಇದಕ್ಕೆ ಸಂಬಂಧಿಸಿದ ವೇದಿಕೆ ಕ್ರೀಯಾಶೀಲವಾಗಿದ್ದು ಆವಿಷ್ಕಾರ ಮತ್ತು ಸ್ಟಾರ್ಟ್‌ ಅಪ್‍ಗೆ ಸಂಬಂಧಿಸಿ ಸಾಕಷ್ಟು ಚಟುವಟಿಕೆಗಳನ್ನು ಹಮ್ಮಿ ಕೊಂಡಿದೆ. ಎಐಸಿ ನಿಟ್ಟೆಯ ಇನ್ನೊಂದು ಪ್ರಮುಖ ಕೊಡುಗೆ- “ನಿಟ್ಟೆಪುಡ್ ಪ್ರೊಸೆಸಿಂಗ್ ಕ್ಲಸ್ಟರ್. ಎಐಸಿ ನಿಟ್ಟೆಯನ್ನು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆ ಎಂಬುದಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಸಚಿವಾಲಯವು ಅನುಮೋದಿಸಿ ಸಾಕಷ್ಟು ಆವಿಷ್ಕಾರ, ಸಮಾಜ ಉಪಯೋಗಿ ಚಟುವಟಿಕೆಗಳನ್ನು ಮಾಡಲು ಹುರಿದುಂಬಿಸುತ್ತದೆ. ಎಐಸಿ ನಿಟ್ಟೆಯು ನಿಟ್ಟೆ ಸ್ಮಾರ್ಟ್ ಗ್ರಾಮ ಅಭಿವೃದ್ಧಿ ಯೋಜನೆಯನ್ನು ಹಮ್ಮಿಕೊಂಡು ಪ್ರಮುಖವಾಗಿ, ಸ್ಮಾರ್ಟ್ ಕೃಷಿ, ಸ್ಮಾರ್ಟ್ ಆರೋಗ್ಯ, ಸ್ಮಾರ್ಟ್ ಆಡಳಿತ, ಸ್ಮಾರ್ಟ್ ಇಂಧನ, ಸ್ಮಾರ್ಟ್ ಸಾರಿಗೆ ಸಂಪರ್ಕ, ಸ್ಮಾರ್ಟ್ ಪರಿಸರ, ಇವೇ ಮೊದಲಾದ ಕ್ಷೇತ್ರಗಳಲ್ಲಿ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದೆ. ಎಐಸಿ ನಿಟ್ಟೆಯು 10 ರೈತ ಉತ್ಪಾದಕ ಸಂಸ್ಥೆಯನ್ನು ಪ್ರಾರಂಭಿಸಿ ಈ ಸಂಸ್ಥೆಯ ಸವಾರ್ಂಗೀಣ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ.


ಒಟ್ಟು 72 ಸ್ಟಾರ್ಟ್ ಅಪ್‍ಗಳು ಯಶಸ್ವಿಯಾಗಿ ಈ ಕೇಂದ್ರದ ವತಿಯಿಂದ ಸಂಚಾಲಿತ ವಾಗಿದ್ದು “ಸೀಡ್ ಫಂಡ್ ಸ್ಟಾರ್ಟ್‌ ಅಪ್ ಇಂಡಿಯಾ” 200 ಲಕ್ಷ ಧನ ಸಹಾಯ ನೀಡಿದೆ.


ಎಐಸಿ ನಿಟ್ಟೆ ಕೇಂದ್ರವು ಕ್ರಿಯಾಶೀಲವಾಗಿದ್ದು ಭಾರತ ಸರಕಾರ ಮತ್ತು ಪ್ರಸಿದ್ಧ ನಿಟ್ಟೆ ವಿದ್ಯಾ ಸಂಸ್ಥೆಗಳ ಆಶಯದ ಮೂಲಕ ಸಮೃದ್ಧ, ಬಲಿಷ್ಠ ಆತ್ಮನಿರ್ಭರ ಭಾರತ ನಿರ್ಮಾಣದಲ್ಲಿ ತೊಡಗಿಕೊಂಡಿದ್ದು ಯುವಜನತೆ, ಸಂಶೋಧಕರು, ಉದ್ಯಮಶೀಲರು ಈ ಕೇಂದ್ರದ ಸಹಭಾಗಿತ್ವದಲ್ಲಿ ತಮ್ಮ ಉದ್ದಿಮೆಶೀಲತ್ವ ಕೌಶಲವನ್ನು ಅಭಿವೃದ್ಧಿಪಡಿಸಿ ತಮ್ಮ ಆರ್ಥಿಕ ಸ್ವಾವಲಂಬನೆಯ ಜೊತೆಗೆ ದೇಶದ ಸಧೃಡ ಅಭಿವೃದ್ಧಿಗೆ ನೆರವಾಗಿದ್ದಾರೆ.


ಎಐಸಿ ನಿಟ್ಟೆ ಕೇಂದ್ರದ ಸಿ.ಇ.ಒ ಆಗಿ ಡಾ.ಎ.ಪಿ. ಆಚಾರ್ ಸೇವೆಗೈಯುತ್ತಿದ್ದು, ಪುನೀತ್ ರೈ ಅವರು ಇನ್ಕ್ಯುಬೇಶನ್ ಮ್ಯಾನೇಜರ್ ಆಗಿದ್ದು, ಮನೋಹರ ರೆಡ್ಡಿ ಅವರು ಎಕ್ಸಿಕ್ಯೂಟಿವ್ ಬಿಸಿನೆಸ್ ಡೆವಲಪ್‌ಮೆಂಟ್‍ ಹುದ್ದೆಯನ್ನು ನಿಭಾಯಿಸುತ್ತಿದ್ದು ಕು. ದೀಕ್ಷಾ ರೈ ಎಕ್ಸಿಕ್ಯೂಟಿವ್-ಹಣಕಾಸು, ಕು. ದೀಕ್ಷಾ ಶೆಟ್ಟಿ ಎಕ್ಸಿಕ್ಯೂಟಿವ್ ಮ್ಯಾನೇಜ್‍ಮೆಂಟ್ ಹಾಗೆಯೇ ಹರೀಶ್ ಕಾಮತ್ ಎಕ್ಸಿಕ್ಯೂಟಿವ್ ಕಚೇರಿ ಎಡ್ಮಿನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top