ಉಡುಪಿ: ನಮ್ಮ ಪಠ್ಯಗಳನ್ನು ನಮ್ಮದೇ ಕಣ್ಣುಗಳ ಮೂಲಕ ನೋಡುವ ಅಗತ್ಯವಿದೆ. ಯಾವ ಮತ್ತು ಯಾರ ಪಠ್ಯಗಳು ನಮ್ಮೆದುರಿಗಿವೆ ಮತ್ತು ಯಾವುವನ್ನು ಹೊರಗೇ ಇಟ್ಟು ನಿರ್ವಹಿಸಿಕೊಂಡು ಬರಲಾಗುತ್ತಿದೆ ಎಂಬ ಓದಿನ ರಾಜಕಾರಣದ ಅರಿವಿಲ್ಲವಾದರೆ ನಾಪತ್ತೆಗೊಳಿಸಲಾದ ನಮ್ಮ ಬದುಕುಗಳು ದಕ್ಕಲಾರವು. ಹಾಗಾಗಿ ಪಠ್ಯಗಳನ್ನು ನಮ್ಮದೇ ಕಣ್ಣುಗಳ ಮೂಲಕ ಓದಬೇಕಾದ ತುರ್ತು ನಮಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡ. ನಟರಾಜ.ಎಸ್. ಬೂದಾಳು ಹೇಳಿದರು.
ತೆಂಕನಿಡಿಯೂರು ಸ.ಪ್ರ.ದ. ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗ ಹಾಗೂ ಐಕ್ಯೂಎಸಿ ಅಡಿಯಲ್ಲಿ ನಡೆದ ಕನ್ನಡ ವಿಭಾಗ ಮುಖ್ಯಸ್ಥ ಪ್ರೊ. ಜಯಪ್ರಕಾಶ್ ಶೆಟ್ಟಿಯವರ 'ನುಡಿಯಾಟದ ನಡೆ, ಬಯಲ ಬೆರಗು, ತಣ್ಣನೆಯ ದೀಪಗಳು' ಎಂಬ ಕೃತಿಗಳ ಬಿಡುಗಡೆ ಹಾಗೂ ಈವರೆಗಿನ ಕೃತಿಗಳ ಅವಲೋಕನ ಕಾರ್ಯಕ್ರಮದಲ್ಲಿ ಪುಸ್ತಕಗಳನ್ನು ಬಿಡುಗಡೆಗೊಳಿಸಿದ ಅವರು, ‘ಜೆ.ಪಿ ಕೃತಿಗಳ ಮೀಮಾಂಸಾ ನೆಲೆಗಳು’ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ತುಮಕೂರಿನ ಡಾ. ಜಿ.ವಿ ಆನಂದಮೂರ್ತಿಯವರು 'ಜೆಪಿ ಕೃತಿಗಳ ಸಂಸ್ಕೃತಿ ಚಿಂತನೆಯ ನೆಲೆಗಳು' ಕುರಿತು ಹಾಗೂ ಕನಕಪುರದ ಹಾರೋಹಳ್ಳಿ ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಪ್ರೊ. ರಾಮಲಿಂಗಪ್ಪ ಟಿ. ಬೇಗೂರು ಅವರು 'ಜೆಪಿ ಕೃತಿಗಳ ಸಾಹಿತ್ಯ ಚರಿತ್ರೆಯ ರಚನೆಯ ನೆಲೆಗಟ್ಟು' ಎಂಬ ವಿಷಯಗಳ ಕುರಿತು ಉಪನ್ಯಾಸ ನೀಡಿದರು.
ಕೆ. ಆರ್ ನಗರ ಸರ್ಕಾರಿ ಕಾಲೇಜಿನ ಡಾ. ಚಿಕ್ಕಮಗಳೂರು ಗಣೇಶ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಾಂಶುಪಾಲ ಪ್ರೊ. ಸುರೇಶ್ ರೈ ಕೆ. ಯವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕನ್ನಡ ವಿಭಾಗ ಮುಖ್ಯಸ್ಥ ಜಯಪ್ರಕಾಶ್ ಶೆಟ್ಟಿ ಸ್ವಾಗತಿಸಿದರು. ಸಹ ಪ್ರಾಧ್ಯಾಪಕ ಡಾ. ಹೆಚ್.ಕೆ. ವೆಂಕಟೇಶ್ ವಂದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ