ವಿದ್ಯಾರ್ಥಿಗಳು ತಮ್ಮನ್ನು ಹೊಸ ಮನ್ವಂತರದ ಅಗತ್ಯತೆಗಳಿಗೆ ಮಾರ್ಪಾಡು ಮಾಡಿಕೊಳ್ಳಬೇಕು: ಡಾ ಅಮಿತಾ ಪಿ ಮಾರ್ಲ

Upayuktha
0

ಮೂಡುಬಿದಿರೆ: ಆರೋಗ್ಯ ಕ್ಷೇತ್ರವು ಮುಂದಿನ ಏಳರಿಂದ ಹತ್ತು ವರ್ಷಗಳಲ್ಲಿ ಶೇಕಡಾ 300 ರಷ್ಟು ಬೆಳೆಯಲಿದ್ದು, 4.7 ಮಿಲಿಯನ್‌ನಿಂದ 5 ಮಿಲಿಯನ್ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಎ.ಜೆ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ವೈದ್ಯಕೀಯ ಆಡಳಿತದ ನಿರ್ದೇಶಕಿ ಡಾ ಅಮಿತಾ ಪಿ ಮಾರ್ಲ ತಿಳಿಸಿದರು.


ಅವರು ಆಳ್ವಾಸ್ ಕಾಲೇಜ್ ಆಫ್ ಆಲೈಡ್ ಹೆಲ್ತ್ ಸೈನ್ಸಸ್ ಕಾಲೇಜಿನ ಹಾಸ್ಪಿಟಲ್ ಆಡ್ಮಿನ್‌ಸ್ಟ್ರೇಶನ್ ವಿಭಾಗದ ಆಯೋಜಿಸಿದ್ದ ಒಂದು ದಿನದ ರಾಷ್ಟ್ರೀಯ ಸಮ್ಮೇಳನ ಹಾಗೂ ಕಾರ‍್ಯಾಗಾರ 'ಇನ್ಸ್ಪಿರಿಯಾ - 2022' ರಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.


ಹಾಸ್ಪಿಟಲ್ ಆಡ್ಮಿನ್‌ಸ್ಟ್ರೇಶನ್ ಕ್ಷೇತ್ರವು ಮುಂದಿನ ದಿನಗಳಲ್ಲಿ ಹೆಚ್ಚು ಬೇಡಿಕೆಯ ಕ್ಷೇತ್ರವಾಗಿ ಮೂಡಿ ಬರಲಿದ್ದು, ಈ ಕಾಲಕ್ಕಾನುಗುಣವಾದ ಸೃಜನಾಶೀಲತೆ ಹಾಗೂ ಜ್ಞಾನವನ್ನು ವಿದ್ಯಾರ್ಥಿಗಳು ಹೊಂದುವುದು ಮುಖ್ಯ. ಅಲ್ಲದೆ ಈ ಕ್ಷೇತ್ರದ ಭವಿಷ್ಯದ ಸವಾಲುಗಳು ಹಾಗೂ ಅನಿಶ್ಚಿತತೆಗಳನ್ನು ಅರಿಯುವುದು ಸಹ ಅಷ್ಟೇ ಅಗತ್ಯ ಎಂದರು. ಜಾಗತೀಕರಣ, ರೋಗಿಗಳ ಸುರಕ್ಷತೆ, ಹೊಸ ಶಿಕ್ಷಣ ನೀತಿ, ಹಾಗೂ ಡಿಜಿಟಲ್ ರೂಪಾಂತರದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ತಮ್ಮನ್ನು ಹೊಸ ಮನ್ವಂತರದ ಅಗತ್ಯತೆಗಳಿಗೆ ಮಾರ್ಪಾಡು ಮಾಡಿ ಕೊಂಡರೆ ಉಜ್ವಲ ಭವಿಷ್ಯವಿದೆ ಎಂದರು.


ಕಾರ‍್ಯಕ್ರಮದಲ್ಲಿ ಉಪಸ್ಥಿತರಿದ್ದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಡಾ ವಿನಯ್ ಆಳ್ವ ಮಾತನಾಡಿ, ಈ ಭೂಮಿಯ ಮೇಲೆ ಎಲ್ಲಿಯವರೆಗೆ ಮನುಕುಲದ ಅಸ್ವಿತ್ವವಿರುತ್ತದೋ ಅಲ್ಲಿಯವರೆಗೂ ಆರೋಗ್ಯ ಕ್ಷೇತ್ರಕ್ಕೆ ಬೇಡಿಕೆ ಇರುತ್ತದೆ. ಬೇರೆ ಯಾವ ಕ್ಷೇತ್ರವಾದರೂ ಹಿನ್ನಡೆ ಸಾಧಿಸಬಹುದು ಆದರೆ ಆರೋಗ್ಯ ಕ್ಷೇತ್ರ ಕುಸಿತ ಕಾಣಲು ಸಾಧ್ಯವಿಲ್ಲ ಎಂದರು.


ತಾಂತ್ರಿಕ ಅವಧಿಯಲ್ಲಿ ಮಣಿಪಾಲ ಗ್ರೂಪ್ಸ್ನ ಸ್ಟೆಂಪ್ಯುಟಿಕ್ಸ್ ಇನೋವೇಶನ್ ಮತ್ತು ಬ್ಯುಸಿನೆಸ್ ಡೆವಲಪ್ಮೆಂಟ್‌ನ ನಿರ್ದೇಶಕ ಡಾ.ಕುನಲ್, ಆರೋಗ್ಯ ಉದ್ಯಮಗಳ ಕ್ಷೇತ್ರದಲ್ಲಿ ಡಿಜಿಟಲ್ ಮಾರ್ಕೆಟಿಂಗ್‌ನ ಭವಿಷ್ಯದ ಪ್ರವೃತ್ತಿ ಮತ್ತು ವ್ಯಾಪ್ತಿ, ಮಂಗಳೂರಿನ ಯನಪೋಯ ವಿವಿಯ ಡೀನ್ ಡಾ.ಸುನೀತಾ ಸಲ್ಡಾನ್ಹಾರವರು ಆರೋಗ್ಯ ಕ್ಷೇತ್ರದಲ್ಲಿ ಆರೋಗ್ಯ ನಿರ್ವಾಹಕರ ಪಾತ್ರ, ಎ.ಜೆ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನ ಸಮುದಾಯ ಔಷಧ ವಿಭಾಗದ ಡಾ. ಪ್ರದೀಪ್ ಸೇನಾಪತಿ ಅವರು ಹೆಲ್ತ್ಕೇರ್ ಇಂಡಸ್ಟ್ರಿ ದಿ ಫ್ಲ್ಯಾಗ್ ಬೇರರ್ಸ್, ಫೋರ್‌ರನ್ನರ್ಸ್ ವಿಷಯದ ಕುರಿತು ಮಾತಾನಾಡಿದರು.


ಮುಂಬೈನ ಇಂಪ್ರೆಶನ್ ಕನ್ಸಲ್ಟಿಂಗ್ ಸಂಸ್ಥೆಯ ಮ್ಯಾನೇಜಿಂಗ್ ಪಾರ್ಟನರ್, ಡಾ.ದಿಲೀಪ್ ಪಿಂಟೋರವರು ಆರೋಗ್ಯ ವೃತ್ತಿಪರರ ಕ್ಷೇಮ ಮತ್ತು ಸಾಂಸ್ಥಿಕ ಶಿಸ್ತಿನ ಬಗ್ಗೆ ಕಾರ್ಯಗಾರ ನಡೆಸಿದರು.


ಕಾರ‍್ಯಕ್ರಮದಲ್ಲಿ ಕೇರಳ ಹಾಗೂ ಕರ್ನಾಟಕದ ಎಸ್ಟರ್ ಮಿಮ್ಸ್, ಸೈಂಟ್ ಜಾನ್ಸ್, ಪದ್ಮಾವತಿ, ನಿಟ್ಟೆ, ಎ.ಜೆ, ಯೆನಪೋಯಾ ಕಾಲೇಜುಗಳಿಂದ 340ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪೋಸ್ಟರ್ ಪ್ರಸೆಂಟೇಶನ್ ಸ್ಪರ್ಧೆಯಲ್ಲಿ ಎಜೆ ಇನ್ಸ್ಟಿಟ್ಯೂಟ್ ಆಫ್ ಹಾಸ್ಪಿಟಲ್ ಮ್ಯಾನೇಜ್ಮೆಂಟ್ ಪ್ರಥಮ ಬಹುಮಾನ, ಯನಪೋಯಾ ಕಾಲೇಜು ದ್ವಿತೀಯ ಬಹುಮಾನ ಪಡೆದುಕೊಂಡಿತು.


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಡಾ ಹನಾ ಶೆಟ್ಟಿ, ಆಳ್ವಾಸ್ ಕಾಲೇಜ್ ಆಫ್ ಆಲೈಡ್ ಹೆಲ್ತ್ ಸೈನ್ಸಸ್ ಕಾಲೇಜಿನ ಪ್ರಾಚಾರ‍್ಯ ಡಾ ಶಂಕರ್ ಶೆಟ್ಟಿ, ಹಾಸ್ಪಿಟಲ್ ಆಡ್ಮಿನ್‌ಸ್ಟ್ರೇಶನ್ ವಿಭಾಗದ ಮುಖ್ಯಸ್ಥ ಆದರ್ಶ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅಲ್‌ನಾಝ್, ಡ್ಯಾನಿ ಜೋಸೆಫ್ ಕಾರ‍್ಯಕ್ರಮ ನಿರ್ವಹಿಸಿ, ಸಹಾಯಕ ಪ್ರಾಧ್ಯಾಪಕಿ ಅನುಷಾ ಶೆಟ್ಟಿ ಸ್ವಾಗತಿಸಿ, ಹಾಸ್ಪಿಟಲ್ ಆಡ್ಮಿನ್‌ಸ್ಟ್ರೇಶನ್ ವಿಭಾಗದ ಮುಖ್ಯಸ್ಥ ಆದರ್ಶ ಹೆಗ್ಡೆ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top