ಕಡಬ : ಕುಟ್ರುಪ್ಪಾಡಿ ಲಕ್ಷ್ಮೀ ಜನಾರ್ಧನ ಯುವಕ ಮಂಡಲ ಕೇಪು ಇದರ ಆಶ್ರಯದಲ್ಲಿ ದೀಪಾವಳಿ ಪ್ರಯುಕ್ತ ಹಿಂದೂ ಬಾಂಧವರ ರಾಜ್ಯಮಟ್ಟದ ಹಗ್ಗಜಗ್ಗಾಟ ಮತ್ತು ಕೆಸರು ಗದ್ದೆ ಕ್ರೀಡಾಕೂಟ ಅಕ್ಟೋಬರ್ 30 ರವಿವಾರ ಬೆಳಿಗ್ಗೆ 9ರಿಂದ ಕೇಪು ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನ ವಠಾರದಲ್ಲಿ ಜರಗಲಿದೆ.
ಮಹಿಳೆಯರ ಹಗ್ಗಜಗ್ಗಾಟ, 510 ಕೆ.ಜಿ.ಯ ಪುರುಷರ ಹಗ್ಗಜಗ್ಗಾಟ ಪ್ರಧಾನ ಆಕರ್ಷಣೆಯಾಗಲಿದ್ದು, ಸ್ಪರ್ಧಿಗಳಿಗೆ ಪ್ರವೇಶ ಶುಲ್ಕವಿರಲಿದೆ. ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಆಟೋಟ ಸ್ಪರ್ಧೆಗಳು ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪ್ರಕಟಣೆ ತಿಳಿಸಿದೆ.