ಉಜಿರೆ: ಶ್ರೀ. ಧ. ಮಂ.ಕಾಲೇಜಿನ ಇಬ್ಬರು ಪ್ರಾಧ್ಯಾಪಕರ ಬರಹಗಳು ಬೆಂಗಳೂರು ವಿಶ್ವ ವಿದ್ಯಾನಿಲಯದ ಪದವಿ ಪಠ್ಯ ಪುಸ್ತಕಕ್ಕೆ ಆಯ್ಕೆಯಾಗಿದೆ.
ಪದವಿ ಕಾಲೇಜಿನ ಉಪ ಪ್ರಾಂಶುಪಾಲ ಹಾಗೂ ಅರ್ಥಶಾಸ್ತ್ರದ ವಿಭಾಗದ ಮುಖ್ಯಸ್ಥರಾದ ಡಾ. ಎ.ಜಯಕುಮಾರ್ ಶೆಟ್ಟಿ ಅವರ ‘ಮಹಿಳಾ ಸಶಕ್ತೀಕರಣದ ಹೆಜ್ಜೆಗಳನ್ನು ಗಟ್ಟಿಗೊಳಿಸಬೇಕಿದೆ’ ಎಂಬ ಬರಹವು ಪದವಿಯ ಕಲಾವಿಭಾಗದ ಪಠ್ಯ ಪುಸ್ತಕ್ಕೆ ಸ್ವೀಕೃತಗೊಂಡಿದೆ. ಈ ಬರಹವು ಉದಯವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು.
ಸ್ನಾತಕೋತ್ತರ ವಿಭಾಗದ ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕ ಡಾ. ಎನ್. ಕೆ.ಪದ್ಮನಾಭ್ರವರ ‘ಅಹಿಂಸೆ: ಎಂದಿಗೂ ಬತ್ತದ ನದಿಯ ನಿನಾದ’ ಎಂಬ ಬರಹವು ಕನ್ನಡ ವಿಭಾಗದ ಪಠ್ಯಕ್ಕೆ ಆಯ್ಕೆಯಾಗಿದೆ.
ಈ ಮೊದಲು ಕೂಡ ಇಬ್ಬರು ಪ್ರಾಧ್ಯಾಪಕರ ಹಲವಾರು ಬರಹಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದವು. ಈ ಬಗ್ಗೆ ಕಾಲೇಜಿನ ಆಡಳಿತ ಮಂಡಳಿಯು ಪ್ರಾಧ್ಯಾಪಕರಿಗೆ ಶುಭಕೋರಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ