ಯಕ್ಷತೂಣೀರ ಸಂಪ್ರತಿಷ್ಠಾನ- ಅಭಿನಂದನಾ ಕಾರ್ಯಕ್ರಮ

Upayuktha
0

ಕಾಸರಗೋಡು: ಯಕ್ಷತೂಣೀರ ಸಂಪ್ರತಿಷ್ಥಾನ ಕೋಟೂರು ಇದರ ಅಂಗಸಂಸ್ಥೆಯಾದ ಯಕ್ಷಬಳಗ ಮುಳಿಯಾರು ಇದರ ಸದಸ್ಯರಾದ ಪ್ರತಿಭಾನ್ವಿತ ವಿದ್ಯಾಥಿಗಳನ್ನು ಅಭಿನಂದಿಸಲಾಯಿತು. 

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಾದ ವಿಷ್ಣು ಯಂ ಮೂಡುಬಿದಿರೆ ಆಳ್ವಾಸ್ ಕಾಲೇಜ್, ಮನೀಶ್ ಕೆ, ಜಿ ವಿ ಯಚ್ ಯಸ್ ಯಸ್ ಕಾರಡ್ಕ, ದೀಕ್ಷಾ ಎ, ಎನ್ಎಚ್ ಎಸ್ ಎಸ್ ಪೆರಡಾಲ, ಕವನ ಕೆ, ಯಸ್ ಎ ಪಿ ಎಚ್ ಎಸ್ಎಸ್ ಅಗಲ್ಪಾಡಿ, ಪಿ ಯು ಸಿ ವಿದ್ಯಾರ್ಥಿನಿ ಸ್ತುತಿ ಕೆ, ಅಂಬಿಕಾ ಕಾಲೇಜ್ ಪುತ್ತೂರು ಇವರನ್ನು ಶಾಲು ಹೊದೆಸಿ ಫಲ ಸ್ಮರಣಿಕೆಯನ್ನಿತ್ತು ಅಭಿನಂದಿಸಲಾಯಿತು.


ಸಭಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಭಟ್ ಕೆ ಅಧ್ಯಕ್ಷಸ್ಥಾನ ವಹಿಸಿದರು. ಗೋವಿಂದ ಬಳ್ಳಮೂಲೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಾ ಶಿವಕುಮಾರ್ ಅಡ್ಕ ಇವರು ಶುಭ ಹಾರೈಸಿದರು. ಸನ್ಮಾನಿತರಾದ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಹಂಚಿಕೊಂಡರು. ಕೃಷ್ಣ ಭಟ್ ಅಡ್ಕ ಸ್ವಾಗತಿಸಿ ಮುರಳಿ ಸ್ಕಂದ ಧನ್ಯವಾದವಿತ್ತರು.

ಪ್ರತಿಷ್ಠಾನದ ಸದಸ್ಯರಾದ ರಾಜೇಶ್ವರಿ ಈಶ್ವರ ಭಟ್ ಬಳ್ಳಮೂಲೆ, ವಿಜಯಲಕ್ಷ್ಮಿ ಸ್ಕಂದ, ಹರಿಕೃಷ್ಣ ಪೆರಡಂಜಿ ಉಪಸ್ಥಿತರಿದ್ದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top