ಉಜಿರೆ: ವಿದ್ಯಾರ್ಥಿ ದೆಸೆಯಲ್ಲಿಯೇ ದೇಶದ ಬಗ್ಗೆ ತಿಳಿಯುವ ಕಾರ್ಯ ಆಗಬೇಕಾಗಿದೆ. ಈ ಮೂಲಕ ದೇಶಭಕ್ತಿಯ ಪ್ರೇರಣೆ ಪಡೆದು ದೇಶದ ಬಗ್ಗೆ ಇನ್ನಷ್ಟು ಗೌರವ ಮೂಡುವಂತಾಗಬೇಕು. ಕಾರ್ಗಿಲ್ ಮುಂತಾದ ಯುದ್ಧಗಳಲ್ಲಿ ಅನೇಕ ಸೈನಿಕರ ಬಲಿದಾನಗಳಿಂದ ನಮ್ಮ ರಕ್ಷಣೆ ಸಾಧ್ಯವಾಗಿದೆ. ಈ ಮೂಲಕ ಅವರನ್ನು ಸ್ಮರಿಸುವ ಕಾರ್ಯ ನಿಜವಾಗಿಯೂ ದಿನವೂ ಆಗಬೇಕಾಗಿದೆ ಎಂದು ಭಾರತೀಯ ಸೇನೆಯ ನಿವೃತ್ತ ಯೋಧ ಪಿ. ಜಗನ್ನಾಥ ಶೆಟ್ಟಿ, ಉಜಿರೆ ಅವರು ಹೇಳಿದರು.
ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಆಯೋಜಿಸಿದ ಕಾರ್ಗಿಲ್ ವಿಜಯ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯ ಪ್ರೊ. ದಿನೇಶ ಚೌಟ ಅವರು ಅಧ್ಯಕ್ಷತೆ ವಹಿಸಿದ್ದರು. ಹಿಂದಿ ಭಾಷಾ ವಿಭಾಗದ ಮುಖ್ಯಸ್ಥ ನಾಗರಾಜ್ ಭಂಡಾರಿ ಅವರು ಶುಭಾಶಂಸನೆ ಮಾಡಿದರು. ಎನ್. ಎಸ್. ಎಸ್ ಯೋಜನಾಧಿಕಾರಿ ಚೇತನಾ ಕುಮಾರಿ ಉಪಸ್ಥಿತರಿದ್ದರು.
ವರ್ಷಿಣಿ ಸ್ವಾಗತಿಸಿ, ಇನ್ನೂಷ್ ಪರಿಚಯಿಸಿದರು. ಎನ್.ಎಸ್.ಎಸ್ ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ನಿರೂಪಿಸಿ, ಪದ್ಮಶ್ರೀ ವಂದಿಸಿದರು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق