ಮಂಗಳೂರು: ಮಂಗಳೂರು ಹವ್ಯಕ ಸಭಾ ವತಿಯಿಂದ ನಮ್ಮ ಸದಸ್ಯರು ಹಾಗೂ ಸಾರ್ವಜನಿಕರಿಗಾಗಿ ಶಂಕರಶ್ರೀ ಸಭಾಭವನದಲ್ಲಿ ಉಚಿತ ಯೋಗ ತರಬೇತಿಯನ್ನು ನೀಡುವ ಬಗ್ಗೆ ಕಾರ್ಯಕಾರಿಣಿ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಅದರಂತೆ ಮೇ 29ರಿಂದ ಶುರುವಾಗಿ ಪ್ರತಿ ಭಾನುವಾರ ಬೆಳಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ಈ ತರಬೇತಿ ನಡೆಯುವುದು.
ಶ್ರೀಯುತ ಶ್ಯಾಮ ಪ್ರಸಾದ್ ಮುದ್ರಜೆ, ಶ್ರೀಯುತ ಸರವು ರಮೇಶ್ ಭಟ್, ಶ್ರೀಯುತ ಕೇಶವ ನಂದೋಡಿ, ಶ್ರೀಯುತ ಸುಬ್ರಮಣ್ಯ ಭಟ್ ಕಾಟಿಪಳ್ಳ, ಮುಂತಾದವರು ತರಬೇತಿಯನ್ನು ನೀಡಲಿದ್ದಾರೆ. ಈ ತರಬೇತಿಯಲ್ಲಿ ಪ್ರಾಣಾಯಾಮ ಹಾಗೂ ಕೆಲವು ಸರಳ ಆಸನಗಳು ಹೇಳಿಕೊಡಲಾಗುವುದು.
ಜೂನ್ 21ರಂದು ನಡೆಯುವ ವಿಶ್ವ ಯೋಗ ದಿನಾಚರಣೆಯಂದು ನಾವೆಲ್ಲರೂ ಪಾಲ್ಗೊಂಡು ನಮ್ಮತನವನ್ನು ಉಳಿಸಿಕೊಳ್ಳೋಣ. ಮಂಗಳೂರು ಹವ್ಯಕ ಸಭಾದ ಸದಸ್ಯರು ಮತ್ತು ಸಾರ್ವಜನಿಕರು ಕಾರ್ಯಕ್ರಮದ ಸದುಪಯೋಗ ಪಡೆದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಂಘಟಕರು ಕೋರಿದ್ದಾರೆ. ಇದಕ್ಕೆ ಯಾವುದೇ ರೀತಿಯ ವಯೋಮಿತಿ ಇರುವುದಿಲ್ಲ. ಗಂಡಸರು, ಹೆಂಗಸರು, ಮಕ್ಕಳು ಎಲ್ಲರೂ ಭಾಗವಹಿಸಬಹುದು.