ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ: 2021ನೇ ಸಾಲಿನ ಗೌರವ ಪ್ರಶಸ್ತಿ, ಪುಸ್ತಕ ಪುರಸ್ಕಾರ ಪ್ರಕಟ

Upayuktha
0


 ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ 2021ನೇ ಸಾಲಿನ ಗೌರವ ಪ್ರಶಸ್ತಿ, ಪುಸ್ತಕ ಪುರಸ್ಕಾರಗಳನ್ನು ಪ್ರಕಟಿಸಿದೆ. ಕೊಂಕಣಿ ಸಾಹಿತ್ಯ ಪ್ರಶಸ್ತಿಗೆ ನಾಗೇಶ್‌ ಅಣ್ವೇಕರ್‌ ಹಾಗೂ ಕೊಂಕಣಿ ಕಲೆ ಪ್ರಶಸ್ತಿಗೆ ದಿನೆಶ್ ಪ್ರಭು ಕಲ್ಲೊಟ್ಟೆ ಅವರನ್ನು ಅಯ್ಕೆ ಮಾಡಲಾಗಿದೆ. ಮಾಧವ ಖಾರ್ವಿ ಅವರಿಗೆ ಕೊಂಕಣಿ ಜಾನಪದ ಪ್ರಶಸ್ತಿ, ಫಾದರ್ ಜೊವಿನ್ ವಿಶ್ವಾಸ್‌ ಸಿಕ್ವೇರಾ ಅವರಿಗೆ ಕೊಂಕಣಿ ಕವನ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ.

ಕೊಂಕಣಿ ಸಣ್ಣ ಕತೆಗಳು ಪುಸ್ತಕ ಬಹುಮಾನಕ್ಕೆ ಗೋಪಾಲಕೃಷ್ಣ ಪೈ ಅವರ ಲವ್‌ಲೆಟರ್ಸ್‌ ವಾಜ್ಜಿತಾಲೊ ಮ್ಹಾಂತಾರೊ ಸಂಕಲನವನ್ನು ಆಯ್ಕೆ ಮಾಡಲಾಗಿದೆ. ಎಚ್ಚೆಮ್ ಪೆರ್ನಾಲ್ ಅವರ 'ರುಪಾಂ ಆನಿ ರೂಪಕಾಂ'  ಕೊಂಕಣಿ ಲೇಖನಗಳ ಸಂಕಲನ ಕೃತಿಯೂ ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿದೆ.

2021ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪುರಸ್ಕಾರ ಪ್ರದಾನ ಕಾರ್ಯಕ್ರಮ ಮಾ.27ರಂದು ಕುಮಟಾದ, ಮಹಾಲಸಾ ನಾರಾಯಣಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ. ಇಂಧನ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಚಿವರಾದ ವಿ. ಸುನಿಲ್‌ ಕುಮಾರ್‌ ಪ್ರಶಸ್ತಿ ಪ್ರದಾನ ಮಾಡಲಿರುವರು. ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕುಮಟಾ ಹೊನ್ನಾವರ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು.

ಕೊಂಕಣಿ ಸಾಹಿತ್ಯ ಅಕಾಡೆಮಿಯು ಆಯೋಜಿಸಿದ ಕೊಂಕಣಿ ಲಿಟ್‌ಫೆಸ್ಟ್‌ ಕಾರ್ಯಕ್ರಮವು ವಿಶ್ವ ಕೊಂಕಣಿ ಕೇಂದ್ರ,ಶಕ್ತಿನಗರ, ಮಂಗಳೂರು ಇವರ ಸಹಯೋಗದಲ್ಲಿ ಮಾರ್ಚ್‌ 19ರಂದು ಮಂಗಳೂರಿನಲ್ಲಿ ಜರುಗಲಿದೆ.


hit counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top