ಎರಡು ಅತ್ಯುತ್ತಮ ಚಿತ್ರಗಳನ್ನು ನಿರ್ದೇಶಿಸಿ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಿರುವ ಅಶೋಕ್. ಕೆ.ಎಸ್

Upayuktha
0

ನಮ್ಮ ಜ್ಞಾನವನ್ನು ಮತ್ತು ಮನಸಲ್ಲಿರುವ ಆತ್ಮವಿಶ್ವಾಸವನ್ನು ನಂಬಿದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂದು ಹೇಳುವುದಕ್ಕೆ ಉತ್ತಮ ಉದಾಹರಣೆ, ಕನ್ನಡ ಚಿತ್ರರಂಗವೇ ಮೆಚ್ಚಿಕೊಂಡಿರುವ ನೈಜ ಘಟನೆಯಾಧಾರಿತ 6-5=2 ಮತ್ತು ಅತ್ಯುತ್ತಮವಾದ, ಅರ್ಥಪೂರ್ಣವಾದ ದಿಯಾ ಚಿತ್ರದ ನಿರ್ದೇಶಕರಾದ ಅಶೋಕ್ ಇವರು ಮಂಡ್ಯದ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ಸ್ವಾಮಿ ಮತ್ತು ಲಕ್ಷ್ಮಿ ದಂಪತಿಗಳ ಸುಪುತ್ರ.


ಇವರು ಪ್ರಾಥಮಿಕ ಶಿಕ್ಷಣವನ್ನು ಕ್ಯಾತನಹಳ್ಳಿ ಗೌತಮ ಕಾನ್ವೆಂಟ್ ನಲ್ಲಿ ಕಲಿತು ನಂತರ ಪ್ರೌಢ ಶಿಕ್ಷಣ ಮತ್ತು ಪದವಿಪೂರ್ವ ಶಿಕ್ಷಣವನ್ನು ಮಂಡ್ಯದಲ್ಲಿ ನವೋದಯ ಶಾಲೆಯಲ್ಲಿ ಪಡೆದು, ಇಂಜಿನಿಯರಿಂಗ್ ಅನ್ನು ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಕಾಲೇಜಿನಲ್ಲಿ ಪೂರೈಸಿದ್ದರು.


ಇಂಜಿನಿಯರಿಂಗ್ ಮುಗಿಸಿ ಬೇರೆ ಬೇರೆ ಕಡೆಗಳಲ್ಲಿ ಕೆಲಸ ಮಾಡಿ ಸಿಟಿಬ್ಯಾಂಕ್ ನಲ್ಲಿ ಮೂರು ವರ್ಷ ಸೇವೆ ಸಲ್ಲಿಸಿ ನಂತರದಲ್ಲಿ ಸಿನಿಮಾಕ್ಕೆ ಸಂಬಂಧಪಟ್ಟಂತ ಹೆಚ್ಚಿನ ವಿಷಯಗಳನ್ನು ಚೆನ್ನೈನಲ್ಲಿ ಕಲಿತು, ಆನಂತರ ಬೆಂಗಳೂರಿಗೆ ಬಂದು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಐದು ವರ್ಷಗಳ ಕಾಲ ಕಾರ್ಯನಿರ್ವಹಿಸಿರುತ್ತಾರೆ.


ಚಿಕ್ಕಂದಿನಿಂದಲೂ ಸಿನಿಮಾದ ಮೇಲೆ ಹೆಚ್ಚು ಆಸಕ್ತಿ ಹೊಂದಿದ ಇವರು ಶಟಲ್ ಬ್ಯಾಡ್ಮಿಂಟನ್ ನಲ್ಲಿ ಎತ್ತಿದ ಕೈ. ತನ್ನ ಬಿಡುವಿನ ಸಮಯದಲ್ಲಿ ಸ್ಪೂರ್ತಿದಾಯಕ ಪುಸ್ತಕಗಳನ್ನು ಓದುವ ಅಭ್ಯಾಸ ಇವರದು.


ಎರಡು ಅದ್ಭುತ ಸಿನಿಮಾದ ಮೂಲಕವೇ ಕರುನಾಡ ಜನತೆಯ ಮನದಲ್ಲಿ ಚಿರಪರಿಚಿತರಾದವರು 2013ರಲ್ಲಿ 6-5=2ಎಂಬ ನೈಜ ಘಟನೆ ಮೂಲಕ ತಮ್ಮ ನಿರ್ದೇಶನ ಜೀವನವನ್ನು ಆರಂಭಿಸಿದರು ತನ್ನ ಮೊದಲ ಚಿತ್ರದಲ್ಲಿ ಯಶಸ್ವಿಯಾದದ್ದು ಮಾತ್ರವಲ್ಲದೆ ಹಲವು ಜನರಿಂದ ಪ್ರಶಂಸೆ ಗಳಿಸಿಕೊಂಡರು.


ಅಶೋಕ ಅವರ ನಿರ್ದೇಶನದಲ್ಲಿ ಮೂಡಿಬಂದ ಮತ್ತೊಂದು ಚಿತ್ರ ದಿಯಾ ಇದು ಹೊಸಬರ ಹೊಸತನದ ಚಿತ್ರವಾಗಿದೆ ಅದ್ಭುತವಾದ ಅರ್ಥಪೂರ್ಣವಾದ ರೋಮ್ಯಾಂಟಿಕ್ ಚಿತ್ರವಾಗಿದ್ದು ಇಂದು ಅಪಾರ ಜನಮನ್ನಣೆ ಗಳಿಸಿ ಯುವ ಮನಸ್ಸುಗಳನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿ ಸಿನಿಮಾ ಲೋಕದಲ್ಲಿ ಹೊಸ ಛಾಪನ್ನು ಮೂಡಿಸುತ್ತಿದೆ.


ಎಲ್ಲ ರೋಮ್ಯಾಂಟಿಕ್ ಸಿನಿಮಾದಲ್ಲಿ ಹಾಡುಗಳು ಪ್ರಮುಖ ಪಾತ್ರವಹಿಸುತ್ತದೆ. ಆದರೆ ದಿಯಾ ಯಾವುದೇ ಹಾಡುಗಳನ್ನು ಹೊಂದಿರದೆ ಹೊಸತನಕ್ಕೆ ಸಾಕ್ಷಿಯಾಗಿದೆ ಮಾತ್ರವಲ್ಲದೆ ಕನ್ನಡ ಚಿತ್ರರಂಗದಲ್ಲಿ ಹೊಸತನದ ಚಿತ್ರಕ್ಕೆ ಮುನ್ನುಡಿ ಬರೆದಂತಿದೆ.


ಇವರ ನಿರ್ದೇಶನದ ಬತ್ತಳಿಕೆಯಿಂದ ಇನ್ನಷ್ಟು ಚಿತ್ರಗಳು ಮೂಡಿ ಬರುವಂತಾಗಲಿ ಇವರ ಕೊಡುಗೆಯಿಂದ ಕನ್ನಡ ಚಿತ್ರರಂಗ ಇನ್ನಷ್ಟು ಎತ್ತರಕ್ಕೆ ಬೆಳೆಯುವಂತ ಆಗಲಿ ಎಂದು ಆಶಿಸೋಣ.


"ನಾವುಗಳು ಏನೇ ಸಾಧನೆ ಮಾಡುವ ಮೊದಲು ಉತ್ತಮ ಮನುಷ್ಯರಾಗಿ ಸಮಾಜಕ್ಕೆ ಒಂದು ಮಾದರಿಯಾಗಬೇಕು ನಮ್ಮ ಧನಾತ್ಮಕ ಚಿಂತನೆಗಳು ಮತ್ತು ಕಠಿಣ ಪರಿಶ್ರಮ ಮಾತ್ರ ನಮ್ಮನ್ನು ಸಾಧನೆಯ ಶಿಖರದತ್ತ ಕೊಂಡೊಯ್ಯಬಹುದು" ಎನ್ನುತ್ತಾರೆ ನಿರ್ದೇಶಕರಾದ ಅಶೋಕ್.


-ಸಂದೀಪ್ ಎಸ್ ಮಂಚಿಕಟ್ಟೆ

ತೃತೀಯ ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಕಾಲೇಜು ಪುತ್ತೂರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top