ಪುತ್ತೂರು: ಶಿವರಾತ್ರಿ ಪ್ರಯುಕ್ತ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ಹಾಗೂ ಸಮುದಾಯ ಬಾನುಲಿ ರೇಡಿಯೋ ಪಾಂಚಜನ್ಯದ ನೇತೃತ್ವದಲ್ಲಿ ಮಹಾಶಿವನ ಕುರಿತಾದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಫೆಬ್ರವರಿ 27ರಂದು ಆನ್ಲೈನ್ ವೇದಿಕೆ ಮೂಲಕ ಆಯೋಜಿಸಲಾಗಿದೆ.
ಬೆಳಗ್ಗೆ 9:30ರಿಂದ ಶಿವಾರಾಧನಾ ಶ್ಲೋಕಗಳು (ಪ್ರತಿಯೊಬ್ಬ ಸ್ಪರ್ಧಿಗೆ 2 ನಿಮಿಷದ ಅವಧಿ) ಎಲ್ಕೆಜಿ ಯಿಂದ 2ನೇ ತರಗತಿ ವರೆಗೆ ಹಾಗೂ 3ನೇ ತರಗತಿಯಿಂದ 7ನೇ ತರಗತಿ ವರೆಗೆ- ಎರಡು ವಿಭಾಗಗಳಲ್ಲಿ ನಡೆಯಲಿದೆ.
ಶಿವ ಭಕ್ತಿ ಗೀತಾ ಗಾಯನ ಸ್ಪರ್ಧೆ- 1ರಿಂದ 4ನೇ ತರಗತಿ ವರೆಗೆ (3 ನಿಮಿಷಗಳ ಅವಧಿ), ಶಿವ ಕಥೆ ವಾಚನ- 5ರಿಂದ 10ನೇ ತರಗತಿ ವರೆಗೆ (5 ನಿಮಿಷ ಅವಧಿ) ಏರ್ಪಡಿಸಲಾಗಿದೆ.
ಮಾರ್ಚ್ 1ರಂದು ಬೆಳಗ್ಗೆ 9:30ರಿಂದ ಛದ್ಮ ವೇಷ ಸ್ಪ್ರರ್ಧೆ (ಶಿವನ ವಿವಿಧ ರೂಪಗಳು) ದೇವಸ್ಥಾನದ ರಾಜಾಂಗಣದಲ್ಲಿ ನಡೆಯಲಿದೆ.
ಬಾಲಶಿವ, ನಟರಾಜ/ ತಾಂಡವ ಶಿವ, ಯೋಗಿ ಶಿವ, ರೌದ್ರಾವತಾರಿ ಶಿವ- 1ರಿಂದ 4ನೇ ತರಗತಿ ವರೆಗಿನ ಮಕ್ಕಳು ಹಾಗೂ 5ರಿಂದ 10ನೇ ತರಗತಿ ವರೆಗಿನ ಮಕ್ಕಳು- ಹೀಗೆ ಎರಡು ವಿಭಾಗಗಳಲ್ಲಿ ಈ ಸ್ಪರ್ಧೆ ನಡೆಯುತ್ತದೆ. ಪ್ರತಿಯೊಬ್ಬ ಸ್ಪರ್ಧಿಗೆ ಗರಿಷ್ಠ ಒಂದೂವರೆ ನಿಮಿಷದ ಕಾಲಾವಧಿ ನಿಗದಿಪಡಿಸಲಾಗಿದೆ.
ಮುಳಿಯ ಫೌಂಡೇಶನ್, ದ ವೆಬ್ ಪೀಪಲ್, ನಿವೃತ್ತ ನೌಕರರ ಸಂಘದ ಸಹಯೋಗದಲ್ಲಿ ಈ ಎಲ್ಲಾ ಸ್ಪರ್ಧೆಗಳು ನಡೆಯಲಿವೆ.
ಆಸಕ್ತ ಸ್ಪರ್ಧಿಗಳು ಹೆಸರು ನೋಂದಾಯಿಸಿಕೊಳ್ಳಲು ಫೆ.25 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ: 9353030916, 8494915916, 8050809885- ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ