ಲೇಖಕರು- ಪ್ರಸನ್ನಾ ವಿ ಚೆಕ್ಕೆಮನೆ
ಪ್ರಕಾಶಕರು: ಅಪರಂಜಿ ಪ್ರಕಾಶನ, ಚಿಕ್ಕಮಗಳೂರು
ಪುಟಗಳು: 180
ಕಥೆಯೆಂದರೆ ಸಾಮಾನ್ಯವಾದುದಲ್ಲ, ಅದು ಸಾಹಿತ್ಯ ಸಾಗರದ ಒಂದು ಅಣಿಮುತ್ತು. ಜೀವನಾನುಭವಗಳೇ ಕಥೆಗಳ ಜೀವಾಳವಾಗಿದ್ದರೆ ಆ ಕಥೆ ಓದುಗನನ್ನು ಓದಿಸಿಕೊಂಡು ಹೋಗುತ್ತದೆ. ಮತ್ತು ಆತನ ಹೃನ್ಮನಗಳನ್ನು ಮುದಗೊಳಿಸುತ್ತದೆ. ಪ್ರಸನ್ನಾ ವಿ ಚೆಕ್ಕೆಮನೆ ಅವರು ಕಾಸರಗೋಡಿನ ಭರವಸೆಯ ಸಾಹಿತಿ. ಈಗಾಗಲೇ ಇವರು "ಇನಿದನಿ", ಎಂಬ ಕವನ ಸಂಕಲನವನ್ನು ಬಿಡುಗಡೆ ಮಾಡಿದ್ದಾರೆ. "ಮನದ ಮಲ್ಲಿಗೆ" ಹಾಗೂ "ಕರಿಮಣಿ ಮಾಲೆ" ಎಂಬೆರಡು ಕೃತಿಗಳು ಪ್ರಕಟಿಸಲ್ಪಟ್ಟ ಕೃತಿಗಳು. ಇತ್ತೀಚೆಗಷ್ಟೇ ಬರೆಯುವತ್ತ ಮನ ಮಾಡಿದ ಇವರು ಎರಡು ಕಾದಂಬರಿಗಳನ್ನು ಬರೆದು ಮುಗಿಸಿದ್ದಾರೆ. ಇನ್ನೊಂದು ಕಾದಂಬರಿ ಅಂತಿಮ ಘಟ್ಟದಲ್ಲಿದೆ.
ನೀಲಾಂಬರಿ- ಎಂದರೇನು?
ನೀಲಾಂಬರಿ ಎಂದರೆ ಒಂದು ರಾಗದ ಹೆಸರು. ನೀಲ ಬಣ್ಣದ ಬಟ್ಟೆ ಧರಿಸಿದವಳು ಎಂಬುದಾಗಿಯೂ ವ್ಯಾಖ್ಯಾನ ಮಾಡಬಹುದು. ನೀಲಾಂಬರಿ ಪುಸ್ತಕದ ಶೀರ್ಷಿಕೆಯೇ ಒಂದು ಕಥೆಯ ರೂಪದಲ್ಲಿ ಇದೆ. ಏನಿದು ನೀಲಾಂಬರಿ ಎಂದು ಪುಸ್ತಕದ ಒಳ ತೆಗೆದು ಓದಿ ಬಿಡುತ್ತೇನೆ ಎಂದು ಓದಿಸುವಂತಿದೆ. ಲೇಖಕರ ಪುಸ್ತಕದಲ್ಲಿ ಒಟ್ಟು 24 ಕಥೆಗಳಿವೆ. ಒಂದಕ್ಕಿಂತ ಒಂದು ಕುತೂಹಲಕಾರಿಯಾಗಿದೆ. ಎಲ್ಲಾ ಕಥೆಗಳೂ ಓದಿಸಿಕೊಂಡು ಹೋಗುವಂತಿದೆ. ಲೇಖಕರು ಬರೆದ ಅಪೂರ್ವ ಕಥೆ ಬಹಳ ಚೆನ್ನಾಗಿದೆ. ಅಪೂರ್ವ ಎಂಬ ಹೆಸರಿನ ಹುಡುಗಿಯ ಕಥೆಯನ್ನು ಅವರು ಈ ಕಥೆಯ ಮೂಲಕ ತಿಳಿಸುತ್ತಾ ಹೋಗುತ್ತಾರೆ ಲೇಖಕರು. ಬಹಳ ಉತ್ತಮ ರೀತಿಯಲ್ಲಿ ಕಥೆಯನ್ನು ಮುಂದುವರಿಸಿದ್ದಾರೆ. ನನಗೆ ಅವರ ಬರವಣಿಗೆ ಶೈಲಿ ಎಲ್ಲಾ ರೀತಿಯಲ್ಲಿ ನೋಡಿದರೆ ಉತ್ತಮವಾಗಿದೆ ಎಂದೆನಿಸಿತು. ಇಲ್ಲಿರುವ ಎಲ್ಲಾ ಕಥೆಗಳೂ ಒಂದಲ್ಲ ಒಂದು ಗಾದೆಮಾತನ್ನೋ ನುಡಿಮುತ್ತುಗಳನ್ನೋ ನೆನಪಿಸುವಂತಿದೆ.
ಕನ್ನಡಕ್ಕೆ ಕಥೆಗಳ ಮೂಲಕ ಅಮೂಲ್ಯ ಕೊಡುಗೆಯನ್ನಿತ್ತ ಲೇಖಕಿಗೆ ನಾವು ನಮಿಸಲೇ ಬೇಕು. ಇದಕ್ಕಿಂತಲೂ ಮಿಗಿಲಾಗಿರುವ ಕಥೆಗಳು ಅವರ ಲೇಖನಿಯಲ್ಲಿ ಮೂಡಿಬರಲಿ ಎಂದು ನಾವು ಹಾರೈಸೋಣ.
- ಕಾರ್ತಿಕ್ ಕುಮಾರ್. ಕೆ
ದುರ್ಗಾನಿಲಯ ಕಡೆಕಲ್ಲು ಏತಡ್ಕ
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ